ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರನ್ನ, ಅತ್ತಿಮಬ್ಬೆ, ಚಾವುಂಡರಾಯ ನಾಡಿನ ಮಹಾನ್‌ ಚೇತನ : ಕಂಬಾರ

By Oneindia Staff
|
Google Oneindia Kannada News

ಬೆಂಗಳೂರು : ರನ್ನ, ಅತ್ತಿಮಬ್ಬೆ, ಚಾವುಂಡರಾಯ ಕನ್ನಡ ಸಾಂಸ್ಕೃತಿಕ ಲೋಕದ ಮಹಾನ್‌ ಚೇತನಗಳು. ರನ್ನ ಸಾಹಿತ್ಯ ಕೃತಿ ರಚಿಸಿದರೆ, ಅತ್ತಿಮಬ್ಬೆ ಸಾಹಿತ್ಯ ಪ್ರಸಾರಕ್ಕೆ ನೆರವಾದಳು, ಚಾವುಂಡರಾಯ ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ ಎಂದು ಖ್ಯಾತ ನಾಟಕಕಾರ, ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು.

ಭಾನುವಾರ ನಗರದಲ್ಲಿ ಅತ್ತಿಮಬ್ಬೆ ಪ್ರತಿಷ್ಠಾನ ಕೊಡಮಾಡಿದ ರನ್ನ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ರನ್ನ ಹಾಗೂ ತಾವು ಇಬ್ಬರೂ ಘಟಪ್ರಭಾ ನದಿಯ ದಂಡೆಯ ಊರಿನಿಂದ ಬಂದವರು ಎಂಬುದು ಹೆಮ್ಮೆಯ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಚಿತ್ರನಟಿ ಎಂ.ಎನ್‌. ಲಕ್ಷ್ಮೀದೇವಿ ಹಾಗೂ ಕಲಾವಿದ ವೀರಣ್ಣ ಸೊಲ್ಲಾಪುರ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಸಮಾರಂಭದಲ್ಲಿ ಸಣ್ಣ ಕೈಗಾರಿಕಾ ಸಚಿವ ಎಸ್‌.ಆರ್‌. ಕಾಶಪ್ಪನವರ್‌, ಮನೋಹರಿ ಪಾರ್ಥಸಾರಥಿ ಮೊದಲಾದವರು ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X