ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಸಂತ್ರಸ್ತರ ನೆರವಿಗೆ ಮಾ. 4 ರಂದು ಸಂಗೀತ ಸಂಜೆ

By Oneindia Staff
|
Google Oneindia Kannada News

ಬೆಂಗಳೂರು : ಮಾರ್ಚ್‌ ನಾಲ್ಕರ ಸಂಜೆ ಆರು ಗಂಟೆಗೆ ಅಂಬೇಡ್ಕರ್‌ ಭವನದಲ್ಲಿ ಸಂಗೀತ ಸಂಜೆಯನ್ನು ಆಯೋಜಿಸಲಾಗಿದೆ. ಜನವರಿ 26ರಂದು ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪದಿಂದ ನಿರ್ವಸಿತರಾದವರಿಗೆ ನೆರವಾಗುವುದು ಸಂಗೀತ ಸಂಜೆಯ ಉದ್ದೇಶ.

ಈ ಸಂಗೀತ ಸಂಜೆಗೆ ಪುರುಸೊತ್ತು ಮಾಡಿಕೊಂಡು ಮಾರ್ಚ್‌ ನಾಲ್ಕರ ಭಾನುವಾರ ಸಂಜೆ ಬನ್ನಿ. ರಿkುೕ ಟೀವಿ ಯ ಬೆಂಗಳೂರು ಮತ್ತು ಮುಂಬಯಿಯ ಸರೆಗಮದ ಗಾಯಕರು ಸಭಿಕರನ್ನು ರಂಜಿಸಲಿದ್ದಾರೆ. ಹಿಂದಿ ಸಿನೆಮಾದ ಶ್ರೇಷ್ಟ ನಟ ಗುರುದತ್‌ನಿಂದ ಹಿಡಿದು ಮೊನ್ನೆ ಮೊನ್ನೆ ತೆರೆಗೆ ಬಂದು ಮಿಂಚಿದ ಹೃತಿಕ್‌ರೋಷನ್‌ನ ಚಿತ್ರದ ವರೆಗಿನ ಹಾಡುಗಳನ್ನು ಆ ಸಂಜೆ ನೀವು ಕೇಳಬಹುದು.

ಟಿಕೆಟ್‌ ಬೆಲೆ 99 ರೂಪಾಯಿ. ಕೆಸಿದಾಸ್‌, ಸುಪರ್‌ ಮಾರ್ಕೆಟ್‌ನಲ್ಲಿ ಟಿಕೆಟ್‌ಗಳು ಸಿಗುತ್ತವೆ. ನೀವು ಹಣ ಕೊಟ್ಟರೆ ಸಿಗುವ ಮನರಂಜನೆಗಿಂತ ಮಿಗಿಲಾಗಿ ಎಲ್ಲಿಯೋ ತಬ್ಬಲಿಯಾಗಿ ಅಳುತ್ತಿರುವ ಮಕ್ಕಳಿಗೆ ಸಹಾಯವಾಗುತ್ತದೆ.

(ಇನ್ಫೋ ವಾರ್ತೆ)

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X