Get Updates
Get notified of breaking news, exclusive insights, and must-see stories!

ಮಾಜಿ ಡಿಜಿಪಿ ಸಿ.ದಿನಕರ್‌ ಈಗ ಪೂರ್ಣ ಪ್ರಮಾಣದ ವಕೀಲ

ಬೆಂಗಳೂರು : ಕೋರ್ಟಿನ ಕಟೆಕಟೆ ಹತ್ತಿ This is Dinakar, Now he is an advocate ! ಅನೇಕ ಕಾನೂನು ಸಮರದಲ್ಲಿ ಜಯದ ವಾಸನೆ ಕಂಡು, ಅಂತಿಮ ಯುದ್ಧದಲ್ಲಿ ಇನ್ನೂ ಫಲಿತಾಂಶ ಕಾಣದ ಕರ್ನಾಟಕದ ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಸಿ.ದಿನಕರ್‌ ಈಗ ಪೂರ್ಣ ಪ್ರಮಾಣದ ವಕೀಲ !

ಕಳೆದ ತಿಂಗಳ 28ರಂದು ಡಿಜಿಪಿ ಹುದ್ದೆಯಿಂದ ನಿವೃತ್ತರಾದ ದಿನಕರ್‌, ಗುರುವಾರ ಕರ್ನಾಟಕ ಬಾರ್‌ ಕೌನ್ಸಿಲ್‌ಗೆ ವಕೀಲಿ ವೃತ್ತಿ ನೋಂದಣಿ ಅರ್ಜಿ ಸಲ್ಲಿಸಿದ್ದರು. ವಾರಾಂತ್ಯದ ಸಮಾರಂಭದಲ್ಲಿ ಬಾರ್‌ ಕೌನ್ಸಿಲ್‌ನ ಅನುಮತಿ ಪತ್ರ ಪಡೆದ 131 ವಕೀಲರ ಪೈಕಿ ದಿನಕರ್‌ ಕೂಡ ಒಬ್ಬರು. ನೋಂದಣಾ ಸಮಿತಿ ಅಧ್ಯಕ್ಷ ವಿ.ಟಿ.ರಾಯರೆಡ್ಡಿ ಈ ವಿಷಯ ತಿಳಿಸಿದ್ದಾರೆ. ಈ ಪ್ರಕಾರವಾಗಿ ಇನ್ನು ದಿನಕರ್‌ ಕರ್ನಾಟಕದ ಯಾವ ಕೋರ್ಟಿನಲ್ಲಿ ಬೇಕಾದರೂ ವಕೀಲಿ ಅಭ್ಯಾಸ ಮಾಡಬಹುದು.

ತಮ್ಮ ಕೇಸುಗಳಲ್ಲಿ ಖುದ್ದು ವಾದ ಮಾಡಿರುವ ದಿನಕರ್‌ ಈವರೆಗೆ ಒಟ್ಟು 16 ಪ್ರಕರಣಗಳಲ್ಲಿ ಜಯಶೀಲರಾಗಿದ್ದಾರೆ. ಆದರೆ 4 ತಿಂಗಳ ಕಾಲ ತಮ್ಮ ಅಧಿಕಾರಾವಧಿ ವಿಸ್ತರಿಸಬೇಕೆಂಬ ಅವರ ಮನವಿಯನ್ನು ಸರ್ಕಾರ ತಿರಸ್ಕರಿಸಿತ್ತು. ಸುಮ್ಮನೆ ಕೂರಲಾರದ, ಚಲನಶೀಲ ವ್ಯಕ್ತಿ ದಿನಕರ್‌, ಇನ್ನು ಮುಂದೆ ವಕೀಲರಾಗಿ ಹೊಸ ಜೀವನ ಪ್ರಾರಂಭಿಸಲಿದ್ದಾರೆ.

ಸಿಬಿಐ ನಿರ್ದೇಶಕರಾಗಿ ಆರ್‌.ಕೆ.ರಾಘವನ್‌ ನೇಮಕಾತಿ ಪ್ರಶ್ನಿಸಿ ಕೇಂದ್ರ ಆಡಳಿತ ನ್ಯಾಯಾಲಯದಲ್ಲಿ ಖುದ್ದು ವಾದ ಮಾಡಿ ದಿನಕರ್‌ ಗೆದ್ದಿದ್ದರು. ಕೇಂದ್ರ ಆಡಳಿತ ನ್ಯಾಯಾಲಯದ ತೀರ್ಪನ್ನು ಕೇಂದ್ರ ಸರ್ಕಾರ ಹೈಕೋರ್ಟಿಗೆ ಒಯ್ದಿದ್ದು, ಜೂನ್‌ 4ಕ್ಕೆ ಕೋರ್ಟು ಅಂತಿಮ ತೀರ್ಪು ನೀಡಲಿದೆ.

ಕೋರ್ಟಿನಲ್ಲಿ ಹೋರಾಡಿಯೇ ಟಿ.ಶ್ರೀನಿವಾಸುಲು ಉತ್ತರಾಧಿಕಾರಿಯಾಗಿ ಡಿಜಿಪಿ ಪಟ್ಟಕ್ಕೆ ದಿನಕರ್‌ ಬಂದಿದ್ದರು. ಎಸ್‌.ಎಂ. ಕೃಷ್ಣ ಸರ್ಕಾರವೇ ದಿನಕರ್‌ಗೆ ಅಧಿಕಾರ ವಹಿಸಿತ್ತು.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+