ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಪೆ ಉದ್ವಿಗ್ನ : ಕೋಮು ಗಲಭೆಯಿಂದಾಗಿ ನಿಷೇಧಾಜ್ಞೆ ಜಾರಿ

By Staff
|
Google Oneindia Kannada News

(ಮಂಗಳೂರು ಪ್ರತಿನಿಧಿಯಿಂದ)

ಉಡುಪಿ : ಇಲ್ಲಿನ ಮಲ್ಪೆ ಠಾಣಾ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಎರಡು ಕೋಮುಗಳ ನಡುವೆ ಹಠಾತ್ತನೆ ಉಂಟಾದ ಘರ್ಷಣೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿ ಸೆಕ್ಷನ್‌ 144 ರ ಅನ್ವಯ ನಿಷೇಧಾಜ್ಞೆ ಯನ್ನು ಜಾರಿಗೊಳಿಸಲಾಗಿದೆ.

ಅಕ್ರಮ ಚಟುಪಟಿಕೆಗಳಲ್ಲಿ ತೊಡಗಿದ್ದ ಕೆಲವು ವ್ಯಕ್ತಿಗಳನ್ನು ಇನ್ನೊಂದು ಕೋಮಿನವರು ಪ್ರಶ್ನಿಸಿದಾಗ ಗಲಾಟೆ ಆರಂಭವಾಯಿತು. ಈ ಘರ್ಷಣೆ ಕೋಮು ಗಲಭೆಗೆ ತಿರುಗಿ ಮಲ್ಪೆಯ ಹೊಡೆ, ಬೆಂಗ್ರೆ ಮತ್ತಿತರ ಪ್ರದೇಶಗಳಲ್ಲಿ ಹೊಡೆದಾಟ ಶುರುವಾಗಿ, ಕೆಲವರು ಗಾಯಗಳಾಗಿವೆ.

ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಭಯ ಕೋಮುಗಳ ಜನರು ವದಂತಿಗಳಿಗೆ ಕಿವಿಗೊಡದೆ, ಶಾಂತಿ ಕಾಪಾಡಬೇಕೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಡಾ. ವಿ. ಎಸ್‌. ಆಚಾರ್ಯ ವಿನಂತಿಸಿಕೊಂಡಿದ್ದಾರೆ. ಈ ಗಲಾಟೆಯನ್ನು ಮುಂದುವರೆಸಿಕೊಂಡು ಹೋಗಬಾರದು ಎಂದು ಕಾಂಗ್ರೆಸ್‌ನ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X