ಬ್ಯಾಟು ಬೀಸಲು ಕಲಿತ ಬೌರೆಲ್ ಪರಿಸರಕ್ಕೆ ಬ್ರಾಡ್ಮನ್ ಚಿತಾಭಸ್ಮ
ಸಿಡ್ನಿ : ಕಳೆದ ಫೆಬ್ರವರಿ 25 ರಂದು ನಿಧನರಾದ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಸರ್ ಡೊನಾಲ್ಡ್ ಬ್ರಾಡ್ಮನ್ರ ಚಿತಾಭಸ್ಮವನ್ನು ಬೌರಲ್ನಲ್ಲಿ ವಿಸರ್ಜಿಸಲಾಯಿತು. ಬ್ರಾಡ್ಮನ್ ಬಾಲ್ಯ ಕಳೆದದ್ದು , ಕ್ರಿಕೆಟ್ ಬಗೆಗೆ ಎದೆಯಲ್ಲಿ ಕನಸುಗಳನ್ನು ಕಂಡದ್ದು ಬೌರಲ್ನಲ್ಲಿಯೇ. ಈ ನಂಟಿನ ಹಿನ್ನೆಲೆಯಲ್ಲಿ ಬೌರಲ್ನ ಪರಿಸರದಲ್ಲಿ ಕ್ರಿಕೆಟ್ ದಂತಕಥೆಯ ಚಿತಾಭಸ್ಮ ಬೆರೆಸಲಾಯಿತು.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಚಿತಾಭಸ್ಮವನ್ನು ಬೌರಲ್ನ ಪರಿಸರದಲ್ಲಿ ಸೇರಿಸುವ ಕ್ರಿಯೆ ನಡೆಯಿತು ಎಂದು ಬ್ರಾಡ್ಮನ್ ಫೌಂಡೇಶನ್ನ ನಿರ್ದೇಶಕ ರಿಚರ್ಡ್ ಮುಲ್ವಾನಿ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ.
1908 ರಲ್ಲಿ ನ್ಯೂ ಸೌತ್ ವೇಲ್ಸ್ನ ಕೂಟಮುಂದ್ರದಲ್ಲಿ ಜನಿಸಿದ ಬ್ರಾಡ್ಮನ್, ಬೆಳೆದದ್ದು ಸಿಡ್ನಿಯಿಂದ ವಾಯುವ್ಯಕ್ಕೆ 80 ಕಿಮೀ ದೂರದಲ್ಲಿರುವ ಬೌರೆಲ್ನಲ್ಲಿ . ಅಲ್ಲಿಯೇ ಬ್ಯಾಟು ಬೀಸಲು ಕಲಿತ ಅವರು, 1920 ರಲ್ಲಿ ಹೈಸ್ಕೂಲಿನ ದಿನಗಳಲ್ಲಿ ತಮ್ಮ ಮೊದಲ ಸೆಂಚುರಿಯನ್ನು ದಾಖಲಿಸಿದ್ದರು.
(ರಾಯ್ಟರ್ಸ್)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications