ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ಲಕ್ ಚೆನ್ನಾಗಿರುವುದರಿಂದ ದಿನ ವಾರ ನಕ್ಷತ್ರಗಳ ಹಂಗಿಲ್ಲದೆ ಇಂದು ಎಲ್ಲ ಕೆಲಸಗಳಲ್ಲಿಯೂ ನೀವು ಮುನ್ನುಗ್ಗಬಹುದು. ಸಂಗಾತಿಯಾಂದಿಗಿನ ವಿರಸಕ್ಕೆ ಇವತ್ತು ಫುಲ್ ಸ್ಟಾಪ್.ವೃಷಭ :ಬೆಳಿಗ್ಗೆ ಕಾಡುವ ಸೋಮಾರಿತನವನ್ನು ಕಿತ್ತು ಹಾಕುವಲ್ಲಿ ನೀವು ಯಶಸ್ವಿಯಾದರೆ ಬಚಾವ್ ಆದಂತೆ. ದಿನವೆಲ್ಲಾ ಸಂಭ್ರಮದಲ್ಲಿ ಓಡಾಡುತ್ತೀರಿ. ಮನಸ್ಸು ಉಲ್ಲಾಸವಾಗಿರುವಾಗ ಖುಷಿಯಾಗಿರಲು ಕಾರಣ ಬೇಕೆ?
ಮಿಥುನ : ನಿಮ್ಮ ಧೈರ್ಯದ ಮೇಲೆ ನಿಮ್ಮ ಆರೋಗ್ಯ ಅವಲಂಬಿಸಿದೆ ಅಂತ ತಿಳಿದಿರುವುದರಿಂದ ಹೆದರಿಕೆಗೆ ಅವಕಾಶ ಇಲ್ಲ. ನಿಮ್ಮ ಬಂಧುಗಳ ಕಾಳಜಿಯಿಂದ ಖುಷಿಯಾಗಿರುತ್ತೀರಿ.
ಕಟಕ : ಚೆಲುವು ಸೌಂದರ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಚರ್ಚೆ ತಪ್ಪು ದಾರಿಯಲ್ಲಿ ಸಾಗುತ್ತಿದೆ. ನಿಮ್ಮ ವಾದವನ್ನು ಬೆಂಬಲಿಸಲು ಸಾಕಷ್ಟು ಕಚ್ಚಾ ಸಾಮಾಗ್ರಿ ಇಲ್ಲದೆ ತಬ್ಬಿಬ್ಬಾಗುವ ಸಾಧ್ಯತೆ ಇದೆ. ಆದ್ದರಿಂದ ಸದ್ಯಕ್ಕೆ ಮೌನವಾಗಿರಿ.
ಸಿಂಹ : ನೀವು ಆಟೋಟಗಳಲ್ಲಿ ಭಾಗವಹಿಸುವವರಾ ? ಇವತ್ತು ಹಿಂಜರಿಯಲು ನಿಮ್ಮ ಬಳಿ ಕಾರಣಗಳೇ ಇರುವುದಿಲ್ಲ. ಯಾಕೆಂದರೆ ಇವತ್ತು ಗೆಲುವು ನಿಮ್ಮ ಹತ್ತಿರ ಇದೆ.
ಕನ್ಯಾ : ಆಫೀಸಿನಲ್ಲಿ ಕೆಲಸ ರಾಶಿ ಬಿದ್ದಿರುವುದರಿಂದ ಬೇಜಾರು ಮಾಡಿಕೊಳ್ಳುತ್ತೀರಿ. ಆದರೆ ಅದರ ಕ್ರೆಡಿಟ್ ಸದ್ಯದಲ್ಲಿಯೇ ನಿಮ್ಮ ಪಾಲಾಗಲಿದೆ.
ತುಲಾ : ಸ್ನೇಹಿತರೊಂದಿಗೆ ಜಗಳ ಕಾದರೆ ಒಂದು ಒಳ್ಳೆಯ ಊಟ ಮಿಸ್ ಮಾಡಿಕೊಳ್ಳುತ್ತೀರಿ. ಗೃಹ ಕೃತ್ಯಗಳಲ್ಲಿ ಗೆಲುವಿದೆ. ಮನೆಯಲ್ಲಿ ಮಕ್ಕಳು ಮಂದಿಯಾಂದಿಗೆ ಸಂತಸ ಹಂಚಿಕೊಳ್ಳುವುದೆಂದರೆ ಶುಭ ತಾನೇ ?
ವೃಶ್ಚಿಕ : ಪ್ರಯಾಣ ಹೊರಟ ಬಂಧುಗಳ ಆಗಮನದಿಂದ ಖುಷಿಯಾಗಿರುತ್ತೀರಿ. ಸ್ನೇಹಿತರು ಆರೋಗ್ಯವಂತರಾಗುತ್ತಿರುವುದರಿಂದ ನೆಮ್ಮದಿ ಕೂಡ.
ಧನಸ್ಸು : ಷೇರು ವ್ಯವಹಾರಗಳಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಬೇಕೆಂದಿಲ್ಲ. ನಿಮಗೆ ಒಳ್ಳೆಯದಾಗಲಿದೆ. ಕೋರ್ಟ್ ವ್ಯವಹಾರಗಳತ್ತ ಮಾತ್ರ ಈಗ ಹೆಚ್ಚಿನ ಗಮನ ಕೊಡುವುದು ಬೇಡ.
ಮಕರ : ಹೆಚ್ಚು ಸ್ವಾಭಿಮಾನ ಇದ್ದರೆ ಅದರಿಂದ ನಿಮಗೇ ಹಾನಿಯಾಗುವುದು. ಸೋಲುವುದನ್ನು ಕಲಿಯಬೇಕಲ್ಲವೇ ? ಆರೋಗ್ಯ ಸುಧಾರಿಸಿಕೊಳ್ಳಿ.
ಕುಂಭ : ಮನೆಯಲ್ಲಿ ಶುಭ ಕಾರ್ಯವಿಟ್ಟುಕೊಂಡಿದ್ದೀರಿ. ಲಕ್ಷ್ಮಿ ಆರಾಧನೆಯಿಂದ ಒಳ್ಳೆಯದಾಗುತ್ತದೆ. ನಿಮ್ಮ ಆಫೀಸು ಕೆಲಸಗಳಲ್ಲಿ ಯಾವುದೇ ಏರುಪೇರಾಗುವುದಿಲ್ಲ.
ಮೀನ : ನೀವೊಡ್ಡಿದ ಸ್ಪರ್ಧೆಗೆ ಉತ್ತರ ಸಿಗುತ್ತಿದೆ. ದಂಗಾಗುವ ಸರದಿ ನಿಮ್ಮದು. ಹಣ ಕೈ ಬಿಡುತ್ತಿರುವುದರ ಬಗ್ಗೆ ಬೇಜಾರು ಬೇಡ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications