ದ್ವಿಶತಕದತ್ತ ಲಕ್ಷ್ಮಣ್, ಇನ್ನಿಂಗ್ಸ್ ಸೋಲಿಂದ ಪಾರಾದ ಭಾರತ
ಕೊಲ್ಕತಾ : ಇಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್ ಟೆಸ್ಟ್ನಲ್ಲಿ ಭಾರತ ವಿರುದ್ಧ ಇನ್ನಿಂಗ್ಸ್ ಗೆಲುವು ಪಡೆವ ಆಸ್ಟ್ರೇಲಿಯಾದ ಕನಸು ನುಚ್ಚು ನೂರಾಯಿತು. ಹೆಬ್ಬಂಡೆಯಂತೆ ವಿಕೆಟ್ ಬಳಿ ನಿಂತ ವಿ.ವಿ.ಎಸ್. ಲಕ್ಷ್ಮಣ್ ಭೋಜನ ವಿರಾಮಕ್ಕೆ ಅಜೇಯ 171 ರನ್ ಗಳಿಸುವ ಮೂಲಕ ಭಾರತ, ಉತ್ತಮ ಹೋರಾಟದ ಮೊತ್ತ ಕಲೆ ಹಾಕುವ ಕುರುಹು ತೋರಿದ್ದಾರೆ.
ಲಕ್ಷ್ಮಣ್ಗೆ ಉತ್ತಮ ಬೆಂಬಲ ನೀಡುತ್ತಿರುವ ಕಲಾತ್ಮಕ ಆಟಗಾರ ಕನ್ನಡದ ಕುವರ ರಾಹುಲ್ ದ್ರಾವಿಡ್ ಅಜೇಯ 50 ರನ್ ಮಾಡಿ ಆಡುತ್ತಿದ್ದಾರೆ. ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು 20 ರನ್ ಮಾಡಬೇಕಿದ್ದ ಭಾರತ ಬುಧವಾರ ಉತ್ತಮವಾಗೇ ಆಟ ಆರಂಭಿಸಿತು.
ಲಕ್ಷ್ಮಣ್ ಹಾಗೂ ದ್ರಾವಿಡ್ ಮನಮೋಹಕ ಬೌಂಡಿರಿಗಳ ಮೂಲಕ ಈಡನ್ ಗಾರ್ಡನ್ ಮೈದಾನದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ಇನ್ನಿಂಗ್ಸ್ ಸೋಲಿನ ದವಡೆಯಿಂದ ಪಾರಾದ ಮೇಲಂತೂ ಬಿಡು ಬೀಸಾಗಿ ಆಡಿದ ಈ ಇಬ್ಬರು ಆಸ್ಟ್ರೇಲಿಯಾ ಬೌಲರ್ಗಳಿಗೆ ಬೆವರು ಇಳಿಸಿದರು. ಅದರಲ್ಲೂ ಶೇನ್ ವಾರ್ನ್ ಅವರಂತೂ ಸಂಪೂರ್ಣ ತಲೆಕೆಡಿಸಿಕೊಂಡಿದ್ದು, ಅವರ ವರ್ತನೆಯಿಂದಲೇ ಕಂಡುಬಂತು.
ವಾರ್ನ್ ಎರಡನೇ ಇನ್ನಿಂಗ್ಸ್ನಲ್ಲಿ ಬೌಲ್ ಮಾಡಿದ 27 ಓವರುಗಳಲ್ಲಿ ಮೂರು ಮೇಡನ್ ಮಾಡಿದರಾದರೂ ಒಟ್ಟು 120 ರನ್ ನೀಡಿ ಒಂದು ವಿಕೆಟ್ ಪಡೆವ ಮೂಲಕ ದುಬಾರಿ ಬೌಲರ್ ಎನಿಸಿದರು. ದ್ರಾವಿಡ್ ಹಾಗೂ ಲಕ್ಷ್ಮಣ್ ವಾರ್ನ್ ಬೌಲಿಂಗ್ನಲ್ಲಿ ಸೊಗಸಾದ ಬೌಂಡರಿಗಳನ್ನು ಭಾರಿಸಿದರು.
ಭೋಜನ ವಿರಾಮದ ವೇಳೆಯಲ್ಲಿ ಭಾರತ 104 ಓವರುಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 376ರನ್ ಗಳಿಸಿದ್ದು, 102 ರನ್ಗಳ ಮುನ್ನಡೆ ಪಡೆದಿದೆ. ಉತ್ತಮ ಹೋರಾಟದ ಮೊತ್ತ ಕಲೆ ಹಾಕುವ ಎಲ್ಲ ಕುರುಹು ತೋರಿದೆ. ಲಕ್ಷ್ಮಣ್ ಅವರಂತೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿ ಆಸ್ಟ್ರೇಲಿಯಾ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಬಲ್ಲ ಸಮರ್ಥ ಬ್ಯಾಟ್ಸ್ಮನ್ ತಾವು ಎಂಬುದನ್ನು ನಿರೂಪಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಕೂಡ ಅರ್ಧ ಶತಕ ಪೂರೈಸಿದ್ದ ಅವರು, ಎರಡನೇ ಇನ್ನಿಂಗ್ಸ್ನಲ್ಲಿ ಒಂದೂವರೆ ಶತಕ ಪೂರೈಸಿದ್ದು, ದ್ವಿಶತಕ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇದು ಟೆಸ್ಟ್ನಲ್ಲಿ ಅತ್ಯಧಿಕ ಮೊತ್ತವಾಗಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications