ಹೊಸ ಇತಿಹಾಸ ಬರೆದ ವಿವಿಎಸ್ ಲಕ್ಷ್ಮಣ್
ಕೋಲ್ಕತ : ಸುನಿಲ್ ಗವಾಸ್ಕರ್, ವಿನೂ ಮಂಕಡ್, ವಿನೋದ್ ಕಾಂಬ್ಳಿ ಇವರೆಲ್ಲರ ದಾಖಲೆಗಳನ್ನು ಮುರಿದು, ಟೆಸ್ಟ್ ಕ್ರಿಕೆಟ್ಟಿನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಖ್ಯಾತಿಗೆ ವಿವಿಎಸ್ ಲಕ್ಷ್ಮಣ್ (ಅಜೇಯ 237, 40 ಬೌಂಡರಿ) ಪಾತ್ರರಾಗಿದ್ದಾರೆ.
ಭಾರತವನ್ನು ಇನ್ನಿಂಗ್ಸ್ ಸೋಲಿನಿಂದ ಪಾರು ಮಾಡಿದ ದ್ರಾವಿಡ್- ಲಕ್ಷ್ಮಣ್ ಜೋಡಿ ಈಗ ಗೆಲುವಿನ ವಾಸನೆಯನ್ನೂ ಹುಟ್ಟಿಸುತ್ತಿದೆ. ಐದನೇ ವಿಕೆಟ್ಗೆ 300 ರನ್ ಕಲೆ ಹಾಕಿರುವ ಈ ಜೋಡಿಯ ಮುರಿದ ಆಟ ಮುಂದುವರೆದಿದೆ.
ವಿಂಡೀಸ್ ವಿರುದ್ಧ 1983 (ಚೆನ್ನೈ) ರಲ್ಲಿ ಎರಡೂವರೆ ದಿನ ಕಣದಲ್ಲಿ ನಿಂತು ಆಡಿದ್ದ ಗವಾಸ್ಕರ್ 236 ರನ್ ಗಳಿಸಿದ್ದರು. ಇದು ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿತ್ತು. ಗವಾಸ್ಕರ್ ಆಟದ ಗತಿಗೆ ಹೋಲಿಸಲೇ ಆಗದಂಥ ಆಕ್ರಮಣಕಾರಿ ಆಟವಾಡಿರುವ ಲಕ್ಷ್ಮಣ್ ಒಂದೂವರೆ ದಿನದಲ್ಲೇ ಆ ದಾಖಲೆಯನ್ನು ಮುರಿದಿದ್ದಾರೆ.
1956ರಲ್ಲಿ ವಿನೂ ಮಂಕಡ್ 231 ರನ್ ಗಳಿಸಿದ್ದು, ಅದು ಗವಾಸ್ಕರ್ ಮುನ್ನಾ ದಾಖಲೆಯಾಗಿತ್ತು.
ಪ್ರಥಮ ದರ್ಜೆ ಕ್ರಿಕೆಟ್ಟಿನಲ್ಲಿ ದ್ವಿಶತಕ ವೀರ ಎನಿಸಿರುವ ಲಕ್ಷ್ಮಣ್ ಈಗಾಗಲೇ ಒಂದು ತ್ರಿಶತಕ ಕೂಡ ದಾಖಲಿಸಿದ್ದಾರೆ. ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲೂ ತ್ರಿಶತಕ ಗಳಿಸುವ ಎಲ್ಲಾ ಲಕ್ಷಣಗಳನ್ನೂ ಲಕ್ಷ್ಮಣ್ ತೋರಿದ್ದು, ಅದರತ್ತ ದಾಪುಗಾಲಿಟ್ಟಿದ್ದಾರೆ. ವಿಂಡೀಸ್ನ ಲಾರಾ ಗಳಿಸಿರುವ 375 ರನ್ಗಳ ದಾಖಲೆ ಕೂಡ ಲಕ್ಷ್ಮಣ್ ಮನಸ್ಸಿನಲ್ಲಿ ಅಲೆಯಾಡುತ್ತಿರಬಹುದು.
ಮತ್ತೊಂದು ತುದಿಯಲ್ಲಿ ವೈರಲ್ ಜ್ವರದಿಂದ ಬಳಲುತ್ತಿರುವ ದ್ರಾವಿಡ್ (ಅಜೇಯ 124) ಕಾಲು ಉಳುಕಿದ್ದು, ಅಂಥಾದರಲ್ಲೂ ರನ್ನರ್ ಸಹಾಯವಿಲ್ಲದೆ ಛಲ ಮೆರೆಯುತ್ತಿದ್ದಾರೆ. ಈಗ ಭಾರತದ ಸ್ಕೋರು 531/4. ಲಕ್ಷ್ಮಣ್ ಅಜೇಯ 248.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications