ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಳ್ಳಾರಿಯಲ್ಲಿ 25ರಿಂದ ಸೀತಾರಾಮ ವಸಂತ ನವರಾತ್ರಿ ಕಲ್ಯಾಣೋತ್ಸವ
ಹೊಸಪೇಟೆ : ರಾಮನವಮಿ ಹತ್ತಿರವಾಗುತ್ತಿರುವಂತೆಯೇ ಬಳ್ಳಾರಿ ನಗರದ ಶ್ರೀರಾಂಪುರ ಬಡಾವಣೆಯ ಶ್ರೀಸೀತಾರಾಮ ಲಕ್ಷ್ಮಣ ದೇಗುಲದಲ್ಲಿ ಯುಗಾದಿಯ ಮುನ್ನಾ ದಿನವಾದ ಮಾರ್ಚ್ 25ರಿಂದ ಏಪ್ರಿಲ್ ತಿಂಗಳ 2ನೇ ತಾರೀಕಿನವರೆಗೆ ವಸಂತ ನವರಾತ್ರಿ ಕಲ್ಯಾಣೋತ್ಸವ ಜರುಗಲಿದೆ.
ನವರಾತ್ರಿ ಉತ್ಸವದ ಒಂಬತ್ತು ದಿನವೂ ಪ್ರತಿದಿನ ಬೆಳಗ್ಗೆ ಪಂಚಾಮೃತ ಅಭಿಷೇಕ, ಸಹಸ್ರನಾಮ, ಮಹಾಮಂಗಳಾರತಿಯೇ ಮೊದಲಾದ ಧಾರ್ಮಿಕ ವಿಧಿಗಳು ಜರುಗಲಿವೆ. ರಾತ್ರಿ ಭಜನೆ ಕಾರ್ಯಕ್ರಮವೂ ಜರುಗಲಿದೆ. ಏಪ್ರಿಲ್ ಒಂದರಂದು ಹೊಸದಾಗಿ ನಿರ್ಮಿಸಲಾಗಿರುವ ಮುಖ್ಯ ಗೋಪುರ ಕಳಶ ಸ್ಥಾಪನೆ ಹಾಗೂ ಏ.2ರಂದು ಕಲ್ಯಾಣೋತ್ಸವ ಕಾರ್ಯಕ್ರಮ ಜರುಗಲಿದೆ.
ಈ ವಿಷಯವನ್ನು ಶ್ರೀ ಸೀತಾರಾಮ ಲಕ್ಷ್ಮಣ ಸ್ವಾಮಿ ದೇವಾಲಯದ ಉತ್ಸವ ಸಮಿತಿಯ ಸದಸ್ಯ ಬಿ. ಮಾರಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Story first published: Saturday, March 24, 2001, 5:30 [IST]