ಭಾರತಕ್ಕೆ ರೋಮಾಂಚಕ ಜಯ, ಕ್ರಿಕೆಟ್ಗೆ ವಿಜಯೋತ್ಸವ
ಚೆನ್ನೈ : ಜಯಲಕ್ಷ್ಮಿ ಚಂಚಲೆಯಾದರೂ, ಕೊನೆಗೆ ಭಾರತದ ಮನೆಗೇ ಬಂದಳು. ಭಾರತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು 2-1ರಲ್ಲಿ ಗೆದ್ದುಕೊಂಡಿತು. ಪಂದ್ಯದಲ್ಲಿ 15 ವಿಕೆಟ್ಟುಗಳ ದೋಚಿದ್ದಲ್ಲದೆ ಕೊನೆ 2 ರನ್ಗಳನ್ನು ಓಡಿದ ಹರ್ಭಜನ್ಗೆ ಧನ್ಯವಾದಗಳು.
ಗೆಲ್ಲಲು 155 ರನ್ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ತನ್ನ 2ನೇ ಪಾಳಿಯಲ್ಲಿ 18 ರನ್ಗಳಾಗುವಷ್ಟರಲ್ಲಿ ಶಿವಸುಂದರ್ ದಾಸ್ ವಿಕೆಟ್ ಕಳೆದುಕೊಂಡಿತು. ಗದೆ ಹಿಡಿದು ಬಂದ ಲಕ್ಷ್ಮಣ್, ಗಿಲ್ಲೆಸ್ಪಿ, ಮಿಲ್ಲರ್ ಹಾಗೂ ವಾರ್ನ್ ಚೆಂಡುಗಳಿಗೆ ದಿಟ್ಟ ಉತ್ತರ ಕೊಡುತ್ತಾ ಒಂದು ತುದಿಯಲ್ಲಿ ನಿಂತರು. ಚೆನ್ನಾಗೇ ಆಡುತ್ತಿದ್ದ ರಮೇಶ್ ಇಲ್ಲದ ರನ್ಗೆ ಓಡಿ ರನ್ಔಟ್ ಆದರು. ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮವಾಗಿ ಆಡಿದ್ದ ತೆಂಡೂಲ್ಕರ್ (17) ಹಾಗೂ ತಡಕು ಮಹಾರಾಜ ಸೌರವ್ ಗಂಗೂಲಿ (4) , ಗಿಲ್ಲೆಸ್ಪಿ ಮೋಡಿಗೆ ವಿಕೆಟ್ ಒಪ್ಪಿಸಿದರು.
ಎರಡನೇ ಟೆಸ್ಟನ್ನು ಉಳಿಸಿಕೊಳ್ಳುವಲ್ಲಿ ಗಣನೀಯ ಪಾತ್ರ ವಹಿಸಿದ್ದ ಕಲೆಗಾರ ದ್ರಾವಿಡ್ (4) ಕೋಲಿನ್ ಮಿಲ್ಲರ್ ಎಸೆತವನ್ನು ಲಾಂಗ್ ಆಫ್ ತಲೆ ಮೇಲೆ ಹೊಡೆಯಲು ಹೋಗಿ ವಿಫಲರಾಗಿ ಕ್ಯಾಚಿತ್ತರು. ಇಷ್ಟಾಗುವ ಹೊತ್ತಿಗೆ ಭಾರತದ ಸ್ಕೋರು 5 ವಿಕೆಟ್ ನಷ್ಟಕ್ಕೆ 122. ಆಗ ಆಸ್ಟ್ರೇಲಿಯಾ ತಂಡದಲ್ಲಿ ಜೀವ ಸಂಚಾರವಾಯಿತು. ಅವರ ಬೇಟೆಯೂ ಶುರುವಾಯಿತು. ಇನ್ನಿಂಗ್ಸಲ್ಲಿ ಒಟ್ಟು 4 ಕ್ಯಾಚ್ ಹಿಡಿದ ಮಾರ್ಕ್ ವಾ, ವಿವಿಎಸ್ ಲಕ್ಷ್ಮಣ್ (12 ಬೌಂಡರಿಗಳಿದ್ದ 65) ಹೊಡೆದ ಹಿಡಿಯಲು ಅಸಾಧ್ಯ ಎನ್ನುವಂಥ ಚೆಂಡನ್ನೂ ಬಲಕ್ಕೆ ಜಿಂಕೆಯಂತೆ ಜಿಗಿದು ತೆಗೆದುಕೊಂಡರು. ಅಲ್ಲಿಂದ ಭಾರತ ಮಾನಸಿಕವಾಗಿ ಕುಸಿಯಿತು.
ವಯಸ್ಸಾದರೂ ಅಗತ್ಯ ಸಮಯದಲ್ಲಿ ಒಳ್ಳೆ ಆಟ ಆಡಿದ ವಿಕೆಟ್ ಕೀಪರ್ ಸಮೀರ್ ಧಿಘ (ಅಜೇಯ 21) ಕ್ರೀಸಿಗಂಟಿ ನಿಂತು, ಆಸ್ಟ್ರೇಲಿಯಾ ಕೈಯಿಂದ ಗೆಲುವನ್ನು ಕಸಿದರು. ಈ ನಡುವೆ ಬಹುತುಲೆ ಹಾಗೂ ಜಾಹಿರ್ ಖಾನ್ ಖಾತೆ ತೆರೆಯದೆ ಪೆವಿಲಿಯನ್ಗೆ ತೆರಳಿದರು. 8 ನೇ ವಿಕೆಟ್ಗೆ ಧಿಘಯಾಂದಿಗೆ ಜೊತೆಯಾದ ಹರ್ಭಜನ್ ಭಾರತಕ್ಕೆ ಅತ್ಯವಾದ ಗೆಲುವಿನ ರನ್ನನ್ನು ಚಚ್ಚಿದಾಗ ಆವರೆಗೂ ಮುಖ ಊದಿಸಿಕೊಂಡಿದ್ದ ಗಂಗೂಲಿ ಮುಖದಲ್ಲಿ ಒಮ್ಮೆಗೇ ಜೀವ ಸಂಚಾರ. ಮೈದಾನದ ತುಂಬಾ ಮಿಂಚುಗಳ ಪುಳಕ.
ಮೊದಲ ಇನಿಂಗ್ಸ್ನಲ್ಲಿ ಅದ್ಭುತ ದ್ವಿಶತಕ ಸಿಡಿಸಿದ ಹೇಡನ್ ಹಾಗೂ ಎರಡೂ ಇನಿಂಗ್ಸ್ಗಳಿಂದ 15 ವಿಕೆಟ್ಗಳನ್ನು ಕಿತ್ತ ಹರ್ಭಜನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಜಂಟಿಯಾಗಿ ಪಡೆದರು. ಸರಣಿಯಲ್ಲಿ 32 ವಿಕೆಟ್ಗಳನ್ನು ಉರುಳಿಸಿದ ಹರ್ಭಜನ್ ಸರಣಿ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications