ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೇದಾಂತ ಭಾರತೀ ಸಂಸ್ಥೆ ಯಿಂದ ವಟು ಶಿಕ್ಷಣಂ ಬೇಸಿಗೆ ಶಿಬಿರ
ಬೆಂಗಳೂರು : ಪರಂಪರೆ, ಸಂಸ್ಕೃತಿ, ಯೋಗ ಹಾಗೂ ಸಂಸ್ಕೃತ ಭಾಷೆಗಳಿಗೆ ಹೆಚ್ಚಿನ ಗಮನ ನೀಡುವ ವಟು ಶಿಕ್ಷಣಂ ಬೇಸಿಗೆ ಶಿಬಿರವನ್ನು ವೇದಾಂತ ಭಾರತೀ ಸಂಸ್ಥೆ ಆಯೋಜಿಸಿದೆ.
ಮೇ 2 ರಿಂದ 23 ರವರೆಗೆ ನಡೆಯುವ ಈ ಶಿಬಿರದಲ್ಲಿ ಎಲ್ಲ ತ್ರಿ ಮತಸ್ಥ ಬ್ರಾಹ್ಮಣ ಉಪನೀತ ವಟುಗಳು ಪಾಲ್ಗೊಳ್ಳಬಹುದು . ಪ್ರೌಢಶಾಲೆಯಲ್ಲಿ ಓದುತ್ತಿರುವ ವಟುಗಳಿಗೆ ಈ ಶಿಬಿರ ಸೀಮಿತ. ಪಾಠ ಪ್ರವಚನಗಳಲ್ಲೇ ವರ್ಷವನ್ನು ಮುಗಿಸಿ ಮತ್ತೊಂದು ವ್ಯಾಸಂಗ ವರ್ಷಕ್ಕೆ ಸಿದ್ಧವಾಗುವ ಮಕ್ಕಳು, ಪಾಠದೊಂದಿಗೆ ತುಸು ಸಂಸ್ಕೃತಿ- ಪರಂಪರೆಯ ಅರಿವನ್ನೂ ಹೊಂದಲಿ ಎಂದು ಬಯಸುವ ಪೋಷಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗೆ - ವೇದಾಂತ ಭಾರತೀ, ಯೋಗನಂದೇಶ್ವರ ಸರಸ್ವತಿ ಮಠ, ಚಂದ್ರಮೌಳಿ ರಸ್ತೆ , ಕೃಷ್ಣರಾಜನಗರ, ಮೈಸೂರು ಈ ವಿಳಾಸ ಅಥವಾ ದೂರವಾಣಿ ಸಂಖ್ಯೆ (08223)62471 ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)
Comments
Story first published: Wednesday, March 21, 2001, 5:30 [IST]