2001-02 ರಲ್ಲಿ 487.74 ಕೋಟಿ ಆದಾಯದನಿರೀಕ್ಷೆಯಲ್ಲಿ ಟಿಟಿಡಿ
ತಿರುಪತಿ : 2001- 02ನೇ ಸಾಲಿನಲ್ಲಿ 487.74 ಕೋಟಿ ರುಪಾಯಿ ಹಣ ತನ್ನ ಬೊಕ್ಕಸ ತುಂಬಬಹುದೆಂದು ತಿರುಮಲ ವೆಂಕಟೇಶ್ವರ ದೇವಸ್ಥಾನದ ಆಡಳಿತ ದತ್ತಿ ತಿರುಮಲ ತಿರುಪತಿ ದೇವಸ್ಥಾನಂಸ್ (ಟಿಟಿಡಿ) ತನ್ನ ಆಯವ್ಯಯಪತ್ರದಲ್ಲಿ ಅಂದಾಜು ಮಾಡಿದೆ.
ಕಾಣಿಕೆಗಳಿಂದ ಸಿಂಹಪಾಲು, ಅಂದರೆ 178.76 ಕೋಟಿ ರುಪಾಯಿ ಸಂದಾಯವಾಗುವ ನಿರೀಕ್ಷೆಯಿದೆ. ಅರ್ಚನೆ ಟಿಕೇಟುಗಳಿಂದ 42.38 ಕೋಟಿ ಹಾಗೂ ವಿವಿಧೆಡೆ ತೊಡಗಿಸಿರುವ ಹಣದ ಬಡ್ಡಿ ರೂಪದಲ್ಲಿ 135.86 ಕೋಟಿ ರುಪಾಯಿ ಆದಾಯ ದತ್ತಿಯ ಬೊಕ್ಕಸ ತುಂಬಲಿದೆ ಎಂಬುದು ಟಿಟಿಡಿ ಅಂದಾಜು.
ರಾಜ್ಯ ಪ್ರಧಾನ ಕಾಯದರ್ಶಿ (ಆದಾಯ) ಎ.ವಿ.ಎಸ್.ರೆಡ್ಡಿ ನೇತೃತ್ವದಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಟಿಟಿಡಿಯ ಆಯವ್ಯಯಕ್ಕೆ ಅಂತಿಮ ರೂಪು ನೀಡಲಾಯಿತು. ಯಾತ್ರಾರ್ಥಿಗಳ ಕಲ್ಯಾಣ ಕಾಮಗಾರಿಗಳಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವುದೂ ಆಯವ್ಯಯ ಪಟ್ಟಿಯ ಅಂಶಗಳಲ್ಲೊಂದು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಟಿಟಿಡಿ ವ್ಯವಸ್ಥಾಪಕ ಅಧಿಕಾರಿ ಪಿ.ಕೃಷ್ಣಯ್ಯ ಈ ವಿಷಯ ತಿಳಿಸಿದರು. ತಿರುಮಲದಲ್ಲಿ ಶ್ರೀನಿವಾಸ ಸಂಕೀರ್ಣ ನಿರ್ಮಾಣಕ್ಕೆ 20 ಕೋಟಿ ರುಪಾಯಿ ಹಾಗೂ ಕಲ್ಯಾಣಿ ಅಣೆಕಟ್ಟಿನಿಂದ ಶ್ರೀವಾರಿ ಮೆಟ್ಟುವಿಗೆ ನೀರು ಹಾಯಿಸಲು ಪೈಪ್ಲೈನ್ ಕಾಮಗಾರಿಗೆ 3 ಕೋಟಿ ರುಪಾಯಿ ವಿನಿಯೋಗಿಸಲಾಗುವುದು ಎಂದರು.
ಯಾವ್ಯಾವುದಕ್ಕೆ ಎಷ್ಟೆಷ್ಟು ಬಜೆಟ್ಟು
ಯಾತ್ರಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಹಾಗೂ ದೇವಾಲಯದ ಅಭಿವೃದ್ಧಿಗೆ 25 ಕೋಟಿ ರುಪಾಯಿ, ಪ್ರಸ್ತುತ ನಡೆಯುತ್ತಿರುವ ರಸ್ತೆ ಕಾಮಗಾರಿಗಳಿಗೆ 15 ಕೋಟಿ ರುಪಾಯಿ ಮತ್ತು ಹರಿತ ಯೋಜನೆಗಾಗಿ 7 ಕೋಟಿ ರುಪಾಯಿ ವೆಚ್ಚ ಮಾಡಲಾಗುವುದು. ಟಿಟಿಡಿಯ ಧರ್ಮ ಪರಿಷತಗೆ 5 ಕೋಟಿ, ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 8 ಕೋಟಿ ಹಾಗೂ ಬಾಲಾಜಿ ಅಂಗವಿಕಲರ ಸಂಶೋಧನೆ, ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿ ಸಂಸ್ಥೆಗೆ 4 ಕೋಟಿ ರುಪಾಯಿ ಮಂಜೂರು ಮಾಡಲಾಗಿದೆ. ರಸ್ತೆಯ ಅಗಲೀಕರಣ ಹಾಗೂ ರೇನಿಗುಂಟ ಮತ್ತು ತಿರುಪತಿ ನಡುವೆ ನಾಲ್ಕು ಸಾಲಿನ ರಸ್ತೆಗಳ ನಿರ್ಮಾಣ ಮೊದಲಾದ ಕಾಮಗಾರಿಗಳಿಗೆ ರಸ್ತೆ ಮತ್ತು ಕಟ್ಟಡಗಳ ಇಲಾಖೆಗೆ ಕೊಡುವ ಸಾಲವನ್ನು 10.85 ಕೋಟಿ ರುಪಾಯಿಗಳಿಗೆ ಏರಿಸಲಾಗಿದೆ. ಜೊತೆಗೆ ಅರ್ಚಕರ ಕ್ಷೇಮಾಭಿವೃದ್ಧಿ ನಿಧಿಗಾಗಿ 4 ಕೋಟಿ ರುಪಾಯಿ ಮಂಜೂರಾಗಿದೆ ಎಂದು ಕೃಷ್ಣಯ್ಯ ವಿವರಿಸಿದರು.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications