ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಅದು ಬೇಕು, ಇದು ಬೇಕು, ಎಲ್ಲವೂ ಬೇಕು ಎನ್ನಿಸುತ್ತದೆ. ಆಸೆಯೇ ದುಃಖಕ್ಕೆ ಕಾರಣ. ಉದ್ಯೋಗದಲ್ಲಿ ಶ್ರದ್ಧೆ ತೋರಿದರೆ ಪ್ರಗತಿ.
ಮಿಥುನ : ಚೋರ ಭಯವಿದೆ. ಧನ ಹಾನಿಯೂ ಆದೀತು. ಎಷ್ಟು ಎಚ್ಚರದಿಂದಿದ್ದರೆ ಅಷ್ಟೂ ಒಳ್ಳೆಯದು. ಕುಲದೇವರ ಪೂಜೆಯಿಂದ ಕಷ್ಟ ಪರಿಹಾರ.
ಕಟಕ : ಗೆಳೆಯರೊಂದಿಗೆ ಪ್ರಯಾಣ. ಆನಂದ, ಉತ್ಸಾಹ. ನಿಮ್ಮ ಆಸೆಯೆಲ್ಲಾ ಕೈಗೂಡುತ್ತದೆ. ಮನೆಯಲ್ಲಿ ಮಂಗಳ ಕಾರ್ಯದ ಮಾತುಕತೆ.
ಸಿಂಹ : ಸಾಕಪ್ಪಾ ಸಾಕು ಈ ಜೀವನ, ಏಕೆ ಬೇಕು ಈ ಬದುಕು ಎನಿಸಿದೆ ನಿಮಗೆ. ಇದೇನೂ ಸ್ಥಿರವಾಗಿರುವುದಿಲ್ಲ. ಒಳ್ಳೆಯ ದಿನ ಬರುತ್ತದೆ ಕಾಯುವ ತಾಳ್ಮೆ , ಉತ್ಸಾಹ ಉಳಿಸಿಕೊಳ್ಳಿ.
ಕನ್ಯಾ : ಸಮಯದಲ್ಲಿ ಒಂದು ಹುಲ್ಲುಕಡ್ಡಿಯೇ ಆಸರೆಯಾಗುತ್ತದೆ. ಯಾರನ್ನೂ ಉಪೇಕ್ಷಿಸಬೇಡಿ. ನೌಕರಿಯಲ್ಲಿ ಅನುಕೂಲಕರ ವಾತಾವರಣ ಇದೆ.
ತುಲಾ : ನಿಮ್ಮ ಹೊಸ ಯೋಜನೆಗಳು ಕೈಗೂಡಲಿವೆ. ಯಶಸ್ಸು ನಿಮ್ಮನ್ನು ಅರಸಿ ಬಂದಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಅಪರೂಪದ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ.
ವೃಶ್ಚಿಕ : ಕೋರ್ಟು ವ್ಯವಹಾರಕ್ಕೆ ಕೈ ಇಟ್ಟೀರಿ ಜೋಕೆ. ಇಲ್ಲದ ಗೊಂದಲ, ಆತಂಕ ಕಾಡುತ್ತದೆ. ಮನಸ್ಸನ್ನು ಬಿಗಿ ಮಾಡಿ. ಮನೆದೇವರ ಪೂಜೆ ಮಾಡಿ.
ಧನಸ್ಸು : ಬಿಲ್ಲಿನಂತೆಯೇ ನಿಮ್ಮ ಮನಸ್ಸೂ ಬಗ್ಗಿ ಹೋಗಿದೆ. ಏನೇನೋ ಯೋಚನೆಗಳು. ಎಲ್ಲವನ್ನೂ ಮರೆತು ತೀರ್ಥಯಾತ್ರೆ ಕೈಗೊಳ್ಳಿ. ಇಂದಂತೂ ನಿಮಗೆ ಧನಯೋಗ ಇದೆ.
ಮಕರ : ಮನೆಯಲ್ಲಿ ವಿಶ್ರಾಂತಿ ಪಡೆಯುವ ಯೋಚನೆ ಇದೆ. ಆದರೆ, ಕರ್ತವ್ಯ ಕರೆಯುತ್ತಿದೆ. ಮನರಂಜನೆಯಲ್ಲಿ ಉತ್ಸಾಹ ಇಡಿ. ಲಾಟರಿ ಕೊಂಡರೆ ನಷ್ಟು ಖಂಡಿತಾ ಇಲ್ಲ.
ಕುಂಭ : ಮನೆಯಲ್ಲಿ ಸಂತಸದ ವಾತಾವರಣ. ಭೂಮಿ ವ್ಯವಹಾರದಲ್ಲಿ ಕಲಹ. ಕೋರ್ಟ್ ವ್ಯವಹಾರದಲ್ಲಿ ಜಯ. ಅಭ್ಯಾಗತರ ಆಗಮನ.
ಮೀನ : ನಿಮ್ಮ ಬುದ್ಧಿಶಕ್ತಿಯಿಂದ ಕಾರ್ಯಸಿದ್ಧಿ. ವಿಪರೀತ ಖರ್ಚು. ಎಷ್ಟು ಹಣ ಬಂದರೂ ಸಾಲದು. ವಿದ್ಯಾರ್ಥಿಗಳಿಗೆ ಸುದಿನ. ವ್ಯಾಪಾರದಲ್ಲಿ ಧನಲಾಭ.