Get Updates
Get notified of breaking news, exclusive insights, and must-see stories!

ಭ್ರಷ್ಟ ಕಟ್ಟಡ ನಿರ್ಮಾಣಕಾರರ ವಿರುದ್ಧ ಉಗ್ರಕ್ರಮ ಅಗತ್ಯ- ರಾಷ್ಟ್ರಪತಿ

ನವದೆಹಲಿ : ಗುಜರಾತ್‌ ಭೂಕಂಪದ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ನಿಯಂತ್ರಣಗಳನ್ನು ಮತ್ತಷ್ಟು ಕಠಿಣಗೊಳಿಸಲು ಹಾಗೂ ಭ್ರಷ್ಟ ಕಟ್ಟಡ ನಿರ್ಮಾಣಕಾರರು ಮತ್ತು ಯೋಜಕರ ವಿರುದ್ಧ ಕಠಿಣಕ್ರಮ ಕೈಗೊಳ್ಳುವ ಅಗತ್ಯವನ್ನು ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಪ್ರತಿಪಾದಿಸಿದ್ದಾರೆ.

ಜನವರಿ 26 ರ ಭೂಕಂಪದಲ್ಲಿ ಸಾವಿಗೀಡಾದ ಸಾವಿರಾರು ಜೀವಗಳ ಸಂಖ್ಯೆಯನ್ನು ಗಮನಿಸಿದರೆ, ಕಟ್ಟಡ ನಿರ್ಮಾಣದ ನೀತಿ ನಿಯಮಗಳು ಹಾಗೂ ನಗರ ಯೋಜನೆಯಲ್ಲಿ ಅತ್ಯಂತ ತುರ್ತಾಗಿ ಬದಲಾವಣೆ ತರುವ ಅಗತ್ಯವಿದೆ ಎಂದು ನಾರಾಯಣನ್‌ ಒತ್ತಿ ಹೇಳಿದ್ದಾರೆ. ಅವರು, ಸೋಮವಾರ ಶುರುವಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸ್ಪಂದಿಸಬೇಕಾದ ನಿರ್ವಹಣಾ ಆಡಳಿತ ವ್ಯವಸ್ಥೆಯಲ್ಲೂ ಮತ್ತಷ್ಟು ಪರಿಷ್ಕರಣದ ಅವಶ್ಯಕತೆಯಿದೆ. ಭೂಕಂಪದಲ್ಲಿನ ಸಾವಿರಾರು ಸಾವುಗಳಿಗೆ ಭ್ರಷ್ಟ ತಂತ್ರಜ್ಞರು, ಕಟ್ಟಡ ನಿರ್ಮಾಣಕಾರರು, ಯೋಜಕರು ನಾಚಿಕೆ ಪಡಬೇಕು ಎಂದು ನಾರಾಯಣನ್‌ ಹೇಳಿದರು.

ಭೂಕಂಪದ ಕೇಂದ್ರದಿಂದ 450 ಕಿಮೀ ದೂರವಿದ್ದ ಗುಜರಾತಿನ ರಾಜಧಾನಿ ಅಹಮದಾಬಾದಿನಲ್ಲಿ ಭೂನಡುಕದಿಂದಾಗಿ 69 ಆಧುನಿಕ ಕಟ್ಟಡಗಳು ನೆಲ ಕಚ್ಚಿವೆ. ಮಾಧ್ಯಮಗಳ ಪ್ರಕಾರ, ಕಟ್ಟಡ ನಿರ್ಮಾಣಕಾರರ ವಿರುದ್ಧ ಈವರೆಗೆ 59 ಕ್ರಿಮಿನಲ್‌ ಮೊಕದ್ದಮೆಗಳು ದಾಖಲಾಗಿದ್ದು , ಈ ಸಂಬಂಧ ಮೂವರನ್ನು ಭೂಕಂಪ ಸಂಭವಿಸಿದ ನಾಲ್ಕು ವಾರಗಳ ನಂತರ ಬಂಧಿಸಲಾಗಿದೆ.

(ಎಎಫ್‌ಪಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+