ಶೇಕ್ಸ್ಪಿಯರ್ನ ಮ್ಯಾಕ್ಬೆತ್ ಕನ್ನಡದಮಾರನಾಯಕನಾಗಿ ರಂಗಕ್ಕೆ
ಬೆಂಗಳೂರು : ಶೇಕ್ಸ್ಪಿಯರ್ನ ಮ್ಯಾಕ್ಬೆತ್ ನಾಟಕದ ಕನ್ನಡ ರೂಪಾಂತರ ಮಾರನಾಯಕನನ್ನು ಗುರುವಾರ ರಂಗಕ್ಕೆ ಬರಲಿದ್ದಾನೆ. ನಟಿಸುತ್ತಿರುವುದು 30 ಮಂದಿ ಜೈಲುವಾಸಿಗಳು ಅನ್ನುವುದು ನಾಟಕದ ವಿಶೇಷ.
ಈ ವಿಷಯವನ್ನು ಮುಖ್ಯ ಪೊಲೀಸ್ ನಿರೀಕ್ಷಕ(ಜೈಲು ವಿಭಾಗ) ರೇವಣ್ಣ ಸಿದ್ಧಯ್ಯ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಜೈಲಿನ ಕುರಿತ ಇತಿಹಾಸವನ್ನು ಬಿಂಬಿಸುವ ‘ಜೈಲಿನ ನೆನಪುಗಳು’ ಎಂಬ ಎರಡು ದಿನದ ಕಾರ್ಯಕ್ರಮವನ್ನು ಎನ್ಜಿಓ ಗಳ ಸಹಯೋಗದೊಂದಿಗೆ ರಾಜ್ಯ ಸರಕಾರ ಆಯೋಜಿಸಿರುವುದಾಗಿ ಅವರು ಹೇಳಿದರು.
ಎರಡು ದಿನಗಳ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲ ತಯಾರಿಗಳನ್ನು ಕೈದಿಗಳೇ ನಡೆಸಿದ್ದಾರೆ. ಕಳೆದ 48 ದಿನಗಳ ಅವಧಿಯಲ್ಲಿ ಮಾರನಾಯಕ ನಾಟಕದ ಅಭ್ಯಾಸ ಆರಂಭವಾಗಿದೆ. ಇತ್ತೀಚೆಗಷ್ಟೆ ಕಾಸರಗೋಡಿನ ನಾಟಕ ಭಾರತಿಯವರ ಪ್ರದರ್ಶನದಿಂದ ಮಾರನಾಯಕ ನಾಟಕ ಕಲಾಸಕ್ತರ ಗಮನ ಸೆಳೆದಿದೆ. ಜೈಲಿನಿಂದ ಬಿಡುಗಡೆಯಾಗಿರುವ ಐದು ಮಂದಿ ಮಾಜಿ ಜೈಲು ವಾಸಿಗಳು ಕೂಡ ನಾಟಕದಲ್ಲಿ ಭಾಗವಹಿಸುವರು ಎಂದು ರೇವಣಸಿದ್ಧಯ್ಯ ಹೇಳಿದರು.
ಗುರುವಾರ ಸಂಜೆ 5.30 ಕ್ಕೆ ಸೆಂಟ್ರಲ್ ಜೈಲಿನ ಆವರಣದಲ್ಲಿ ನಡೆಯುವ ನಾಟಕಕ್ಕೆ ಸಾರ್ವಜನಿಕರಿಗೂ ಪ್ರವೇಶವಿದೆ. ಮಧ್ಯಾಹ್ನ 3.30 ರ ನಂತರ ಸೆಂಟ್ರಲ್ ಜೈಲಿನ ಕಚೇರಿಯಿಂದ ಪ್ರವೇಶ ಪತ್ರಗಳನ್ನು ಪಡೆಯಬಹುದು. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ - 080- 2261131.
ಜೈಲು ಇತಿಹಾಸದ ವಸ್ತು ಪ್ರದರ್ಶನ : ಸೆಂಟ್ರಲ್ ಜೈಲಿನ ಇತಿಹಾಸವನ್ನು ಬಿಂಬಿಸುವ ಎರಡು ದಿನಗಳ ವಸ್ತು ಪ್ರದರ್ಶನ ಕೂಡ ಗುರುವಾರದಿಂದ ಪ್ರಾರಂಭವಾಗುವುದು. ಸೆಂಟ್ರಲ್ ಜೈಲಿನ ಒಳಾವರಣದಲ್ಲಿ ನಡೆಯುವ ಪ್ರದರ್ಶನವನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ವಹಿಸುವರು.
ನಿಜಾಮರ ಕಾಲದ ಪದಕಗಳು, ವಾದ್ಯಗಳು, ಕತ್ತಿ ಸೇರಿದಂತೆ ವಿವಿಧ ಆಯುಧಗಳು, ಬ್ರಿಟೀಷರ ಕಾಲದ ವಸ್ತುಗಳು, 1947 ರಲ್ಲಿ ಖೈದಿಗಳನ್ನುದ್ದೇಶಿಸಿ ಮಹಾತ್ಮ ಗಾಂಧಿ ಮಾಡಿದ ಭಾಷಣವನ್ನೊಳಗೊಂಡ ಗ್ರಾಮಾಫೋನ್, ಸ್ವಾತಂತ್ರ್ಯ ಚಳವಳಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಗಲ್ಲಿಗೇರಿಸಿದ ಕೆಲವರ ವಿವರಗಳು ವಸ್ತು ಪ್ರದರ್ಶನದ ಮುಖ್ಯ ಆಕರ್ಷಣೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications