ಸರಣಿ ಗೆಲುವಿಗೆ 155 ರನ್ ಗುರಿ, ಹರ್ಭಜನ್ಗೆ 8 ವಿಕೆಟ್
ಚೆನ್ನೈ : ಸರಣಿಯನ್ನು ಕೈಗೆಟುಕಿಸಿಕೊಳ್ಳಲು ಭಾರತಕ್ಕಿನ್ನು ಮೂರೇ ಗೇಣು. ಅಶ್ವಮೇಧದ ವಿಜಯೋತ್ಸಾಹದಲ್ಲಿ ಭಾರತಕ್ಕೆ ಬಂದು ಕಂಗಾಲಾಗಿರುವ ಕಾಂಗರೂ ಪಡೆ ಒಡ್ಡಿರುವ 155 ರನ್ನುಗಳ ಗುರಿ ಮುಟ್ಟಿದಲ್ಲಿ ಅದು ಭಾರತ ಕ್ರಿಕೆಟಿನ ಪಾಲಿಗೆ ನವೋದಯವಾಗುವಲ್ಲಿ ಸಂಶಯವೇ ಇಲ್ಲ . ಸೋಲುಗಳ ಸುಳಿಯಲ್ಲಿ ಸಿಲುಕಿ ಜರ್ಜರಿತಗೊಂಡಿದ್ದ ಭಾರತಕ್ಕೆ ವಿಶ್ವ ಚಾಂಪಿಯನ್ನರ ವಿರುದ್ಧ ಗಳಿಸುವ ಈ ಸರಣಿ ಗೆಲುವು ಗವಾಸ್ಕರ್-ಬಾರ್ಡರ್ ಟ್ರೋಫಿಯ ಜೊತೆಗೆ ಅತೀವ ಆತ್ಮವಿಶ್ವಾಸವನ್ನೂ ಕಟ್ಟಿಕೊಡುತ್ತದೆ.
ಬುಧವಾರದ ಆಟದ ಕೊನೆಗೆ 7 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದ್ದ ಆಸ್ಟ್ರೇಲಿಯಾ, ಗುರುವಾರ ಬೆಳಗಿನ ಪಾಳಿಯಲ್ಲಿ ತೀವ್ರ ಪ್ರತಿರೋಧ ಒಡ್ಡುತ್ತದೆನ್ನುವ ನಿರೀಕ್ಷೆ ಹುಸಿಯಾಯಿತು. ಹರ್ಭಜನ್ಗೆ ಸುಲಭವಾಗಿ ಶರಣಾದ ಆಸ್ಟ್ರೇಲಿಯಾ ನೆನ್ನೆ ಗಳಿಸಿದ್ದ 131 ರನ್ನುಗಳ ಮುನ್ನಡೆಯನ್ನು ಗುರುವಾರದ ಆಟದಲ್ಲಿ 154 ಕ್ಕೆ ವಿಸ್ತರಿಸಿಕೊಂಡಿತು. 47 ರನ್ ಗಳಿಸಿದ ಸ್ಟೀವ್ ಹರ್ಭಜನ್ಗೆ ಔಟಾದಾಗ, ಕಾಂಗರೂಗಳ ಕುಸಿತ ಹೆಚ್ಚೂ ಕಡಿಮೆ ಖಚಿತವಾಯಿತು. ನಂತರ ಬಂದ ಮಿಲ್ಲರ್ ಹಾಗೂ ಗಿಲ್ಲೆಸ್ಪಿ ಹೆಚ್ಚು ಪ್ರತಿರೋಧ ಒಡ್ಡದೆ ಹರ್ಭಜನ್ಗೆ ವಿಕೆಟ್ ಅರ್ಪಿಸಿದರು.
ಗುರುವಾರ ಬಿದ್ದ ಮೂರು ವಿಕೆಟ್ಗಳನ್ನು ಕಬಳಿಸಿದ ಹರ್ಭಜನ್ ತಮ್ಮ 2 ನೇ ಇನಿಂಗ್ಸ್ ಸಂಪಾದನೆಯನ್ನು 8 ಕ್ಕೆ ಹಾಗೂ ಪ್ರಸಕ್ತ ಟೆಸ್ಟ್ನ ಸಂಪಾದನೆಯನ್ನು 15 ಕ್ಕೆ ಹೆಚ್ಚಿಸಿಕೊಂಡರು. ಇನ್ನೊಂದು ವಿಕೆಟ್ ಗಳಿಸಿದ್ದರೆ ಟೆಸ್ಟೊಂದರಲ್ಲಿ 16 ವಿಕೆಟ್ ಗಳಿಸಿದ ಹಿರ್ವಾನಿ ಸಾಧನೆಯನ್ನು ಅವರು ಸರಿಗಟ್ಟುತ್ತಿದ್ದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications