ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಊರಿಗೆ ನುಗ್ಗಿ ಮೂವರ ಮೇಲೆ ದಾಳಿಮಾಡಿದ ಚಿರತೆ ಗುಂಡಿಗೆ ಬಲಿ
ಚಿಂತಾಮಣಿ : ಚಿಂತಾಮಣಿ ತಾಲೂಕಿನ ಕುರುಬೂರಿಗೆ ನುಗ್ಗಿದ ಚಿರತೆಯಾಂದು ಮೂವರ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿ, ಪೊಲೀಸರ ಗುಂಡಿಗೆ ಬಲಿಯಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಬೂರಿಗೆ ಈ ಚಿರತೆ ಎಲ್ಲಿಂದ ಬಂತು ಎಂಬುದು ಗೊತ್ತಾಗಿಲ್ಲ. ರಾತ್ರಿ ಕತ್ತಲಲ್ಲಿ ಊರಿಗೆ ನುಗ್ಗಿದ ಚಿರತೆ ಹಿಪ್ಪನೇರಳೆ ತೋಟದಲ್ಲಿ ಸೇರಿಕೊಂಡಿತ್ತು. ಬೆಳಗ್ಗೆ ತೋಟಕ್ಕೆ ಬಂದ ಮೂವರ ಮೇಲೆ ಚಿರತೆ ದಾಳಿ ಮಾಡಿತು. ಊರಿಗೆ ಚಿರತೆ ನುಗ್ಗಿರುವ ವಿಷಯ ತಿಳಿದ ಕೂಡಲೇ ಗ್ರಾಮಸ್ಥರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದರು.
ಬೆಂಗಳೂರು ಬಳಿಯ ಬನ್ನೇರುಘಟ್ಟದಿಂದ ಅರಣ್ಯ ಇಲಾಖೆ ಸಿಬ್ಬಂದಿ ಬರುವತನಕ ಚಿರತೆ ಊರಿಗೆ ನುಗ್ಗದಂತೆ ಗ್ರಾಮಸ್ಥರು ಹಾಗೂ ಪೊಲೀಸರು ಸತತವಾಗಿ ಹಲವಾರು ಸುತ್ತು ಗಂಡು ಹಾರಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಸಹ ಜೀವಂತವಾಗಿ ಚಿರತೆಯನ್ನು ಹಿಡಿಯಲು ವಿಫಲವಾದಾಗ ಪೊಲೀಸರು ಚಿರತೆಯನ್ನು ಗುಂಡಿಟ್ಟು ಕೊಂದರು.
(ಕೋಲಾರ ಪ್ರತಿನಿಧಿಯಿಂದ)
Comments
Story first published: Sunday, March 18, 2001, 5:30 [IST]