ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀರೂರಿನಲ್ಲಿ ಫೆ. 28 ರಂದು ಉಪ್ಪಾರ ವಧೂ ವರರ ಸಮಾವೇಶ
ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದ ಅಶೋಕನಗರದಲ್ಲಿ ಉಪ್ಪಾರ ಜನಾಂಗದ ವಧೂ ವರರ ಹಾಗೂ ಪೋಷಕರ ಮುಖಾಮುಖಿ ಸಮಾವೇಶ ಫೆ. 28 ರಂದು ನಡೆಯಲಿದೆ.
ಕರ್ನಾಟಕ ರಾಜ್ಯ ಉಪ್ಪಾರ ಕಲ್ಯಾಣ ಸಂಘ ಹಾಗೂ ಕಡೂರು ತಾಲ್ಲೂಕು ಉಪ್ಪಾರ ಸಂಘಗಳು ಜಂಟಿಯಾಗಿ ಸಮಾವೇಶವನ್ನು ಏರ್ಪಡಿಸಿವೆ. ಫೆ. 28 ರಂದು ಬೆಳಿಗ್ಗೆ 10.30 ಕ್ಕೆ ಪಟ್ಟಣದ ಶ್ರೀರಾಮ ದೇವಾಲಯದ ಆವರಣದಲ್ಲಿ ಸಮಾವೇಶ ಪ್ರಾರಂಭವಾಗುವುದು.
ಆಸಕ್ತ ವಧೂ ವರರು ಹಾಗೂ ಪೋಷಕರು ಎ.ವಿ. ಲೋಕೇಶ ಉಪ್ಪಾರ, ಪ್ರಧಾನ ಕಾರ್ಯದರ್ಶಿ, 504, 11 ನೇ ಅಡ್ಡರಸ್ತೆ , 13 ನೇ ಭಗೀರಥ ಮುಖ್ಯರಸ್ತೆ , ಗೋಕುಲ ಮೊದಲನೇ ಹಂತ, ಬೆಂಗಳೂರು ಈ ವಿಳಾಸವನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 080- 3374070 ಯಲ್ಲಿ ಲೋಕೇಶ್ ಲಭ್ಯರು.
(ಇನ್ಫೋ ವಾರ್ತೆ)
Comments
Story first published: Sunday, February 25, 2001, 5:30 [IST]