ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ ಮಾರ್ಚ್‌ 3ರಿಂದ ರಾಜ್ಯ ಮಟ್ಟದ ಕಲಾ ಮೇಳ

By Staff
|
Google Oneindia Kannada News

ಉಡುಪಿ : ಮಾರ್ಚ್‌ 3ರಿಂದ 5 ದಿನಗಳ ಕಾಲ ರಾಜ್ಯ ಮಟ್ಟದ ಕಲಾ ಮೇಳ ಇಲ್ಲಿ ನಡೆಯಲಿದ್ದು, ರಾಜ್ಯದ ಹೆಸರಾಂತ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸುವರು. ಮೇಳದಲ್ಲಿ ಸಂಗ್ರಹವಾಗುವ ಹಣವನ್ನು ಗುಜರಾತ್‌ ಸಂತ್ರಸ್ತರಿಗೆ ನೀಡಲಾಗುವುದು.

ಹೆಸರಾಂತ ಕಲಾವಿದ ದಿವಂಗತ ಜಿ.ಎಸ್‌.ಶೆಣೈ ಸ್ಮರಣಾರ್ಥ ನಡೆಯುವ ಈ ಕಲಾ ಮೇಳದಲ್ಲಿ ಎಸ್‌.ಜಿ. ವಾಸುದೇವ್‌, ಭಾಸ್ಕರ ರಾವ್‌, ಜಯು ರಾವಲ್‌, ಕೆ.ಚಂದ್ರನಾಥ ಆಚಾರ್ಯ ಮೊದಲಾದ ಕಲಾವಿದರು ಹಾಗೂ ಸಾಂಪ್ರದಾಯಿಕ ಕಲಾವಿದರಾದ ಕಮಲ್‌ ಅಹ್ಮದ್‌ ಹಾಗೂ ವಿಜಯ್‌ ಹಗರಗುಂಡಗಿ ತಮ್ಮ ಪ್ರದರ್ಶನ ನೀಡಲಿದ್ದಾರೆ. ಕಲಾವಿದರ ಸಂಘ ಮತ್ತು ಮೇಳದ ಸಲಹಾ ಸಮಿತಿಯ ಉಪಾಧ್ಯಕ್ಷ ರಮೇಶ್‌ ರಾವ್‌ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದ ಕರಾಳ ದೃಶ್ಯಗಳ ಫೋಟೋಗಳನ್ನೂ ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ. ಸ್ಥಳೀಯ ಕಲಾವಿದರು ಮತ್ತು ಫೋರಂ ಅಂಡ್‌ ದಿ ಆಫೀಸರ್ಸ್‌ ಕ್ಲಬ್‌ ಈ ಫೋಟೋ ಪ್ರದರ್ಶನವನ್ನು ಆಯೋಜಿಸಿವೆ.

(ಯುಎನ್‌ಐ)

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X