Get Updates
Get notified of breaking news, exclusive insights, and must-see stories!

ರಾಜೀನಾಮೆ ವಾಪಸ್ಸು , ಪಟ್ಟು ಸಡಿಲಿಸಿದ ಜಾರ್ಜ್‌ ಹಿಂಬಾಲಕರು

ನವದೆಹಲಿ : ನಾಲ್ಕು ದಿನಗಳ ಬಿಕ್ಕಟ್ಟಿನ ನಂತರ ಪಟ್ಟು ಸಡಿಲಿಸಿರುವ ಸಮತಾ ಪಾರ್ಟಿಯ ನಿತೀಶ್‌ ಕುಮಾರ್‌, ದಿಗ್ವಿಜಯ್‌ ಸಿಂಗ್‌ ಹಾಗೂ ಶ್ರೀನಿವಾಸ ಪ್ರಸಾದ್‌ ಕೇಂದ್ರ ಸಂಪುಟಕ್ಕೆ ನೀಡಿದ್ದ ತಮ್ಮ ರಾಜೀನಾಮೆಯನ್ನು ವಾಪಸ್ಸು ಪಡೆದಿದ್ದಾರೆ.

ಸೋಮವಾರ ನಡೆದ ಪಕ್ಷದ ಸಂಸತ್‌ ಸದಸ್ಯರ ಸಭೆಯಲ್ಲಿ ರಾಜೀನಾಮೆ ವಾಪಸ್ಸು ಪಡೆಯುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸಭೆಯಲ್ಲಿ ಸಮತಾ ಪಕ್ಷದ ಎಲ್ಲಾ 13 ಸಂಸತ್‌ ಸದಸ್ಯರು ಭಾಗವಹಿಸಿದ್ದರು. ಸರ್ಕಾರವು ಸುರಳೀತವಾಗಿ ಮುನ್ನಡೆಯಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಯಿತು ಎಂದು ಪಕ್ಷದ ಅಧ್ಯಕ್ಷ ಜಾರ್ಜ್‌ ಫರ್ನಾಂಡಿಸ್‌ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ತೆಹಲ್ಕಾ ಡಾಟ್‌ ಕಾಂ ಬಯಲು ಮಾಡಿದ ರಕ್ಷಣಾ ಒಪ್ಪಂದಗಳಲ್ಲಿನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ವಿರೋಧ ಪಕ್ಷಗಳ ಒತ್ತಾಯದ ಮೇರೆಗೆ ರಾಜೀನಾಮೆ ನೀಡಿದ್ದರು. ಜಾರ್ಜ್‌ ಅವರ ಹಾದಿಯನ್ನೇ ಅನುಸರಿಸಿದ ಪಕ್ಷದ ಇತರ ಮೂವರು ಸಚಿವರು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿ, ತನಿಖೆ ಪೂರ್ಣವಾಗುವವರೆಗೆ ತಾವು ಸಂಪುಟದಲ್ಲಿ ಸೇರ್ಪಡೆಯಾಗುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಪ್ರಸ್ತುತ ಸಚಿವರ ರಾಜೀನಾಮೆ ವಾಪಸ್ಸಾತಿಯಿಂದ ಸರ್ಕಾರದಲ್ಲಿನ ಒಂದು ಹಂತದ ಬಿಕ್ಕಟ್ಟು ಬಗೆ ಹರಿದಂತಾಗಿದೆ.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+