ಹನುಮನ ನೋಡಿದಿರಾ .. ಪಾಂಡಿಚೇರಿಹನುಮನಿಗೆ ಐದು ಮುಖ
ಚೆನ್ನೈ : ಐದು ಮುಖಗಳ ಹನುಮಂತನ ದೇವಸ್ಥಾನ ಪಾಂಡಿಚೇರಿಯಲ್ಲಿ ನಿರ್ಮಾಣವಾಗುತ್ತಿದೆ.
ಪುರಾಣದಲ್ಲಿ ಪಾಂಡಿಚೇರಿಗೂ ಹನುಂತನಿಗೂ ಸಂಬಂಧವಿರುವುದರಿಂದ ಅಲ್ಲಿನ ಜಯ ಮಾರುತಿ ಖಾಸಗಿ ಸೇವಾ ಟ್ರಸ್ಟ್ ಈವರೆಗೆ ದೇಶದಲ್ಲೆಲ್ಲೂ ಇಲ್ಲದಂತಹ ಪಂಚಮುಖೀ ವಿಗ್ರಹವನ್ನು ಪಪ್ಪಂಚವಾಡಿಯಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಪಾಂಡಿಚೇರಿಯಲ್ಲಿ ಋಷಿಗಳು ತಪಸ್ಸನ್ನಾಚರಿಸಿ ಸಿದ್ಧರಾದ ಸ್ಥಳವಾದ್ದರಿಂದ ಪಂಚಮುಖೀ ಹನುಮಾನ್ ವಿಗ್ರಹ ಸ್ಥಾಪನೆಗೆ ಪಾಂಡಿಚೇರಿಯನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ನ ಸ್ಥಾಪಕ ಎಸ್. ರಮಣಿ ಅಣ್ಣ ಹೇಳಿದ್ದಾರೆ.
ಟ್ರಸ್ಟ್ನ ಇನ್ನೊಬ್ಬ ಸದಸ್ಯನಿಗೆ ಸೇರಿದ್ದ ಐದು ಎಕರೆ ಜಾಗದಲ್ಲಿ ರಮಣಿ ಅವರಿಗೆ ದೈವಿಕ ಆಜ್ಞೆಯಾಂದು ಅನುಭವಕ್ಕೆ ಬಂದಿರುವುದರಿಂದ ದೇವಸ್ಥಾನ ಕಟ್ಟಲು ಉತ್ಸುಕರಾಗಿರುವುದಾಗಿ ಅವರು ಹೇಳಿದರು.
36 ಅಡಿ ಎತ್ತರ ಇರುವ ಈ ಹನುಮಾನ್ ವಿಗ್ರಹ ಆಂಜನೇಯನ ಐದು ಅವತಾರಗಳನ್ನು ಬಿಂಬಿಸುವ ಪಂಚಮುಖವನ್ನೊಳಗೊಂಡಿರುತ್ತದೆ. ಪಾಂಡಿಚೇರಿಯ ತಿಂಡಿವಾನಮ್ ಹೈವೇಯ ಬಳಿ ದೇವಸ್ಥಾನ ನಿರ್ಮಾಣವಾಗುತ್ತಿದೆ. ಶಾಲೆ, ಅನ್ನದಾನ ಕೇಂದ್ರ, ವೇದ ಪಾಠಶಾಲೆಗಳೊಂದಿಗೆ, ಬರುವ ವರ್ಷದ ಏಪ್ರಿಲ್ನಲ್ಲಿ ದೇವಸ್ಥಾನ ಉದ್ಘಾಟನೆಗೊಳ್ಳಲಿದೆ.
(ಯುಎನ್ಐ)