ಮಾವಿಗೆ ಮಂಜು ಮುಸುಕಿತು , ಸಮೃದ್ಧ ಬೆಳೆ ನಿರೀಕ್ಷೆ ಹುಸಿಯಾಯ್ತು
ಬೆಂಗಳೂರು : ಈ ಬಾರಿ ಮಾವಿನ ಫಸಲು ಸಾಕುಬೇಕಾದಷ್ಟು ಬರುತ್ತದೆ ಎಂದು ಕೃಷಿ ತಜ್ಞರು ಲೆಕ್ಕಹಾಕಿದ್ದರು. ಅದಕ್ಕೆ ತಕ್ಕಂತೆ ಜನವರಿ, ಫೆಬ್ರವರಿಯಲ್ಲೇ ರಾಜ್ಯದ ಎಲ್ಲ ಮಾವಿನ ಮರಗಳಲ್ಲಿ ಹೂ ಕಾಣಿಸಿಕೊಂಡಿತು, ಹೂವು ಕಾಯಿಯೂ ಆಗುತ್ತಿತ್ತು. ಎಲ್ಲ ಮರಗಳಲ್ಲಿಯೂ ಮಾವಿನಕಾಯಿಯ ಹೀಚು ಮೂಡಿತ್ತು. ಇದನ್ನು ಕಂಡಾಗ ಈ ಬಾರಿ ಕಳೆದ ವರ್ಷಕ್ಕಿಂತಲೂ ಮೂರು ಪಟ್ಟು ಮಾವಿನಹಣ್ಣು ಮಾರುಕಟ್ಟೆಗೆ ಬರುತ್ತದೆ ಎಂದು ನೀರೀಕ್ಷಿಸಲಾಗಿತ್ತು.
ಆದರೆ, ಫೆಬ್ರವರಿ ಕೊನೆಯಲ್ಲಿ ಸುರಿದ ಮಂಜು ಈ ಎಲ್ಲ ನಿರೀಕ್ಷೆಗಳನ್ನೂ ಮಸುಕಾಗಿಸಿತು. ಮಂಜು ಸುರಿದ ಪರಿಣಾಮವಾಗಿ ಮಾವಿನ ಮರದಲ್ಲಿ ಬಿಟ್ಟಿದ್ದ ಹೂ ಉದುರಿದವು, ಹೂವಿನ ಹಂತ ದಾಟಿ ಹೀಚಾಗಿದ್ದ ಚಿಕ್ಕಚಿಕ್ಕ ಕಾಯಿಗಳೂ ಉದುರಿದವು. ರೈತನ ಎಲ್ಲ ನಿರೀಕ್ಷಿಯೂ ಮಂಜಿನಿಂದ ಮಬ್ಬಾಗಿ ಹೋಯಿತು.
ಆದರೂ, ಚೈತ್ರದ ಆರಂಭಕ್ಕೆ ನಾಲ್ಕಾರು ದಿನ ಇರುವಾಗಲೇ ಮಾರುಕಟ್ಟೆಯಲ್ಲಿ ಉಪ್ಪಿನಕಾಯಿಗೆ ಮಾವಿನ ಕಾಯಿ ಲಭಿಸುತ್ತಿದೆ. ಹಿಂದಿನ ಲೆಕ್ಕಾಚಾರದಂತೆ, ಯಥೇಚ್ಛವಾಗಿ ಮಾರುಕಟ್ಟೆ ಪ್ರವೇಶಿಸಬೇಕಿದ್ದಷ್ಟು ಮಾವು ಬಂದಿಲ್ಲ. ಮಾವಿನ ಹಣ್ಣು ಕೂಡ ಮೂರ್ಪಟ್ಟು, ನಾಲ್ಕು ಪಟ್ಟು ಬರುವ ಸಾಧ್ಯತೆ ಕ್ಷೀಣಿಸಿದೆ. ಆದರೂ ಕಳೆದ ವರ್ಷ ಮಾರುಕಟ್ಟೆಗೆ ಬಂದಿದ್ದ ಮಾವಿನ ಪ್ರಮಾಣಕ್ಕಿಂತ ತುಸು ಹೆಚ್ಚಾಗೇ ಬರಲಿದೆ.
ಬೆಲೆ ಹಾಗೂ ಬೆಳೆ ಕೈಕೊಟ್ಟು, ರೈತ ಈಗಾಗಲೇ ಕೃಶವಾಗಿದ್ದಾನೆ. ಮೆಕ್ಕೇಜೋಳ, ಆಲುಗೆಡ್ಡೆ ನೀಡದ ಬೆಲೆಯನ್ನು ಮಾವಾದರೂ ನೀಡಿತು ಎಂದು ಕೊಂಡಿದ್ದ ರೈತ ಮತ್ತೆ ಕಂಗಾಲಾಗಿದ್ದಾನೆ. ರಾಜ್ಯದ ನೆಚ್ಚಿನ ಮಾವಿನ ಬೆಳೆಯಾದ ಮಲ್ಲಿಕಾ ಕೂಡ ಮಂಜಿನ ದಾಳಿಗೆ ಒಳಗಾಗಿದೆ. ಹಾಸನ, ಶ್ರೀನಿವಾಸಪುರಗಳ ಮಾವಿನ ತೋಟದ ಮಾಲಿಕರು ಜೋರು ಗಾಳಿ ಬಂದರೆ, ಹೂವು, ಹೀಚು ಉದುರುತ್ತದೆ ಎಂದು ಆತಂಕಗೊಂಡಿದ್ದರು. ಆದರೆ, ಬಿರುಗಾಳಿ ಏಳಲಿಲ್ಲ. ಮುಂಜಾನೆ ಸುರಿದ ಮಂಜು, ರೈತರ ಪಾಲಿಗೆ ಬಿರುಗಾಳಿಯೇ ಆಯಿತು.
ಈಗ ಸರಕಾರ ಮುಂಜಾಗ್ರತಾ ಕ್ರಮ ಕೈಗೊಂಡು, ಈಗಲೇ ಮಾವಿಗೆ ಬೆಂಬಲ ಬೆಲೆ ಘೋಷಿಸದಿದ್ದರೆ, ಮಾವಿನ ರೈತನ ಪಾಡೂ ಮೆಕ್ಕೆ ಜೋಳ ಬೆಳೆದ ರೈತನ ಸ್ಥಿತಿಗೆ ಭಿನ್ನವಾಗಿರುವುದಿಲ್ಲ ಎನ್ನುತ್ತಿದ್ದಾರೆ ಕೃಷಿ ಮಾರುಕಟ್ಟೆ ತಜ್ಞರು.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications