ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು ನಗರದಲ್ಲಿ ರಾಜೀವಗಾಂಧೀ ಪ್ರತಿಮೆ ಅನಾವರಣ
ಬೆಂಗಳೂರು : ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್ಗಾಂಧಿ ಅವರ ಕಂಚಿನ ಪುತ್ಥಳಿಯ ಅನಾವರಣ ಭಾನುವಾರ ಬೆಂಗಳೂರಿನಲ್ಲಿ ನಡೆಯಿತು. ಎ.ಐ.ಸಿ.ಸಿ. ಅಧ್ಯಕ್ಷೆ ಸೋನಿಯಾ ಗಾಂಧೀ ಅವರು ಕೇಸರಿ ಬಿಳಿ ಹಸಿರು ವರ್ಣದ ಆಳೆತ್ತರದ ಪುಷ್ಪ ಮಾಲಿಕೆಯಿಂದ ಅಲಂಕೃತವಾಗಿದ್ದ ರಾಜೀವ್ಗಾಂಧಿ ಪುತ್ಥಳಿಯನ್ನು ವಿದ್ಯುತ್ ಗುಂಡಿ ಒತ್ತುವ ಮೂಲಕ ಅನಾವರಣ ಮಾಡಿದರು.
ರಾಜೀವಗಾಂಧೀ ಸ್ಮಾರಕ ಪ್ರತಿಷ್ಠಾನ ನಗರದ ಶೇಷಾದ್ರಿಪುರಂ ಬಡಾವಣೆಯ ನಟರಾಜಾ ಥಿಯೇಟರ್ ಬಳಿ ಇರುವ ವೃತ್ತದಲ್ಲಿ ಎತ್ತರವಾದ ಪೀಠದ ಮೇಲೆ ರಾಜೀವ್ಗಾಂಧೀ ಅವರ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದೆ. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಬೆಂಗಳೂರು ಮೇಯರ್ ಪ್ರೇಮಾ ಕಾರ್ಯಪ್ಪ ಹಾಗೂ ಕೃಷ್ಣ ಸಚಿವ ಸಂಪುಟದ ಹಲವು ಸಚಿವರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Sunday, March 18, 2001, 5:30 [IST]