ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಜರಾತ್ ಸಂತ್ರಸ್ತರ ನೆರವಿಗೆ ಮಾ. 4 ರಂದು ಸಂಗೀತ ಸಂಜೆ
ಬೆಂಗಳೂರು : ಮಾರ್ಚ್ ನಾಲ್ಕರ ಸಂಜೆ ಆರು ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಸಂಗೀತ ಸಂಜೆಯನ್ನು ಆಯೋಜಿಸಲಾಗಿದೆ. ಜನವರಿ 26ರಂದು ಗುಜರಾತ್ನಲ್ಲಿ ಸಂಭವಿಸಿದ ಭೂಕಂಪದಿಂದ ನಿರ್ವಸಿತರಾದವರಿಗೆ ನೆರವಾಗುವುದು ಸಂಗೀತ ಸಂಜೆಯ ಉದ್ದೇಶ.
ಈ ಸಂಗೀತ ಸಂಜೆಗೆ ಪುರುಸೊತ್ತು ಮಾಡಿಕೊಂಡು ಮಾರ್ಚ್ ನಾಲ್ಕರ ಭಾನುವಾರ ಸಂಜೆ ಬನ್ನಿ. ರಿkುೕ ಟೀವಿ ಯ ಬೆಂಗಳೂರು ಮತ್ತು ಮುಂಬಯಿಯ ಸರೆಗಮದ ಗಾಯಕರು ಸಭಿಕರನ್ನು ರಂಜಿಸಲಿದ್ದಾರೆ. ಹಿಂದಿ ಸಿನೆಮಾದ ಶ್ರೇಷ್ಟ ನಟ ಗುರುದತ್ನಿಂದ ಹಿಡಿದು ಮೊನ್ನೆ ಮೊನ್ನೆ ತೆರೆಗೆ ಬಂದು ಮಿಂಚಿದ ಹೃತಿಕ್ರೋಷನ್ನ ಚಿತ್ರದ ವರೆಗಿನ ಹಾಡುಗಳನ್ನು ಆ ಸಂಜೆ ನೀವು ಕೇಳಬಹುದು.
ಟಿಕೆಟ್ ಬೆಲೆ 99 ರೂಪಾಯಿ. ಕೆಸಿದಾಸ್, ಸುಪರ್ ಮಾರ್ಕೆಟ್ನಲ್ಲಿ ಟಿಕೆಟ್ಗಳು ಸಿಗುತ್ತವೆ. ನೀವು ಹಣ ಕೊಟ್ಟರೆ ಸಿಗುವ ಮನರಂಜನೆಗಿಂತ ಮಿಗಿಲಾಗಿ ಎಲ್ಲಿಯೋ ತಬ್ಬಲಿಯಾಗಿ ಅಳುತ್ತಿರುವ ಮಕ್ಕಳಿಗೆ ಸಹಾಯವಾಗುತ್ತದೆ.
(ಇನ್ಫೋ ವಾರ್ತೆ)
ಮುಖಪುಟ |
Comments
Story first published: Sunday, February 25, 2001, 5:30 [IST]