ಭಾರತದ ಕನಸಿಗೆ ಗಿಲ್ಕ್ರಿಸ್ಟ್ ಕೊಡಲಿ, 2ನೇ ಪಾಳಿ- ಭಾರತ 58/2
ಮುಂಬಯಿ : ಭಾರತ ಇನ್ನೇನು ಹಿಡಿತ ಸಾಧಿಸಿತು ಅನ್ನುವಷ್ಟರಲ್ಲಿ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡಿದ ಆಸ್ಟ್ರೇಲಿಯಾದ ಗಿಲ್ಕ್ರಿಸ್ಟ್ ತಮ್ಮ ತಂಡಕ್ಕೆ 173 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ತಂದಿತ್ತರು. ಎರಡನೇ ಇನ್ನಿಂಗ್ಸನ್ನು ಅಳುಕಿನಿಂದಲೇ ಆಟ ಪ್ರಾರಂಭಿಸಿರುವ ಭಾರತ ಮೊದಲ ಟೆಸ್ಟ್ನ 2ನೇ ದಿನದಾಟ ಮುಗಿದಾಗ 2 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿತ್ತು. 6 ರನ್ ಗಳಿಸಿರುವ ದ್ರಾವಿಡ್ ಹಾಗೂ ಇನ್ನೂ ಖಾತೆ ತೆರೆಯದ ಸಚಿನ್ ನಲುಗಿರುವ ಭಾರತದ ಪಾಳಯಕ್ಕೆ ಜೀವತುಂಬುವರೇ, ನೋಡಬೇಕು.
ಮುಂಜಾನೆ ಎರಡು ಸತತ ಎಸೆತಗಳಲ್ಲಿ ಜಸ್ಟಿನ್ ಲ್ಯಾಂಗರ್(10) ಹಾಗೂ ಮಾರ್ಕ್ ವಾ (0) ರನ್ನು ಪೆವಿಲಿಯನ್ಗೆ ಕಳಿಸಿದ ಹರ್ಭಜನ್ ಸಿಂಗ್ ನಂತರ ಪಾಂಟಿಂಗ್(0) ವಿಕೆಟ್ಟನ್ನೂ ಕಿತ್ತರು. ಈ ಮಧ್ಯೆ ಸಾಂಘ್ವಿ ಮೋಡಿಗೆ ಸ್ಟೀವ್ ವಾ (17) ಬಲಿಯಾದರು. ಆಗ ಕಾಂಗರೂಗಳ ಸ್ಕೋರು 99ಕ್ಕೆ 5.
ನಂತರ ಒಂದೆಡೆ ಗಟ್ಟಿಯಾಗಿ ನಿಂತಿದ್ದ ಹೇಡನ್ ಜೊತೆಗೂಡಿದ ಗಿಲ್ಕ್ರಿಸ್ಟ್ ಭಾರತಕ್ಕೆ ದೊಡ್ಡ ಸವಾಲಾದರು. ಎಲ್ಲಾ ಬೌಲರ್ಗಳನ್ನೂ ಚಚ್ಚಿದ ಅವರು ಕೇವಲ 112 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್ ಇದ್ದ 122 ರನ್ ದೋಚಿದರು. ಅಂತಿಮವಾಗಿ ಹರ್ಭಜನ್ ಸಿಂಗ್ ಎಸೆತದ ಗತಿ ಗುರ್ತಿಸದೆ ಹೊರ ಬಂದು, ಸ್ಟಂಪ್ ಆದರು. ಇದಕ್ಕೂ ಮುನ್ನ ಹೇಡನ್ 17 ಬೌಂಡರಿ 1 ಸಿಕ್ಸರ್ ಇದ್ದ 119 ರನ್ ಗಳಿಸಿದ್ದಷ್ಟೇ ಅಲ್ಲದೆ, ಗಿಲ್ಕ್ರಿಸ್ಟ್ ಜೊತೆ 197ರನ್ ಕಲೆ ಹಾಕಿದರು. ಬಾಲಂಗೋಚಿಯ ಭರವಸೆಯ ಆಟಗಾರ ಶೇನ್ ವಾರ್ನ್ 3 ಸಿಕ್ಸರ್ ಹಾಗೂ ಎರಡು ಬೌಂಡರಿಯಿದ್ದ 39(37 ಎಸೆತ) ರನ್ ಚಚ್ಚಿ, ಆಸ್ಟ್ರೇಲಿಯಾದ ಉತ್ತಮ ಸ್ಕೋರಿಗೆ ಕಾಣಿಕೆ ಸಲ್ಲಿಸಿದರು. ಅಂತಿಮವಾಗಿ 349 ರನ್ಗಳಿಗೆ ಆಸ್ಟ್ಟ್ರೇಲಿಯಾ ತಂಡ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.
ಭಾರತದ ಪರ 4 ವಿಕೆಟ್ ಪಡೆದ ಹರ್ಭಜನ್ ಯಶಸ್ವಿ ಬೌಲರ್ ಎನಿಸಿದರು. ಶ್ರೀನಾಥ್, ಅಗರ್ಕರ್ ಮತ್ತು ಸಾಂಘ್ವಿ ತಲಾ 2 ವಿಕೆಟ್ ಕಿತ್ತರು. 10.1 ಓವರ್ಗಳಲ್ಲಿ 67 ರನ್ ಹೊಡೆಸಿಕೊಂಡ ಸಾಂಘ್ವಿ ಹಿಂದಿನ 3 ದಿನಗಳ ಪಂದ್ಯದಲ್ಲಿ ಮಾಡಿದ್ದ ಮೋಡಿ ಈ ಪಂದ್ಯದಲ್ಲಿ ಅಸಾಧ್ಯವಾಯಿತು.
ಎರಡನೇ ಇನ್ನಿಂಗ್ಸ್ನಲ್ಲಿ ಅತಿ ಎಚ್ಚರಿಕೆಯಿಂದ ಆಡತೊಡಗಿದ ಭಾರತದ ಆರಂಭಿಕ ಜೋಡಿ ರಮೇಶ್- ದಾಸ್ 33 ರನ್ ಜೋಡಿಸುವಷ್ಟರಲ್ಲಿ , ದಾಸ್(7) ಗಿಲ್ಲೆಸ್ಪಿ ಔಟ್ಸ್ವಿಂಗರ್ಗೆ ಬಲಿಯಾದರು. ಉತ್ತಮ ಆಟವಾಡಿದ ರಮೇಶ್ (6 ಬೌಂಡರಿಗಳಿದ್ದ 44) ದಿನದಾಟ ಮುಗಿಯುವ ಕೆಲ ನಿಮಿಷಗಳ ಮುಂಚೆ ಮೆಕ್ಗ್ರಾತ್ ಮ್ಯಾಜಿಕ್ಗೆ ಉತ್ತರ ಕೊಡದಾದರು. ಈ ಮಧ್ಯೆ ನೈಟ್ ವಾಚ್ಮನ್ ಆಗಿ ಬಂದ ನಯನ್ ಮೊಂಗಿಯಾ ಗಿಲ್ಲೆಸ್ಪಿ ಬೌಲಿಂಗ್ನಲ್ಲಿ ಬೆರಳಿಗೆ ಪೆಟ್ಟು ತಿಂದು ಗಾಯಾಳಾಗಿ ಪೆವಿಲಿಯನ್ಗೆ ವಾಪಸ್ಸಾದರು. ಇನ್ನೂ ಖಾತೆ ತೆರೆಯದ ಸಚಿನ್ ಹಾಗೂ 6 ರನ್ ಗಳಿಸಿರುವ ದ್ರಾವಿಡ್ ಗುರುವಾರ 3ನೇ ದಿನದಾಟ ಪ್ರಾರಂಭಿಸಲಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications