ನೂರು ಕೋಟಿಗೆ ಅಧಿಕೃತ ಮೊಹರು,ಮೇರಾ ಭಾರತ್ ಮಹಾನ್!
ನವದೆಹಲಿ : ಈವರೆಗೆ ಗಾಳಿಯಲ್ಲೇ ತೇಲುತ್ತಿದ್ದ ಭಾರತದ ಜನಸಂಖ್ಯೆ 100 ಕೋಟಿ ದಾಟಿರುವ ಸುದ್ದಿಗೀಗ ಅಧಿಕೃತ ಮೊಹರು ಬಿದ್ದಿದೆ. ಜನಗಣತಿ - 2001 ರ ಅಂಕಿಅಂಶಗಳು ಭಾರತದ ಜನಸಂಖ್ಯೆ 102 ಕೋಟಿ ಇರುವುದಾಗಿ ತಿಳಿಸಿವೆ. ಅಲ್ಲಿಗೆ ಇಡೀ ವಿಶ್ವದ ಜನಸಂಖ್ಯೆಯಲ್ಲಿ ಶೇ. 16.7 ಜನಸಂಖ್ಯೆ ಭಾರತದಲ್ಲೇ ಇದೆ ಎಂದಾಯಿತು . ಚೀನಾದ ನಂತರ ನೂರು ಕೋಟಿ ಜನಸಂಖ್ಯೆಯನ್ನು ದಾಖಲಿಸುತ್ತಿರುವ ಎರಡನೇ ರಾಷ್ಟ್ರ ನಮ್ಮದು. ಮೇರಾ ಭಾರತ್ ಮಹಾನ್ !
ಮಾರ್ಚ್ 1, 2001 ರ ವೇಳೆಗೆ ದೇಶದಲ್ಲಿದ್ದ ಒಟ್ಟು ಜನಸಂಖ್ಯೆ 1,027,015,247. ಇದರಲ್ಲಿ ಗಂಡಸರ ಸಂಖ್ಯೆ 531, 277,078 . ಮಹಿಳೆಯರ ಪಾಲು 495,738,169. ಈ ವಿಷಯವನ್ನು ಸೆನ್ಸಸ್ ಕಮೀಷನರ್ ಜೆ.ಕೆ. ಬಂಥಿಯಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
2001 ಸಾಲಿನ ಜನಗಣತಿ ಹೊರಗೆಡವಿರುವ ಅಂಶಗಳಲ್ಲಿ ಸಮಾಧಾನಕರವಾದುದೆಂದರೆ - ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಲಿಂಗ ಅನುಪಾತದ ಅಂತರ ಹಾಗೂ ಸಾಕ್ಷರತೆಯ ಪ್ರಮಾಣದಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ.
ಉತ್ತರ ಪ್ರದೇಶದ ನಿರಾಯಾಸ ಮುನ್ನಡೆ : ಯಥಾಪ್ರಕಾರ, ಅಧಿಕ ಜನಸಂಖ್ಯೆಯ ಅಗ್ರೇಸರ ರಾಜ್ಯವಾಗಿ ಉತ್ತರ ಪ್ರದೇಶ (ಶೇ. 16.17) ಮುಂದುವರಿದಿದೆ. ಎರಡು ಹಾಗೂ ಮೂರನೇ ಸ್ಥಾನಗಳು ಕ್ರಮವಾಗಿ ಮಹಾರಾಷ್ಟ್ರ (9.42) ಹಾಗೂ ಬಿಹಾರ್ (8.07)ಗೆ.
ಅತ್ಯಧಿಕ ಜನದಟ್ಟಣೆ ಹೊಂದಿರುವ ರಾಜ್ಯಗಳಲ್ಲಿ ಪ್ರತಿ ಚದರ ಕಿಮೀಗೆ 904 ಮಂದಿ ವಾಸಿಸುತ್ತಿರುವ ಪಶ್ಚಿಮ ಬಂಗಾಳ ಮುಂದಿದೆ. ನಂತರದ ಸ್ಥಾನ ಪ್ರತಿ ಚ.ಕಿಮೀಗೆ 880 ಮಂದಿ ವಾಸಿಸುತ್ತಿರುವ ಬಿಹಾರ್ಗೆ.
ಲೈಂಗಿಕ ಅನುಪಾತದ ಸಂಖ್ಯೆ 1991 ರ ಜನಗಣತಿ ಕಾಲಕ್ಕಿಂಥ ಸುಧಾರಿಸಿದೆ. 1991 ರಲ್ಲಿ ಸಾವಿರ ಪುರುಷರಿಗೆ ಪ್ರತಿಯಾಗಿ 927 ಮಹಿಳೆಯರಿದ್ದರೆ, ಈ ಸಲ ಆ ಸಂಖ್ಯೆ 933 ಕ್ಕೇರಿದೆ. 1991 ರಲ್ಲಿ ಶೇ. 52.21 ರಷ್ಟಿದ್ದ ಸಾಕ್ಷರತೆಯ ಪ್ರಮಾಣ, ಈ ಸಲ 65.38 ಕ್ಕೇರುವ ಮೂಲಕ ಶೇ. 13.17 ರ ಹೆಚ್ಚಳ ದಾಖಲಿಸಿದೆ. ಸಾಕ್ಷರತೆಯ ಸಂಖ್ಯೆ ಪುರುಷರಲ್ಲಿ 11.72 ರಷ್ಟಿದ್ದರೆ, ಮಹಿಳೆಯರಲ್ಲಿ 14.87 ರಷ್ಟಿದೆ. ಎಂದಿನಂತೆ ಸಾಕ್ಷರತೆಯಲ್ಲಿ ಮೊದಲ ಸ್ಥಾನ ಕೇರಳಕ್ಕೆ (ಶೇ. 90.92).
ಅಂದಹಾಗೆ, 2001 ರ ಜನಗಣತಿಯ ಅಂತಿಮ ಫಲಿತಾಂಶಗಳು ಇನ್ನೂ ಪೂರ್ಣವಾಗಿ ಪ್ರಕಟವಾಗಿಲ್ಲ . ದೇಶದ ಪ್ರಗತಿಯನ್ನು ನಿರ್ಣಯಿಸುವ ಈ ಫಲಿತಾಂಶಗಳು ಇನ್ನೂ 21 ತಿಂಗಳ ಕಾಲ ಹರಿದುಬರಲಿವೆ. ಯಾಕೆಂದರೆ, ಯಾವ್ಯಾವುದೋ ಮೂಲೆಗಳಲ್ಲಿರುವ (ರಸ್ತೆಗಳನ್ನು ಕಾಣದ) ಹಳ್ಳಿಗಳು ಕೂಡ ಜನಗಣತಿಯಲ್ಲಿ ಸೇರಬೇಕಿದೆ ಅಲ್ಲವಾ ?
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications