ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮಕೃಷ್ಣ ಮಿಶನ್: ಗುಜರಾತ್ನ 30 ಸಾವಿರಕುಟುಂಬಗಳಿಗೆ ನೆರವು
ಮಂಗಳೂರು : ಗುಜರಾತ್ನಲ್ಲಿ ಭೂಕಂಪದಿಂದ ನೆಲಕಚ್ಚಿರುವ ಕಚ್, ರಾಜ್ಕೋಟ್, ಜಾಮ್ನಗರ್, ಪೋರ್ಬಂದರ್ ಮತ್ತು ಸುರೇಂದ್ರ ನಗರ್ ಜಿಲ್ಲೆಗಳ ಒಟ್ಟು 115 ಗ್ರಾಮಗಳ 30,000 ಕುಟುಂಬಗಳಿಗೆ ಅಗತ್ಯ ಸಾಮಾನುಗಳನ್ನು ರಾಮಕೃಷ್ಣ ಮಿಶನ್ ಪೂರೈಸುತ್ತಿದೆ.
ಭಜ್ನಲ್ಲಿ ಈಗಾಗಲೇ ಒಂದು ಚಿಕಿತ್ಸಾಲಯವನ್ನು ತೆರೆಯಲಾಗಿದೆ. ಈ ನಿಟ್ಟಿನಲ್ಲಿ ಮಿಶನ್ ನಡೆಸುತ್ತಿರುವ ಪರಿಹಾರ ಕಾರ್ಯದೊಂದಿಗೆ ಕೈಜೋಡಿಸಲು ಇಚ್ಚಿಸುವ ದಾನಿಗಳು, ರಾಮಕೃಷ್ಣ ಮಿಶನ್ನ ಹೆಸರಿಗೆ ಚೆಕ್ ಅಥವ ಡಿಡಿಗಳನ್ನು ಕಾರ್ಯದರ್ಶಿ, ರಾಮಕೃಷ್ಣ ಮಿಶನ್, ಮಂಗಳೂರು - 575 001(ಫೋನ್: 0824-423412) ಅಥವಾ ಪ್ರಧಾನ ಕಾರ್ಯದರ್ಶಿ, ರಾಮಕೃಷ್ಣ ಮಿಶನ್ ಕೇಂದ್ರ ಕಚೇರಿ, ಬೇಲೂರು ಮಠ, 711202 ಹೌರಾ ಜಿಲ್ಲೆ, ಪಶ್ಚಿಮ ಬಂಗಾಳ- ಈ ವಿಳಾಸಗಳಿಗೆ ಕಳುಹಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ |
Story first published: Tuesday, February 27, 2001, 5:30 [IST]