Get Updates
Get notified of breaking news, exclusive insights, and must-see stories!

ಇವತ್ತೋ, ನಾಳೆಯೋ ರಣತುಂಗ ಪೊಲೀಸರ ಅತಿಥಿಯಾಗಲಿದ್ದಾರೆ

ಕೊಲಂಬೋ : ಕ್ರಿಕೆಟ್ಟಾಡುತ್ತಿದ್ದ ಹುಡುಗರು ಹೊಡೆದ ಚೆಂಡು ತನ್ನ ಮನೆಯ ಪ್ರಾಂಗಣಕ್ಕೆ ಬಿತ್ತೆಂದು, ಆ ಹುಡುಗರನ್ನು ರಕ್ತ ಬರುವಂತೆ ಹೊಡೆದ ಆರೋಪ ಹೊತ್ತಿರುವ ಶ್ರೀಲಂಕಾದ ಮಾಜಿ ಕ್ರಿಕೆಟ್‌ ನಾಯಕ ರಣತುಂಗ ಸದ್ಯದಲ್ಲೇ ಪೊಲೀಸರ ಬಂಧಿಯಾಗಲಿದ್ದಾರೆ.

ಗುಜರಾತ್‌ ಸಂತ್ರಸ್ತರ ನೆರವಿಗೆ ದೇಣಿಗೆ ಸಂಗ್ರಹಿಸಲು ಸಹಾಯಾರ್ಥ ಪಂದ್ಯವೊಂದರಲ್ಲಿ ಆಡಲು ಪ್ರಸ್ತುತ ಕೀನ್ಯಾಗೆ ಹೋಗಿರುವ ಅರ್ಜುನ ರಣತುಂಗ ವಾಪಸ್ಸು ಬರುವುದನ್ನೇ ಪೊಲೀಸರು ಕಾಯುತ್ತಿದ್ದಾರೆ. ವಾಪಸ್ಸು ಬಂದ ತಕ್ಷಣ ಆತನ ತಮ್ಮ ಪ್ರಸನ್ನ ರಣತುಂಗ ಹಾಗೂ ಇಬ್ಬರು ರಕ್ಷಣಾ ಸಿಬ್ಬಂದಿಯಾಂದಿಗೆ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ನ್ಯಾಯಾಲಯದಲ್ಲಿ ಹಾಜರು ಪಡಿಸಲಿದ್ದಾರೆ ಎಂದು ಕೊಲಂಬೋದ ಹಂಗಾಮಿ ಡಿಐಜಿ ದಯಾ ಜಯಸುಂದರ ತಿಳಿಸಿದ್ದಾರೆ.

ನಡೆದದ್ದೇನು ? : ಅಶೋಕ ವಿದ್ಯಾಲಯದ ಬಳಿಯೇ ರಣತುಂಗ ಮನೆಯಿದೆ. ಕಳೆದ ಶುಕ್ರವಾರ, ಮಾರ್ಚ್‌ 2 ರಂದು ವಿದ್ಯಾಲಯದ ವಿದ್ಯಾರ್ಥಿಗಳು ಕ್ರಿಕೆಟ್ಟಾಡುತ್ತಿದ್ದಾಗ ಚೆಂಡು ರಣತುಂಗ ಮನೆಯ ಆವರಣಕ್ಕೆ ಬಂದು ಬಿದ್ದಿದೆ. ಚೆಂಡು ತರಲು ಹೋದ ಮಕ್ಕಳ ಪೈಕಿ 7 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ರಕ್ಷಣಾ ಸಿಬ್ಬಂದಿ ಜೊತೆಗೆ ಖುದ್ದು ರಣತುಂಗಾ ಹಲ್ಲೆ ಮಾಡಿದ್ದಾರೆ ಎನ್ನುವುದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಪ. ಈ ಘಟನೆ ನಡೆದ ನಂತರ ರಣತುಂಗ ಕೀನ್ಯಾಗೆ ಹಾರಿದ್ದಾರೆ. ಶ್ರೀಲಂಕಾ ತುಂಬಾ ಈ ಸುದ್ದಿಯೇ ಹಬ್ಬಿದೆ.

ಮುಚ್ಚಿದ ಶಾಲೆ, ವ್ಯಾಪಕ ಪ್ರತಿಭಟನೆ : ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಅಶೋಕ ವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಮುಚ್ಚಿರುವ ಶಾಲೆ ಈ ಹೊತ್ತೂ ತೆರೆದಿಲ್ಲ. ವಿದ್ಯಾರ್ಥಿಗಳ ಜೊತೆಗೆ ಶಾಲೆಯ ಗುರುಗಳು ಹಾಗೂ ಮಕ್ಕಳ ತಂದೆ- ತಾಯಂದಿರೂ ಈ ಘಟನೆಗೆ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಬೇರೆ ಶಾಲೆಯ ಮಕ್ಕಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಶಾಲೆಯ ಪ್ರಾಂಶುಪಾಲ ಎಂ.ಡಿ.ಗುಣದಾಸ ಹೇಳಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+