ಜೀವಮಾನ ಶ್ರೇಷ್ಠ ಸಾಧನೆಯಾಂದಿಗೆ ಅಪವಾದವನ್ನೂ ಕಟ್ಟಿಕೊಂಡ ಅಖ್ತರ್
ಆಕ್ಲೆಂಡ್ : ದೀರ್ಘಕಾಲದ ವಿಶ್ರಾಂತಿಯ ನಂತರ ಮೈದಾನಕ್ಕಿಳಿದು ಮೊದಲ ಪಂದ್ಯದಲ್ಲೇ ಜೀವಮಾನ ಶ್ರೇಷ್ಠ ಸಾಧನೆಗೈದ ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಸಾಧನೆಯಾಂದಿಗೆ ವಿವಾದವನ್ನೂ ಬೆನ್ನಿಗೆ ಕಟ್ಟಿಕೊಂಡಿದ್ದಾರೆ.
ಭಾನುವಾರ ಆಕ್ಲೆಂಡ್ನ ಈಡೆನ್ ಪಾರ್ಕ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್ಗಳ ಪಂದ್ಯದಲ್ಲಿ ಕೇವಲ 19 ರನ್ಗಳಿಗೆ 5 ವಿಕೆಟ್ ಕೀಳುವ ಮೂಲಕ ನ್ಯೂಜಿಲೆಂಡ್ನ ಮಧ್ಯಮ ಕ್ರಮಾಂಕ ಹಾಗೂ ಬಾಲಗಳನ್ನು ಕತ್ತರಿಸಿದ್ದ ಅಖ್ತರ್ ಬೌಲಿಂಗ್ನಲ್ಲೀಗ ಕಿವಿಗಳು ಹುಳುಕು ಕಾಣುತ್ತಿದ್ದಾರೆ. ಕಿವೀಸ್ ನಾಯಕ ಸ್ಟೀಫನ್ ಫ್ಲೆಮಿಂಗ್ರಂತೂ, ಅಖ್ತರ್ ಬೌಲಿಂಗ್ ಶೈಲಿಯ ಬಗ್ಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ನ್ಯೂಜಿಲೆಂಡ್ನ ಮಾಜಿ ವಿಕೆಟ್ಕೀಪರ್ ಟೋನಿ ಬ್ಲೈನ್, ಭಾನುವಾರ ರಾವಲ್ಪಿಂಡಿ ಎಕ್ಸ್ಪ್ರೆಸ್ ಬೌಲಿಂಗ್ ಶೈಲಿಯ ಬಗ್ಗೆ ರಾಷ್ಟ್ರೀಯ ರೇಡಿಯೋದಲ್ಲಿ ಪದೇ ಪದೇ ತಮ್ಮ ಸಂಶಯ ವ್ಯಕ್ತಪಡಿಸಿದರು. ಮತ್ತೊಬ್ಬ ಅತ್ಯುನ್ನತ ಸ್ಥಳೀಯ ರೇಡಿಯೋ ವೀಕ್ಷಕ ವಿವರಣೆಕಾರ ಬ್ರೆೃನ್ ವ್ಯಾಡಲ್ ಕೂಡ ಭಾನುವಾರ ವೀಕ್ಷಕ ವಿವರಣೆ ನೀಡುವಾಗ ಶೋಯೆಬ್ ಬೌಲಿಂಗ್ ಶೈಲಿಯನ್ನು ಬಲವಾಗಿ ಖಂಡಿಸಿದರು.
ಬೌಲಿಂಗ್ ಶೈಲಿಯ ಬಗ್ಗೆ ಮಾತನಾಡಿದ ಫ್ಲೆಮಿಂಗ್ - ಚೆಂಡುಗಳ ಗತಿಯನ್ನು ಗುರ್ತಿಸುವುದೇ ಕಷ್ಟವಾಗಿತ್ತು. ನಾವೀ ಪ್ರಕರಣವನ್ನು ಇತರರಿಗೆ ಬಿಡಲು ನಿರ್ಧರಿಸಿದ್ದೇವೆ. ಬೌಲರ್ಗಳ ಬೌಲಿಂಗ್ ಶೈಲಿಯನ್ನು ಹದ್ದಿನ ಕಣ್ಣಿನಿಂದ ಗಮನಿಸಿ, ಅನುಮಾನಾಸ್ಪದ ಶೈಲಿಗಳನ್ನು ಪರೀಕ್ಷೆಗೊಳಪಡಿಸುವುದು ಐಸಿಸಿ ಕೆಲಸ ಎಂದು ಅವರು ಹೇಳಿದರು.
ಗಾಯಗೊಂಡ ಕಾರಣದಿಂದಾಗಿ ಬಹಳಷ್ಟು ಅಂತರರಾಷ್ಟ್ರೀಯ ಪಂದ್ಯಗಳನ್ನು ಕಳೆದುಕೊಂಡಿದ್ದ ಅಖ್ತರ್, ಗುಣಮುಖರಾದ ನಂತರ ಇದೇ ಮೊದಲಬಾರಿಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದರು. ಆದರೆ, ಬೌಲಿಂಗ್ ಶೈಲಿಯ ಬಗೆಗಿನ ಆಪಾದನೆಗಳಿಂದಾಗಿ ಅವರ ಆಟದ ಮರು ಆರಂಭ ಅಷ್ಟೇನೂ ಹಿತಕರವಾಗಿಲ್ಲ .
(ಎಪಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications