ಮೈಸೂರು ಪೇಪರ್ ಮಿಲ್ಸ್ ಬಂಡವಾಳವಾಪಸಾತಿಗೆ ವ್ಯಾಪಕ ವಿರೋಧ
ಬೆಂಗಳೂರು : ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿಯಲ್ಲಿನ ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ನಿಂದ ಬಂಡವಾಳ ವಾಪಸ್ಸು ಪಡೆಯುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಸಾರ್ವಜನಿಕ ಉದ್ದಿಮೆಗಳ ಪುನರ್ ನಿರ್ಮಾಣ ಮತ್ತಿತರ ವಿಷಯಗಳ ಕುರಿತು ಅಧ್ಯಯನ ನಡೆಸಿದ ಪದ್ಮನಾಭನ್ ಸಮಿತಿ ಸಚಿವ ಸಂಪುಟಕ್ಕೆ ಈಗಾಗಲೇ ತನ್ನ ಮಧ್ಯಂತರ ವರದಿ ಸಲ್ಲಿಸಿದ್ದು, ಎಂಪಿಎಂನಿಂದ ಬಂಡವಾಳ ವಾಪಸಾತಿಯ ಪ್ರಸ್ತಾಪವನ್ನೂ ವರದಿಯಲ್ಲಿ ನಮೂದಿಸಿದೆ.
ಮಿಲ್ನ ನೌಕರರ ವಿವಿಧ ಸಂಘಟನೆಗಳು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ವಿವರಣಾತ್ಮಕ ಮನವಿ ಪತ್ರ ನೀಡಿದ್ದು, ಬಂಡವಾಳ ವಾಪಸಾತಿಯನ್ನು ಅರ್ಥಹೀನ ಮತ್ತು ಅನ್ಯಾಯ ಎಂದಿವೆ. ಎಂಪಿಎಂ ರೋಗಗ್ರಸ್ತ ಕಂಪನಿಯಲ್ಲ. ಅದು ಸಮೃದ್ಧವಾಗಿದೆ. ನೌಕರರಿಗೂ ಕಂಪನಿಯಲ್ಲಿ ಕೆಲಸ ಮಾಡಲು ಯಾವುದೇ ಕಿರಿಕಿರಿಯಿಲ್ಲ. ಹೀಗಿರುವಾಗ ಬಂಡವಾಳ ವಾಪಸಾತಿಯ ಪ್ರಶ್ನೆಯೇ ಬರುವುದಿಲ್ಲ ಎಂದು ಸಂಘಟನೆಗಳು ಮನವಿ ಪತ್ರದಲ್ಲಿ ತಿಳಿಸಿವೆ.
ಖಾಸಗೀಕರಣದಿಂದ ಸರ್ಕಾರ ತನ್ನ ಕೈಲಿರುವ ಸಾಕಷ್ಟು ಉತ್ತಮ ಅವಕಾಶಗಳನ್ನು ಬಿಟ್ಟುಕೊಟ್ಟಂತಾಗುತ್ತದೆ. ಆಧುನೀಕರಣ ಮತ್ತು ವಿಸ್ತರಣೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಮೇಲೆ ಸರ್ಕಾರ ನೂರಾರು ಕೋಟಿ ರುಪಾಯಿ ಸುರಿದಿದ್ದು, ಅದರ ಸತ್ಫಲಿತಾಂಶ ಈಗ ತಾನೇ ಹೊರಬೀಳುತ್ತಿದೆ. ಇಂಥಾ ಪರಿಸ್ಥಿತಿಯಲ್ಲಿ ಕಂಪನಿಯನ್ನು ಖಾಸಗಿಯವರ ಕೈಗೆ ಕೊಡುವುದು ತರವಲ್ಲ ಎಂದಿವೆ.
ಮಾಸ್ಟರ್ ಬ್ರೇನ್ ಸರ್.ಎಂ.ವಿಶ್ವೇಶ್ವರಯ್ಯ 1937ರಲ್ಲಿ 400 ಟನ್ ಸಾಮ್ಯರ್ಥ್ಯದ ಮಿಲ್ಲನ್ನು ಸಿದ್ಧಪಡಿಸಿ, ನಾಡಿಗೆ ನೀಡಿದ್ದರು. ನ್ಯೂಸ್ಪ್ರಿಂಟ್, ಬರವಣಿಗೆ ಕಾಗದಗಳು, ಮುದ್ರಣ ಕಾಗದಗಳು ಮೊದಲಾದ ತರಾವರಿ ಕಾಗದಗಳು ಪ್ರಸ್ತುತ ಈ ಮಿಲ್ಲಿನಲ್ಲಿ ತಯಾರಾಗುತ್ತಿವೆ.
ಭದ್ರಾವತಿಯಲ್ಲಿನ ಸಕ್ಕರೆ ಘಟಕ ಪ್ರತಿನಿತ್ಯ 2500 ಟನ್ ಸಕ್ಕರೆ ಉತ್ಪಾದಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯ 10 ಸಾವಿರ ರೈತರು ಹಾಗೂ 8 ಸಾವಿರ ಕೃಷಿ ಕೂಲಿಕಾರರಿಗೆ ಬೆಂಬಲ ನೀಡುತ್ತಿದೆ. ಭದ್ರಾವತಿಯ ಕುಡಿಯುವ ನೀರಿನ ಬೇಡಿಕೆಯ ಶೇ. 75 ರಷ್ಟನ್ನೂ ಸಂಸ್ಥೆ ಈಡೇರಿಸಿದೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications