ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಹೇಗೆ ನಡೆದರೂ ಯಶಸ್ಸು ಸಿಗುತ್ತದೆ ಎನ್ನುವ ಭ್ರಮೆ ಬೇಡ. ಯಾಕೆಂದರೆ ನಿಮ್ಮಿಂದ ಬೇರೆಯವರಿಗೆ ನೋವಾಗಿದೆ ಎಂದು ತಿಳಿದ ತಕ್ಷಣ ನೀವೂ ಬೇಜಾರು ಮಾಡಿಕೊಳ್ಳುತ್ತೀರಲ್ಲ.
ಮಿಥುನ : ವಿದ್ಯಾತುರಾಣಂ ನ ಸುಖ ನ ನಿದ್ರಃ ಅನ್ನುವ ಮಾತು ನೆನಪಿನಲ್ಲಿರಲಿ. ನೆಮ್ಮದಿಯ ದಿನಗಳು ಹೊಸಿತಿಲಲ್ಲೇ ಇವೆ. ಆವರೆಗೆ ಗಾಣ ಎಳೆಯಲು ಬೇಸರ ಪಟ್ಟರೆ ಹೇಗೆ.
ಕಟಕ : ಹೊಸ ವಾತಾವರಣ ನೋಡಿ ಸ್ವಲ್ಪ ಮುಜುಗರ ಪಟ್ಟುಕೊಂಡರೂ ನಿಧಾನಕ್ಕೆ ಎಲ್ಲವೂ ಸರಿ ಹೋಗುತ್ತದೆ. ಹೊಸ ಸ್ನೇಹಿತರನ್ನು ಸಂಪಾದಿಸುವಾಗ ಜಾಗರೂಕರಾಗಿರಿ.
ಸಿಂಹ : ಅಪ್ಪ ಅಮ್ಮ ಸ್ವಲ್ಪ ಗೊಣಗಿಕೊಳ್ಳಬಹುದು. ಅದು ನಿಮ್ಮ ಏಳಿಗೆಗೆ. ಕಂಕಣ ಬಲ ಇದೆ ಆದ್ದರಿಂದ ಅವರ ಗೊಣಗುವಿಕೆ ನಿಮಗೆ ಅಂತಹ ನಷ್ಟವನ್ನೇನೂ ತಾರದು.
ಕನ್ಯಾ : ಮನೆಯಲ್ಲಿ ಖರ್ಚು ಹೆಚ್ಚಾಗಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ಮಕ್ಕಳಿಂದ ಸಂತಸ ಸುದ್ದಿ ಬಂದಾಗ ಎಲ್ಲ ನೋವುಗಳು ಮಾಯವಾಗುತ್ತವೆ ಬಿಡಿ.
ತುಲಾ : ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದು ಒಳ್ಳೆಯದಲ್ಲ . ಹೊಸ ಅವಕಾಶಗಳೇನೊ ಸಾಕಷ್ಟಿವೆ. ಆ ನಿರೀಕ್ಷೆಗಳನ್ನು ನೀವು ತುಂಬ ಬಲ್ಲಿರಾ ಅನ್ನುವ ಆತ್ಮ ಪರೀಕ್ಷಣೆ ಒಳ್ಳೆಯದು.
ವೃಶ್ಚಿಕ : ಬಿಡುವಿಲ್ಲದ ಕೆಲಸದಿಂದ ರೋಸಿ ಹೋಗಿದ್ದರೂ, ಇನ್ನೊಂದು ಮಗ್ಗುಲಲ್ಲಿ ಆಗುತ್ತಿರುವ ಬೆಳವಣಿಗೆ ನಿಮ್ಮ ಮನಸ್ಸಿಗೆ ನೆಮ್ಮದಿ ತರಬಹುದು. ನೆರೆಹೊರೆಯವರು ಆಪದ್ಬಾಂಧವರಾದ್ದರಿಂದ ಹೆಚ್ಚು ಜಗಳಾಡಬಾರದು.
ಧನಸ್ಸು : ಲೆಕ್ಕಾಚಾರ ಮುಗಿಸಿ ಪ್ರಯಾಣಕ್ಕೆ ಸಿದ್ಧರಾಗಿ. ನಿಮ್ಮ ಬಾಡಿದ ಮುಖವನ್ನು ಮನೆಯವರು ಎದುರು ನೋಡುತ್ತಿದ್ದಾರೆ. ಆಪ್ತರೊಂದಿಗಿನ ಮುನಿಸು ಮುಗಿಸಿಬಿಡಿ.
ಮಕರ : ಕಡಿಮೆ ಮಾತು ಹೆಚ್ಚು ಕೆಲಸ ಅನ್ನು ವ ಧೋರಣೆಯಿಂದ ನಿಮ್ಮ ಅಭಿವೃದ್ಧಿಯಾಗುತ್ತದೆ. ಬಡ್ತಿಯ ನಿರೀಕ್ಷೆಯಲ್ಲಿದ್ದೀರಿ. ಕುಲದೇವರ ಆರಾಧನೆ ಶ್ರೇಯಸ್ಸು ತರಲಿದೆ.
ಕುಂಭ : ಧನಲಾಭವಿದೆ ಎಂದರೆ ಸರಿ ಹೋಗುವುದಿಲ್ಲ. ಹಿಂದೆ ಮಾಡಿದ ಜಾಣ ಕೆಲಸದಿಂದ ಈಗ ಲಾಭ ಬರಲಿದೆ. ಷೇರು, ಬ್ಯಾಂಕ್ ಅಂತ ಅಲೆದಾಟ ತಪ್ಪಿದ್ದಲ್ಲ.
ಮೀನ : ಪ್ರಪಂಚ ಹಾಗೆಲ್ಲಾ ಮುಳುಗಿ ಹೋಗುವುದಿಲ್ಲ ಎಂಬ ವಿಷಯವನ್ನು ನಿಮಗೆ ಮನದಟ್ಟು ಮಾಡಿಸುವುದು ತುಂಬಾ ಕಷ್ಟ. ಏನಿದ್ದರೂ ಲಾಸ್ ನಿಮಗೇ ಆದ್ದರಿಂದ ಎಚ್ಚರವಾಗಿರಿ.