ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ವೃತ್ತಿಯಲ್ಲಿ ಯಶಸ್ಸು . ಆದರೆ ಸೃಜನಶೀಲ ಕೆಲಸಗಳಲ್ಲಿ ಹೆಜ್ಜೆ ಹೆಜ್ಜೆಗೂ ತೊಡರು. ಇಂಥಾ ಸಂದರ್ಭದಲ್ಲಿ ಕಚ್ಚಾ ವಸ್ತುಗಳ ಸಿದ್ಧತೆಯಲ್ಲಿ ತೊಡಗುವುದು ಜಾಣತನ.ವೃಷಭ : ಹೇಗೆ ನಡೆದರೂ ಯಶಸ್ಸು ಸಿಗುತ್ತದೆ ಎನ್ನುವ ಭ್ರಮೆ ಬೇಡ. ಯಾಕೆಂದರೆ ನಿಮ್ಮಿಂದ ಬೇರೆಯವರಿಗೆ ನೋವಾಗಿದೆ ಎಂದು ತಿಳಿದ ತಕ್ಷಣ ನೀವೂ ಬೇಜಾರು ಮಾಡಿಕೊಳ್ಳುತ್ತೀರಲ್ಲ.
ಮಿಥುನ : ವಿದ್ಯಾತುರಾಣಂ ನ ಸುಖ ನ ನಿದ್ರಃ ಅನ್ನುವ ಮಾತು ನೆನಪಿನಲ್ಲಿರಲಿ. ನೆಮ್ಮದಿಯ ದಿನಗಳು ಹೊಸಿತಿಲಲ್ಲೇ ಇವೆ. ಆವರೆಗೆ ಗಾಣ ಎಳೆಯಲು ಬೇಸರ ಪಟ್ಟರೆ ಹೇಗೆ.
ಕಟಕ : ಹೊಸ ವಾತಾವರಣ ನೋಡಿ ಸ್ವಲ್ಪ ಮುಜುಗರ ಪಟ್ಟುಕೊಂಡರೂ ನಿಧಾನಕ್ಕೆ ಎಲ್ಲವೂ ಸರಿ ಹೋಗುತ್ತದೆ. ಹೊಸ ಸ್ನೇಹಿತರನ್ನು ಸಂಪಾದಿಸುವಾಗ ಜಾಗರೂಕರಾಗಿರಿ.
ಸಿಂಹ : ಅಪ್ಪ ಅಮ್ಮ ಸ್ವಲ್ಪ ಗೊಣಗಿಕೊಳ್ಳಬಹುದು. ಅದು ನಿಮ್ಮ ಏಳಿಗೆಗೆ. ಕಂಕಣ ಬಲ ಇದೆ ಆದ್ದರಿಂದ ಅವರ ಗೊಣಗುವಿಕೆ ನಿಮಗೆ ಅಂತಹ ನಷ್ಟವನ್ನೇನೂ ತಾರದು.
ಕನ್ಯಾ : ಮನೆಯಲ್ಲಿ ಖರ್ಚು ಹೆಚ್ಚಾಗಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ಮಕ್ಕಳಿಂದ ಸಂತಸ ಸುದ್ದಿ ಬಂದಾಗ ಎಲ್ಲ ನೋವುಗಳು ಮಾಯವಾಗುತ್ತವೆ ಬಿಡಿ.
ತುಲಾ : ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದು ಒಳ್ಳೆಯದಲ್ಲ . ಹೊಸ ಅವಕಾಶಗಳೇನೊ ಸಾಕಷ್ಟಿವೆ. ಆ ನಿರೀಕ್ಷೆಗಳನ್ನು ನೀವು ತುಂಬ ಬಲ್ಲಿರಾ ಅನ್ನುವ ಆತ್ಮ ಪರೀಕ್ಷಣೆ ಒಳ್ಳೆಯದು.
ವೃಶ್ಚಿಕ : ಬಿಡುವಿಲ್ಲದ ಕೆಲಸದಿಂದ ರೋಸಿ ಹೋಗಿದ್ದರೂ, ಇನ್ನೊಂದು ಮಗ್ಗುಲಲ್ಲಿ ಆಗುತ್ತಿರುವ ಬೆಳವಣಿಗೆ ನಿಮ್ಮ ಮನಸ್ಸಿಗೆ ನೆಮ್ಮದಿ ತರಬಹುದು. ನೆರೆಹೊರೆಯವರು ಆಪದ್ಬಾಂಧವರಾದ್ದರಿಂದ ಹೆಚ್ಚು ಜಗಳಾಡಬಾರದು.
ಧನಸ್ಸು : ಲೆಕ್ಕಾಚಾರ ಮುಗಿಸಿ ಪ್ರಯಾಣಕ್ಕೆ ಸಿದ್ಧರಾಗಿ. ನಿಮ್ಮ ಬಾಡಿದ ಮುಖವನ್ನು ಮನೆಯವರು ಎದುರು ನೋಡುತ್ತಿದ್ದಾರೆ. ಆಪ್ತರೊಂದಿಗಿನ ಮುನಿಸು ಮುಗಿಸಿಬಿಡಿ.
ಮಕರ : ಕಡಿಮೆ ಮಾತು ಹೆಚ್ಚು ಕೆಲಸ ಅನ್ನು ವ ಧೋರಣೆಯಿಂದ ನಿಮ್ಮ ಅಭಿವೃದ್ಧಿಯಾಗುತ್ತದೆ. ಬಡ್ತಿಯ ನಿರೀಕ್ಷೆಯಲ್ಲಿದ್ದೀರಿ. ಕುಲದೇವರ ಆರಾಧನೆ ಶ್ರೇಯಸ್ಸು ತರಲಿದೆ.
ಕುಂಭ : ಧನಲಾಭವಿದೆ ಎಂದರೆ ಸರಿ ಹೋಗುವುದಿಲ್ಲ. ಹಿಂದೆ ಮಾಡಿದ ಜಾಣ ಕೆಲಸದಿಂದ ಈಗ ಲಾಭ ಬರಲಿದೆ. ಷೇರು, ಬ್ಯಾಂಕ್ ಅಂತ ಅಲೆದಾಟ ತಪ್ಪಿದ್ದಲ್ಲ.
ಮೀನ : ಪ್ರಪಂಚ ಹಾಗೆಲ್ಲಾ ಮುಳುಗಿ ಹೋಗುವುದಿಲ್ಲ ಎಂಬ ವಿಷಯವನ್ನು ನಿಮಗೆ ಮನದಟ್ಟು ಮಾಡಿಸುವುದು ತುಂಬಾ ಕಷ್ಟ. ಏನಿದ್ದರೂ ಲಾಸ್ ನಿಮಗೇ ಆದ್ದರಿಂದ ಎಚ್ಚರವಾಗಿರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications