ಮಾ.15 ರಿಂದ ದಕ್ಷಿಣ ಕರ್ನಾಟಕದ 6 ಜಿಲ್ಲೆಯಲ್ಲಿ ಸ್ಟಾರ್ ಟಿವಿ ಇಲ್ಲ
ಬೆಂಗಳೂರು : ದಕ್ಷಿಣ ಕರ್ನಾಟಕದ ಆರು ಜಿಲ್ಲೆಗಳ ಕೇಬಲ್ ನಿರ್ವಹಣಾಕಾರರು ಸ್ಟಾರ್ ಚಾನೆಲ್ಗಳ ಚಂದಾ ಹಣ ಏರಿಕೆಯನ್ನು ವಿರೋಧಿಸಿ ಸ್ಟಾರ್ ಟಿವಿ ಚಾನೆಲ್ಗಳ ಪ್ರಸಾರವನ್ನು ಮಾರ್ಚ್ 15 ರಿಂದ ನಿಲ್ಲಿಸಲು ನಿರ್ಧರಿಸಿದ್ದಾರೆ.
ಸ್ಟಾರ್ ಟಿವಿ ಚಾನೆಲ್ ಬಳೆಕದಾರರು ತೆರಬೇಕಾದ ಹಣವನ್ನು 24.75 ರೂಪಾಯಿಯಿಂದ 31 ರೂಪಾಯಿಗೆ ಏರಿಸಿದ್ದು , ಇದು ಬಳಕೆದಾರರಿಗೆ ಹೊರೆಯಾಗಲಿದೆ. ಆದ್ದರಿಂದ ಸ್ಟಾರ್ ಟಿವಿ ಚಾನೆಲ್ಗಳ ಪ್ರಸಾರವನ್ನು ಮಾರ್ಚ್ 15ರಿಂದ ಚಿಕ್ಕಮಗಳೂರು, ಹಾಸನ, ಉಡುಪಿ, ಶಿವಮೊಗ್ಗ , ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೇಬಲ್ ನಿರ್ವಹಣಾಕಾರರ ಸಂಘದ ವಕ್ತಾರ ಎಸ್. ಆರ್. ಶ್ರೀಧರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸ್ಟಾರ್ ಟಿವಿಯು ಏಕ ಪಕ್ಷೀಯವಾಗಿ ಪ್ರಸಾರ ದರವನ್ನು ಶೇ 30ರಿಂದ ಶೇ 50ಕ್ಕೇರಿಸಿದೆ ಎಂದು ಆಪಾದಿಸಿದ ಶ್ರೀಧರ್, ತಮ್ಮ ಪ್ರಸಾರ ವಲಯದಲ್ಲಿ ಕೇವರ ಶೇ 10 ರಷ್ಟು ಬಳಕೆದಾರರು ಮಾತ್ರ ಸ್ಟಾರ್ ಟಿವಿ ಚಾನೆಲ್ನ ಚಂದಾದಾರರಾಗಿರುವುದರಿಂದ ಸ್ಟಾರ್ ಟಿವಿ ಪ್ರಸಾರವನ್ನು ನಿಲ್ಲಿಸಲು ನಿಲ್ಲಿಸಲಿದ್ದೇವೆ. ಈ ಚಾನೆಲ್ಗೆ ಬದಲಾಗಿ ಬೇರೆ ಜನಪ್ರಿಯ ಚಾನೆಲ್ಗಳನ್ನು ನೀಡಲಾಗುವುದು ಅಥವ ಬಳಕೆದಾರರಿಂದ ಕಡಿಮೆ ಹಣ ಪಡೆಯಲಾಗುವುದು ಎಂದು ಅವರು ಹೇಳಿದರು.
(ಯುಎನ್ಐ)