ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಪ್ರಸ್ತುತ ತೊಡಗಿಸಿಕೊಂಡಿರುವ ಕೆಲಸದಲ್ಲಿ ನೀವು ಖುಷಿಯಾಗಿರುತ್ತೀರಿ ಅನ್ನುವುದಕ್ಕಿಂಥ, ಕೆಲಸದಲ್ಲಿ ಜೊತೆಯಾಗಿರುವ ವ್ಯಕ್ತಿಯ ಸಹಚರ್ಯ ನಿಮಗೆ ಖುಷಿ ತರುತ್ತಿದೆ. ಅನಿರೀಕ್ಷಿತ ಧನಲಾಭವೂ ಇದೆ.ವೃಷಭ : ಯಶಸ್ಸಿಗೆ ನೂರೊಂದು ಮೆಟ್ಟಿಲು. ನೀವಿನ್ನು ಮೊದಲ ಮೆಟ್ಟಿಲಿನಲ್ಲಿದ್ದೀರಿ. ಆದರೆ, ಎಷ್ಟೋ ಮಂದಿಗೆ ಒಂದು ಮೆಟ್ಟಿಲನ್ನು ಹತ್ತುವ ಅವಕಾಶವೂ ಇರುವುದಿಲ್ಲ ಅನ್ನುವುದನ್ನರಿತರೆ ವೃಥಾ ಬೇಜಾರು ದೂರಾಗುತ್ತದೆ.
ಮಿಥುನ : ಅಗತ್ಯಕ್ಕಿಂತ ಹೆಚ್ಚು ಭಾವನಾತ್ಮಕವಾಗಿ ವರ್ತಿಸುತ್ತಿದ್ದೀರಿ. ನಿಮ್ಮ ಭಾವನಾತ್ಮಕತೆ ಇತರರ ಕಣ್ಣಿಗೆ ತಮಾಷೆಯಾಗಿ ಕಾಣುವ ಸಂಭವವೂ ಇದೆ. ಮನೆಯಲ್ಲಿ ಕಲಹದ ದಿನ. ಮೌನವೇ ಆಭರಣ ಅನ್ನುವಂತಿರಿ.
ಕಟಕ : ಅತೀವ ಆತ್ಮ ವಿಶ್ವಾಸದಿಂದ ತುಂಬಿ ತುಳುಕುತ್ತಿದ್ದೀರಿ. ಅದೇ ವಿಶ್ವಾಸ ಪರೀಕ್ಷೆ ಬರೆಯುವವರೆಗೂ ಇರಲಿ. ಹುಚ್ಚು ಯೋಚನೆಗಳನ್ನು ಬದಿಗಿಟ್ಟು ಗಂಭೀರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ.
ಸಿಂಹ : ನಿಮ್ಮ ಪ್ರೇಮವನ್ನು ವಿಮರ್ಶಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಇದರಿಂದಾಗಿ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ ಹಾಗೂ ಅನಗತ್ಯ ಅಶಾಂತಿಯನ್ನು ಕಳಕೊಳ್ಳುತ್ತೀರಿ.
ಕನ್ಯಾ : ಗುಂಪು ಚಟುವಟಿಕೆಗಳಲ್ಲಿ ಹೆಚ್ಚಿನ ಯಶಸ್ಸು ಗಳಿಸುತ್ತೀರಿ. ತಂಡದ ನಾಯಕತ್ವ ವಹಿಸುವ ಅವಕಾಶವೂ ಇದೆ. ಯಶಸ್ಸಿನೊಂದಿಗೆ ಮತ್ತೊಮ್ಮೆ ನಿಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುತ್ತೀರಿ.
ತುಲಾ : ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದು ಒಳ್ಳೆಯದಲ್ಲ . ಹೊಸ ಅವಕಾಶಗಳೇನೊ ಸಾಕಷ್ಟಿವೆ. ಆ ನಿರೀಕ್ಷೆಗಳನ್ನು ನೀವು ತುಂಬ ಬಲ್ಲಿರಾ ಅನ್ನುವ ಆತ್ಮ ಪರೀಕ್ಷಣೆ ಒಳ್ಳೆಯದು.
ವೃಶ್ಚಿಕ : ನಿಮ್ಮ ಕುತೂಹಲದ ಮನಸ್ಸಿಗೆ ಪ್ರವಾಸ ಮತ್ತೆ ಒದಗಿ ಬರಲಿದೆ . ಹೊಸ ವಾಣಿಜ್ಯ ಒಡಂಬಡಿಕೆಗಳೂ ಸಾಧ್ಯವಾಗಲಿವೆ. ಇದರಿಂದಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಲಿದೆ.
ಧನಸ್ಸು : ಹಬ್ಬ ಹತ್ತಿರವಾಗುತ್ತಿರುವ ಖುಷಿಯಲ್ಲಿದ್ದೀರಿ. ಹೊಸ ವರ್ಷದಿಂದಲಾದರೂ ಬದುಕಿಗೊಂದು ಚೌಕಟ್ಟನ್ನು ಅಳವಡಿಸಿಕೊಳ್ಳಿ. ಮನೆಯವರ, ಗೆಳೆಯರ ಮಾತುಗಳಿಗೆ ಕಿವಿ ಕೊಡಿ.
ಮಕರ : ಮಾತೇ ಮುತ್ತು ಅನ್ನುವುದನ್ನು ಅರಿತಿದ್ದೂ ಅಪಾಯಕ್ಕೆ ಎಡೆ ಮಾಡಿಕೊಡುತ್ತಿದ್ದೀರಿ. ಕೆಲವೊಮ್ಮೆ ರಾಜಿ ಅನಿವಾರ್ಯ. ಉಳಿಗಾಗಿ ಈ ಬಾರಿ ಜೀ ಹುಜೂರ್ ಅಂದು ಬಿಡಿ. ಚಕ್ರ ತಿರುಗುತ್ತಿದೆ.
ಕುಂಭ : ಹೊಸತನ್ನು ಸಾಧಸುವ ಹಂಬಲದಲ್ಲಿದ್ದೀರಿ. ಈ ಹೊತ್ತಿನಲ್ಲಿ ಈ ಪಾಟಿ ನಿದ್ರಾವಶರಾದರೆ ಹೇಗೆ. ನೀವೀಗ ಸರಸ್ವತಿಯಾಗುವ ಹೊತ್ತು . ನಿಮ್ಮಿಂದ ಬಹಳಷ್ಟನ್ನು ಬಹಳಷ್ಟು ಜನ ನಿರೀಕ್ಷಿಸುತ್ತಿದ್ದಾರೆ.
ಮೀನ : ಇಷ್ಟಪಾತ್ರರೊಂದಿಗೆ ಮೊಂಡು ವಾದ ಬೇಡ. ಹಟದಿಂದಾಗಿ ಕಳಕೊಳ್ಳುವುದೇ ಸಾಕಷ್ಟು . ಆರೋಗ್ಯದಲ್ಲಿ ಏರುಪೇರುಗಳಿವೆ. ಕುಲದೇವರನ್ನು ಪ್ರಾರ್ಥಿಸಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications