ವೀರಪ್ಪನ್ ಶರಣಾಗುವಂತೆ ಮಾಡಲು ಕರುಣಾನಿಧಿ ಉತ್ಸುಕತೆ?
ಚಾಮರಾಜನಗರ : ಕಾಡುಗಳ್ಳ ವೀರಪ್ಪನ್ನನ್ನು ಶರಣಾಗತನಾಗುವಂತೆ ಮಾಡಿ, ಕ್ಷಮಾದಾನ ಕೊಡಿಸಿ, ಪಡಿಯಚ್ಚಿ ಗೌಂಡರ್ ಜನಾಂಗದ ಬೆಂಬಲ ಪಡೆಯುವ ಉತ್ಸುಕತೆಯನ್ನು ಕರುಣಾನಿಧಿ ತೋರಿದ್ದಾರೆ ಇದೀಗ ಹೇಳಲಾಗುತ್ತಿದೆ.
ವೀರಪ್ಪನ್ ಶರಣಾಗುವಂತೆ ಮಾಡಲು ವೇದಿಕೆ ಕೂಡ ಸಜ್ಜಾಗಿದೆ. ವೀರಪ್ಪನ್ಗೆ ಕ್ಷಮಾದಾನ ನೀಡುವುದಾದರೆ, ಆತ ಶರಣಾಗಲು ಸಿದ್ಧ, ಇದರ ನೇತೃತ್ವವನ್ನು ತಾವೇ ವಹಿಸುತ್ತೇವೆ ಎಂದು ರಾಜ್ಕುಮಾರ್ ಬಿಡುಗಡೆಯ ರೂವಾರಿ ಪಳ ನೆಡುಮಾರನ್ ಹೇಳಿದ್ದಾರೆ.
ಈ ಮಧ್ಯೆ ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನರಹಂತಕನನ್ನು ಎಸ್.ಟಿ.ಎಫ್. ಪೊಲೀಸರೆದುರು ಶರಣಾಗುವಂತೆ ಮಾಡಲು ಕರುಣಾನಿಧಿ ನೇತೃತ್ವದ ಸರಕಾರ ಚಿಂತಿಸಿದೆ ಎಂದು ಗೊತ್ತಾಗಿದೆ. ವೀರಪ್ಪನ್ಗೆ ಕ್ಷಮಾದಾನ ನೀಡಿದರೆ, ಕೊಯಮತ್ತೂರು ಪ್ರದೇಶದಲ್ಲಿ ಹೆಚ್ಚಾಗಿರುವ ಪಡಿಯಚ್ಚಿ ಗೌಂಡರ್ ಅಥವಾ ವನ್ನಿಯಾರ್ಗಳ ಬೆಂಬಲ ದೊರಕೇ ದೊರಕುತ್ತದೆ ಎನ್ನುವುದು ಡಿಎಂಕೆ ಪಕ್ಷದ ಲೆಕ್ಕಾಚಾರ. ಆದರೆ, ತಮಿಳುನಾಡಿನ ಈ ಕೋರಿಕೆಗೆ ಕರ್ನಾಟಕ ಸರಕಾರ ಸೊಪ್ಪು ಹಾಕಿಲ್ಲ. ಹೀಗಾಗಿ ಸದ್ಯಕ್ಕೆ ತಮಿಳುನಾಡು ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಈ ಸಂಬಂಧ ಕರುಣಾನಿಧಿ ಅವರು ಮುಖ್ಯಮಂತ್ರಿ ಕೃಷ್ಣ ಅವರ ಮನ ವೊಲಿಸುವ ಪ್ರಯತ್ನವನ್ನೂ ಮಾಡಿದ್ದಾರೆ ಎಂದು ಗೊತ್ತಾಗಿದೆ. ಆದರೆ, ತಮ್ಮ ಪತಿ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ ಎಲ್.ಟಿ.ಟಿ.ಈ ಜತೆ ನಿಕಟ ಸಂಬಂಧ ಹೊಂದಿರುವ ವೀರಪ್ಪನ್ಗೆ ಕ್ಷಮಾದಾನ ನೀಡುವುದು ಬೇಡ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎಸ್.ಎಂ. ಕೃಷ್ಣ ಅವರಿಗೆ ಸೂಚಿಸಿದ್ದಾರೆ ಎಂಬುದು ಉನ್ನತ ಮೂಲಗಳಿಂದ ದೊರೆತಿರುವ ಮಾಹಿತಿ.
ತಮಿಳುನಾಡು ಸರಕಾರ ವೀರಪ್ಪನ್ ಶರಣಾಗತಿಗೆ ಪ್ರಯತ್ನ ನಡೆಸಿರುವುದರಿಂದ ಕಾರ್ಯಾಚರಣೆ ಮಂದಗತಿಯಲ್ಲಿ ಸಾಗುತ್ತಿದೆ ಎಂದೂ ಹೇಳಲಾಗಿದೆ. ಈ ಮಧ್ಯೆ ಇತ್ತೀಚೆಗೆ ಪೊಲೀಸರು ಬಂಧಿಸಿದ ವ್ಯಕ್ತಿ ನಿಜವಾಗಿಯೂ ತಮಿಳು ಉಗ್ರರ ನಾಯಕ ಮಾರನ್ನೇ ಅಥವಾ ಬೇರೆ ವ್ಯಕ್ತಿಯೇ ಎಂಬ ಅನುಮಾನಗಳೂ ಮೂಡಿವೆ. ಆತನೇ ಮಾರನ್ ಎಂದು ಖಚಿತವಾಗಿ ಹೇಳಲು ಪೊಲೀಸರ ಬಳಿಯೂ ಯಾವುದೇ ಸಾಕ್ಷ್ಯಾಧಾರಗಳಿಲ್ಲವಂತೆ. ಚಾಮರಾಜನಗರ ಪೊಲೀಸ್ ವಲಯದಲ್ಲಂತೂ ವೀರಪ್ಪನ್ ಶರಣಾಗತಿ ಪ್ರಸ್ತಾಪ ಸುಳಿದಾಡುತ್ತಿದೆ.
(ಚಾಮರಾಜನಗರ ಪ್ರತಿನಿಧಿಯಿಂದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications