ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಮಕ್ಕಳು ಇವತ್ತು ಸಂಜೆ ಒಳ್ಳೆಯ ಸುದ್ದಿ ತರುತ್ತಾರೆ. ಇದಕ್ಕಿಂದ ಶುಭ ಇನ್ಯಾವುದಿದೆ ಅಲ್ವೇ ? ಜೇಬು ಖಾಲಿಯಾದರೂ ಅದು ಮಕ್ಕಳಿಗೆಂದ ಮೇಲೆ ತಲೆನೋವೇ ಇಲ್ಲ.
ಮಿಥುನ : ಅನಾರೋಗ್ಯ ಸಮಸ್ಯೆಯತ್ತ ಗಮನವಿರಲಿ. ವಿದ್ಯೆಯಲ್ಲಿ ಪ್ರಗತಿ ಇಲ್ಲ ಎಂದು ಬೇಸರಿಸಿಕೊಳ್ಳಬೇಡಿ. ಮನೆ ಮಂದಿಯಾಂದಿಗೆ ಮಾತನಾಡುವ ಕನಸು ನನಸಾಗಲಿದೆ.
ಕಟಕ : ಹೊಸ ನೆಂಟರ ವಿಷಯ ಪಕ್ಕಕ್ಕಿರಲಿ. ನಿಮ್ಮ ಮನೆಯ ಕೆಲಸ ಕಾರ್ಯಗಳು ಪ್ರಗತಿಯಾಗುತ್ತವೆ. ಹೊಸ ಮನೆ ಕೊಂಡು ಕೊಳ್ಳಬೇಕೆಂದು ಯೋಚಿಸಿದ್ದರೆ, ಮುಂದುವರೆಯಲು ಇದು ಶುಭ ಸಮಯ.
ಸಿಂಹ : ಲಾಟರಿಯಿಂದ ನಿಮಗೆ ಸುಖ ಸಿಗದು ಎಂದು ಗೊತ್ತಿದ್ದ ಮೇಲೆ ಆ ಕಡೆಗೆ ಯಾಕೆ ಗಮನ ಹರಿಸಬೇಕು ? ಸ್ನೇಹಿತರು ಈಗ ನಿಮ್ಮ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಕಂಜ್ಯೂಸ್ ಅಂತ ಅನ್ನಿಸಿಕೊಳ್ಳಬೇಡಿ.
ಕನ್ಯಾ : ಸರಕಾರಿ ವ್ಯವಹಾರಗಳಲ್ಲಿ ಜಯವಾಗುತ್ತದೆ. ಹಿರಿಯರ ಆಶೀರ್ವಾದ ನಿಮ್ಮ ಮೇಲಿದೆ ಆದ್ದರಿಂದ ಹಾಕಿಕೊಂಡ ಪ್ಲಾನ್ಗಳಲ್ಲಿ ಯಡವಟ್ಟಾಗುವುದಿಲ್ಲ.
ತುಲಾ : ಧನಲಾಭವಿದ್ದರೂ, ಪಕ್ಕದಲ್ಲಿಯೇ ಅನಾರೋಗ್ಯವೂ ನಿಮ್ಮನ್ನು ಕಾಡಲಿರುವುದರಿಂದ ಅಂತಹ ಖುಷಿ ಎನಿಸುವುದಿಲ್ಲ. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಅವರಿಗೆ ಋಣಿಯಾಗಿರಬೇಕಾಗಿರುವುದು ನಿಮ್ಮ ಕರ್ತವ್ಯ ಅಲ್ವೇ ?
ವೃಶ್ಚಿಕ : ಅನಾರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷಿಸಬೇಡಿ. ಸ್ನೇಹಿತರು ನಿಮ್ಮ ಕಾಳಜಿಯ ಬಗ್ಗೆ ಮಾತನಾಡುತ್ತಿರುವುದನ್ನು ಕಿವಿಗೆ ಹಾಕಿಕೊಂಡರೆ ಉದ್ಧಾರವಾಗುತ್ತೀರಿ. ಧನಲಾಭವಿದೆ. ಆಫೀಸಿನಲ್ಲಿ ಕೆಟ್ಟ ಸುದ್ದಿ ಕೇಳುತ್ತೀರಿ.
ಧನಸ್ಸು : ಹೊಸ ನೌಕರಿಗೆ ಎಲ್ಲಾದರೂ ಅಪ್ಲೈ ಮಾಡಿದ್ದೀರಾ ? ಇಂಟರ್ ವ್ಯೂಗೆ ಕರೆ ಬಂದರೆ ಇವತ್ತು ತಪ್ಪಿಸಿಕೊಳ್ಳಬೇಡಿ. ಲಕ್ ನಿಮ್ಮ ಕಡೆಗಿದೆ.
ಮಕರ : ಆಫೀಸಿನಲ್ಲಿ ಶುಭ ಸುದ್ದಿ ನಿರೀಕ್ಷಿಸಬೇಡಿ. ನಿರಾಸೆ ಕಾದಿದೆ. ಯಾರದೋ ಸಿಟ್ಟನ್ನು ನಿಮ್ಮ ಸ್ನೇಹಿತರ ಬಳಿ ತೋರಿಸಿಕೊಳ್ಳುವುದೇ ?
ಕುಂಭ : ಅಧ್ಯಯನವನ್ನು ಮರೆತುಬಿಟ್ಟಿದ್ದೀರಾ ಹೇಗೆ ? ನಿಮ್ಮ ಇತರ ಎಲ್ಲ ಯೋಚನೆಗಳನ್ನೂ ಪಕ್ಕಕ್ಕಿಟ್ಟು ಹಿಡಿದ ಕೆಲಸ ಪೂರೈಸುವತ್ತ ಏಕಾಗ್ರತೆ ಇರಲಿ.
ಮೀನ : ದೂರ ಪ್ರಯಾಣ ಹಮ್ಮಿಕೊಳ್ಳಬೇಕೆಂದಿದ್ದರೆ ತಕ್ಷಣ ಕಾರ್ಯ ಪ್ರವೃತ್ತರಾಗಿ. ಕಾಸು ಹಾಳಾಗುತ್ತದೆ ಎಂಬ ಚಿಂತೆ ಇಟ್ಟುಕೊಂಡು ಕೊರಗಿದರೆ ಸರಿಯೇ ?