ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾ. 26ರಂದು ಕೊಂಚಾಡಿ ಮಹಾಲಸಾದೇವಿಗೆ ಬ್ರಹ್ಮ ರಥ ಸಮರ್ಪಣೆ
ಮಂಗಳೂರು : ಜನವರಿ ಬರುತ್ತಲೇ ದೇವಸ್ಥಾನಗಳು ಜಾತ್ರೆಗೆ ತಯಾರಿ ನಡೆಸುತ್ತವೆ. ಮಾರ್ಚ್ ಬಂತೆಂದರೆ ಊರಿನ ಮಂದಿಯನ್ನೆಲ್ಲಾ ಕಲೆ ಹಾಕುವ ಜಾತ್ರೆ ಆರಂಭವಾಗಿ ಬಿಡುತ್ತವೆ. ಕೊಂಚಾಡಿಯ ಮಹಾಲಸಾ ನಾರಾಯಣಿ ದೇವಿ ಕ್ಷೇತ್ರದಲ್ಲಿ ಮಾರ್ಚ್ 26ರಿಂದ ಆರು ದಿನಗಳ ಕಾಲ ಜಾತ್ರಾ ಮಹೋತ್ಸವ ಮತ್ತು ಪ್ರಥಮ ಬ್ರಹ್ಮ ರಥೋತ್ಸವ ನಡೆಯಲಿದೆ .
ಈ ಸಂದರ್ಭದಲ್ಲಿ ದೇವಸ್ಥಾನದ ದಶಮಾನೋತ್ಸವದ ಅಂಗವಾಗಿ ಮಹಾಲಸಾ ದೇವಿಗೆ ಮಾರ್ಚ್ 26ರಂದು ಬ್ರಹ್ಮ ರಥವನ್ನು ಸಮರ್ಪಿಸಲಾಗುವುದು. ಕಾಶಿ ಮಠಾಧೀಶ ಸುಧೀಂದ್ರತೀರ್ಥ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಬ್ರಹ್ಮ ರಥ ಸಮರ್ಪಣಾ ಕಾರ್ಯ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.
ಮಹಾಲಸಾ ದೇವಸ್ಥಾನ ಮಂಗಳೂರಿನಿಂದ ಏಳು ಕಿಲೋ ಮೀಟರ್ ದೂರದ ಪದವಿನಂಗಡಿಯಲ್ಲಿದೆ. ಕಾಶೀ ಮಠ ಸಂಸ್ಥಾನದ ಉಸ್ತುವಾರಿಯಲ್ಲಿ ನಡೆಯುತ್ತಿರುವ ದೇವಸ್ಥಾನ ಆರಂಭವಾದುದು 1998ರಲ್ಲಿ. ದ.ಕ. ಜಿಲ್ಲೆಯಲ್ಲಿರುವ ಗೌಡ ಸಾರಸ್ವರ ಬ್ರಾಹ್ಮಣರ ಆರಾಧ್ಯ ದೈವ ಮಹಾಲಸಾ ನಾರಾಯಣಿ ದೇವಿಯ ಏಕೈಕ ದೇವಸ್ಥಾನ ಇದು.
(ಇನ್ಫೋ ವಾರ್ತೆ)
Story first published: Sunday, March 18, 2001, 5:30 [IST]