ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಕೇವಲ ಅವರಿವರ ಬಗ್ಗೆ ಚಿಂತಿಸಿದರೆ ಸಾಲದು. ನಿಮ್ಮ ಬಗ್ಗೆಯೂ ಯೋಚಿಸಿ, ಹೇಳಿಕೆ ಮಾತಿಗೆ ಬೆಲೆಕೊಟ್ಟೀರಿ ಜೋಕೆ.

ವೃಷಭ : ಇದು ಋತು ಪರಿವರ್ತನೆಯ ಕಾಲ. ನಿಮ್ಮ ಬದುಕಲ್ಲೂ ಪರಿವರ್ತನೆ ಕಾದಿದೆ. ಇಂದು ಕೈಗೊಳ್ಳುವ ನಿರ್ಧಾರದಿಂದ ಮುಂದೆ ದೊಡ್ಡ ಲಾಭ ಇದೆ.

ಮಿಥುನ : ಪ್ರಯಾಣ ಅನಿವಾರ್ಯ. ಮನೆಯಲ್ಲಿ ಕೊಂಚ ಕಿರಿಕಿರಿ. ಹಣ ಕಾಸಿನ ವ್ಯವಹಾರ ಈ ದಿನದ ಮಟ್ಟಿಗೆ ಬೇಡ. ದೇವರ ಪೂಜೆಯಿಂದ ಕಷ್ಟ ಪರಿಹಾರ.

ಕಟಕ : ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಹತ್ತು ಬಾರಿ ಯೋಚಿಸಿ. ದುಡುಕಿನ ನಿರ್ಧಾರದಿಂದ ಭಾರಿ ನಷ್ಟ ಆದೀತು. ಚೋರ ಭಯ ಇದೆ. ಎಚ್ಚರ.

ಸಿಂಹ : ಸುಖ, ಶಾಂತಿ, ನೆಮ್ಮದಿ ನಿಮ್ಮನ್ನು ಅರಸಿ ಬಂದಿದೆ. ಇಂದು ನೀವು ಮಣ್ಣು ಮುಟ್ಟಿದರೂ ಚಿನ್ನವಾಗುತ್ತದೆ. ಆದರೂ ಗುರು, ದೈವದ ಬಗ್ಗೆ ಗೌರವ ಇರಲಿ.

ಕನ್ಯಾ : ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು ಎಂಬಂತಿದೆ ನಿಮ್ಮ ಮನಸ್ಸು. ಎತ್ತೆತ್ತಲೋ ಸಾಗುತ್ತಿರುವ ಮನಸ್ಸಿಗೆ ಕಡಿವಾಣ ಹಾಕಿ.

ತುಲಾ : ಪ್ರೇಮ, ಪ್ರೀತಿಗೆ ಇದು ಕಾಲವೂ ಅಲ್ಲ. ಸೂಕ್ತ ವೇದಿಕೆಯೂ ಅಲ್ಲ. ಹತ್ತಾರು ಕಣ್ಣುಗಳು ನಿಮ್ಮನ್ನೇ ನೋಡುತ್ತಿವೆ. ಎಚ್ಚರ ತಪ್ಪಿದರೆ, ಕೆಟ್ಟ ಹೆಸರು ಶಾಶ್ವತ.

ವೃಶ್ಚಿಕ : ಗೆಳೆಯರೊಂದಿಗೆ ಶುಭದಿನ. ಪ್ರಯಾಣದಿಂದ ಧನಲಾಭ. ವ್ಯಾಪಾರ ವಹಿವಾಟಿನಲ್ಲಿ ಧನಾಗಮ. ಅಪರೂಪದ ವ್ಯಕ್ತಿಗಳ ಭೇಟಿ.

ಧನಸ್ಸು : ನಿಮ್ಮ ಅತ್ಮೀಯ ಸ್ನೇಹಿತರ ಅತಿರೇಕದ ವರ್ತನೆ ನೋಡಿಯೂ ಸುಮ್ಮನಿರುವುದು ಸರಿಯಲ್ಲ. ಲೋಕಕ್ಕಾದರೂ ಅಂಜಬೇಕಲ್ಲ. ಸಹವಾಸದಿಂದ ಸನ್ಯಾಸಿಯೂ ಕೆಟ್ಟಂತಾಗಬಾರದು ಹುಷಾರ್‌.

ಮಕರ : ಅವಿರತ ಶ್ರಮದಿಂದ ಬಳಲಿದ್ದೀರಿ. ಆರೋಗ್ಯದ ಕಡೆ ಗಮನ ನೀಡಿ. ವಿದ್ಯಾರ್ಥಿಗಳಿಗೆ ಶುಭದಿನ. ಮನೆಯಲ್ಲಿ ಮಂಗಳಕಾರ್ಯದ ಮಾತುಕತೆ.

ಕುಂಭ : ಯಾರು ಏನೋ ಎಂದರೆಂದು ನೀವೇಕೆ ತಲೆ ಕೆಡಿಸಿಕೊಳ್ಳುತ್ತೀರಿ. ನಿಮ್ಮ ಭವಿಷ್ಯ ಬರೆಯಲು ಯಾರಿಗೂ ಸಾಧ್ಯವಿಲ್ಲ. ಭಗವಂತನ ನಂಬಿದರೆ ಜಯ ಸಿಗದೇ ಹೋಗುವುದಿಲ್ಲ.

ಮೀನ : ಕೈಲಾಗದವರು ಮೈ ಪರಚಿಕೊಳ್ಳುತ್ತಾರೆ. ಪರಚಿಕೊಳ್ಳಲಿ ಬಿಡಿ. ನಿಮ್ಮ ಶ್ರದ್ಧೆ ಗೌರವ, ಕೀರ್ತಿ ತಂದುಕೊಡುತ್ತದೆ. ಕಾಯಕವೇ ಕೈಲಾಸ ಎಂದು ತಿಳಿದರೆ ಸಾಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X