ಅಂಕೋಲಾ : ಒಂದೇ ಕುಟುಂಬದ 9 ಮಂದಿ ಸಾಮೂಹಿಕ ಆತ್ಮಹತ್ಯೆ
ಕಾರವಾರ : ಜಿಲ್ಲೆಯ ಅಂಕೋಲಾದ ಕಣಗಿಲ ಗ್ರಾಮದಲ್ಲಿ ಮನೆ ಯಜಮಾನನ ಬೇಜವಾಬ್ದಾರಿತನ ಹಾಗೂ ಉಡಾಫೆಯಿಂದ ಬೇಸತ್ತ ಆತನ ಹೆಂಡತಿ ಹಾಗೂ 8 ಮಕ್ಕಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಊರ ತುಂಬಾ ದ್ವೇಷ ಕಟ್ಟಿಕೊಂಡಿದ್ದ ಗಣಪತಿ ಕುಸಲಪ್ಪ ನಾಯ್ಕ (50) ಉರುಫ್ ಕಚ್ಚು ಗಣಪತಿ ವರ್ತನೆಯಿಂದ ಬೇಸತ್ತ ಆತನ ಕುಟುಂಬದ ಕೆಲವರು ವಿಷ ಸೇವಿಸಿ, ಇನ್ನು ಕೆಲವರು ನೀರಿಗೆ ಹಾರಿ, ಮತ್ತೆ ಕೆಲವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೆಬ್ರವರಿ 22ರಂದೇ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಚ್ಚು ಗಣಪತಿಯ ಹೆಂಡತಿ ಸುಶೀಲಾ (45) ಮತ್ತು ನಾಲ್ಕು ಮಕ್ಕಳು ವಾಸ ಮಾಡುತ್ತಿದ್ದ ಗುಡಿಸಲಲ್ಲೇ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನುಳಿದ ನಾಲ್ವರ ಪೈಕಿ ಇಬ್ಬರು ಗಂಗಾವಳಿ ನದಿಗೆ ಹಾರಿ ಸತ್ತಿದ್ದು, ಇನ್ನಿಬ್ಬರು ನದಿ ತಟದ ಮಾಸ್ತಿಕಟ್ಟೆಯಲ್ಲಿ ನೇಣಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ.
ಬೀರಮ್ಮ (19), ಮೀರಾ (16), ಶಶಿಕಲಾ (14), ಜ್ಯೋತಿ (12) ಮೀನಾಕ್ಷಿ (25), ಶ್ರೀಕಾಂತ (23), ತಾರಾ (21) ಮತ್ತು ಕಿರಣ್ (8) - ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟರು. ಮೀನಾಕ್ಷಿ ಹಾಗೂ ಶ್ರೀಕಾಂತ ನೇಣು ಹಾಕಿಕೊಂಡಿದ್ದರೆ, ತಾರಾ ಮತ್ತು ಕಿರಣ್ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಗಳವಾಡಿಕೊಂಡು ಕಚ್ಚಿ ಓಡುತ್ತಿದ್ದ ಗಣಪತಿ ನಾಯ್ಕನಿಗೆ ಕಚ್ಚು ಗಣಪತಿ ಎಂಬ ಹೆಸರು ಬಂತು. ಕಳೆದ ತಿಂಗಳ 26ರಂದು ತನ್ನ ಎದುರು ಮನೆಯ ವಾಸುದೇವ ಎಂಬುವರ ಮೇಲೆ ಹಲ್ಲೆ ಮಾಡಿದ್ದ ಗಣಪತಿ, ಫೆಬ್ರವರಿ 9ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಪತಿಯ ಮಗನೊಬ್ಬನ ಮೇಲೂ ಮೊಕದ್ದಮೆ ಹೂಡಲಾಗಿತ್ತು. ಫೆಬ್ರವರಿ 22ರಂದು ತಂದೆ- ಮಕ್ಕಳ ನಡುವೆ ಪ್ರಕರಣ ಕುರಿತಂತೆ ಅಂಕೋಲಾ ಕೋರ್ಟಿನ ಹೊರಗಡೆ ವಾಗ್ವಾದ ನಡೆಯಿತು ಎನ್ನಲಾಗಿದೆ. ಅದಾದ ನಂತರ ಅಂದೇ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರಬಹುದು ಎದು ಪೊಲೀಸರು ಹೇಳಿದ್ದಾರೆ.
ಒಂದು ದಿನದ ನಂತರ ಗುಡಿಸಲಿಂದ ದುರ್ವಾಸನೆ ಬಂದ ಕಾರಣ ಗ್ರಾಮಸ್ಥರು ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅದರ ಜಾಡು ಹಿಡಿದು ಶಂಕೆಯ ಮೇಲೆ ನೀರು ಪಾಲಾದವರು ಹಾಗೂ ನೇಣು ಹಾಕಿಕೊಂಡವರನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ತನಿಖೆ ಮುಂದುವರೆದಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications