ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ರಜೆಯ ಮಜಾ ನಿಮಗಿವತ್ತು ಸಿಗುವ ಹಾಗೆ ಕಾಣಿಸುವುದಿಲ್ಲ. ಧಾರ್ಮಿಕ ಕೆಲಸ ಕಾರ್ಯಗಳು ನಿಮ್ಮ ಮನೆಯಲ್ಲಿ ನೆರವೇರುವ ಲಕ್ಷಣಗಳು ಕಾಣಿಸುವುದರಿಂದ ನೀವು ಇವತ್ತು ಸಿಕ್ಕಾ ಪಟ್ಟೆ ಕೆಲಸದ ಒತ್ತಡ ಎದುರಿಸುತ್ತೀರಿ.ವೃಷಭ :ನಿಮ್ಮ ಸಂಗಾತಿ ಇವತ್ತು ಮುನಿಸಿಕೊಳ್ಳುತ್ತಾರೆ ಅಂತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಡಿ. ಎಲ್ಲ ಕ್ಷಣಿಕ. ಕಿಸೆ ಸ್ವಲ್ಪ ಹಗುರವಾಗಬಹುದು. ಆದರೆ ನಂತರ ನಿಮಗೆ ಸಿಗುವ ಖುಷಿಗೆ ಸಮನುಂಟೇ ?
ಮಿಥುನ : ಎದುರಾಗುವ ಎಲ್ಲ ಸಂದರ್ಭಗಳನ್ನು ಕಳೆದು ಹೋದುದರ ಬಗ್ಗೆ ಹೋಲಿಸಿಕೊಂಡು ನರಳುತ್ತೀರಿ. ಅದರಿಂದ ಪ್ರಯೋಜನವಿಲ್ಲ ಅಂತ ಗೊತ್ತಿದ್ದರೂ, ದಿನ ಹಾಳು ಮಾಡಿಕೊಳ್ಳಬೇಡಿ. ಬಂಧು ಮಿತ್ರರ ಸಹಕಾರವಿದೆ.
ಕಟಕ : ಮಕ್ಕಳು ಕಿರಿಕಿರಿ ಮಾಡಿದರು ಅಂತ ಮನಸ್ಸು ಕೆಡಿಸಿಕೊಳ್ಳಬಾರದಲ್ಲವಾ ? ಕೌಟುಂಬಿಕ ಅಶಾಂತಿಯಿಂದ ಬಳ್ಳಲುತ್ತಿದ್ದೇನೆ ಅಂತ ಖಿನ್ನರಾಗಿರಬೇಡಿ.
ಸಿಂಹ : ಸ್ನೇಹಿತರು ನಿಮ್ಮ ಕಾಲ ಮೇಲೆ ಬೀಳಬೇಕು, ನೀವು ಅವರನ್ನು ಆಳಬೇಕು ಎಂಬ ಜಂಭ ಬೇಡ. ಉನ್ನತ ವ್ಯಾಸಂಗ ಹಿಂದುಳಿಯುತ್ತಿರುವುದು ಗಮನಕ್ಕೆ ಬಂದರೂ ಯಾಕೆ ಸುಮ್ಮನಿದ್ದೀರಿ ?
ಕನ್ಯಾ : ಸಂಗಾತಿಯನ್ನು ಸುಮ್ಮನೇ ಗೋಳು ಹೊಯ್ಕೋಬೇಡಿ. ಅದರಿಂದ ನಿಮಗೂ ಬೇಸರ ಅಲ್ವಾ ? ಮನೆಯಲ್ಲಿ ಶುಭಕಾರ್ಯವಿದೆ. ಮಕ್ಕಳಿಂದ ಶುಭ.
ತುಲಾ : ಆಫೀೕಸಿನ ಚಿಂತೆ ಮನೆಯಲ್ಲಿ ಕಾಡುತ್ತಿರುತ್ತದೆ. ಅಪರೂಪದ ಗೆಳೆಯರೊಂದಿಗಿನ ಮಾತುಕತೆ ದಿನವಿಡೀ ಉಲ್ಲಾಸ ತರುತ್ತದೆ. ಅವರ ಸಹಕಾರದಿಂದ ಏಳಿಗೆಯಾಗಬಹುದು.
ವೃಶ್ಚಿಕ : ಕನಸೆಲ್ಲಾ ನಿಜವಾಗುವುದಿಲ್ಲ ಅಂತ ಗೊತ್ತಿಲ್ಲವೇ ? ಸ್ವ ಪ್ರಯತ್ನಕ್ಕೂ ಬೆಲೆ ಇರುತ್ತದೆ ಅಂತ ನಿಮಗೆ ಬೇರೆಯೇ ಹೇಳಬೇಕಾಗಿಲ್ಲ. ಮಕ್ಕಳ ತಂಟೆಯಿದ್ದರೂ ಖುಷಿಯಾಗಿರುತ್ತೀರಿ. ಮನಸ್ಸು ಮಾಡಿದರೆ ಕೈಯಲ್ಲಿ ಹಣ ಎಣಿಸಬಹುದು. ಆರೋಗ್ಯ ಜೋಪಾನ ಮತ್ತೆ !
ಧನಸ್ಸು :ಇವತ್ತು ಶಾಪಿಂಗ್ ಡೇ ಅಂತಿಟ್ಟುಕೊಳ್ಳಿ. ಹಣ ಖರ್ಚಾದರೂ ಒಳ್ಳೆಯದಕ್ಕೇ ವಿನಿಯೋಗವಾದರೆ ಒಳ್ಳೆಯದಲ್ವಾ? ಶತ್ರು ಭಯ ಬೇಡ. ನ್ಯಾಯಾಲಯ ವಿಷಯದಲ್ಲಿ ಮಿತ್ರರ ಸಲಹೆ ಪಡೆಯಿರಿ.
ಮಕರ : ಇವತ್ತು ಆರಾಮ ದಿನ ಅಂತ ಅಂದುಕೊಳ್ಳಬೇಡಿ. ಇನ್ನೂ ಎಷ್ಟೊಂದು ಕೆಲಸಗಳು ನಿಮ್ಮ ಮುಂದೆ ರಾಶಿ ಬಿದ್ದಿದೆ. ನಿಮ್ಮ ಸ್ನೇಹಿತರು ಒಳ್ಳೆಯವರಾದ್ದರಿಂದ ನೀವು ಲಕ್ಕೀ ಎಂದೇ ಲೆಕ್ಕ.
ಕುಂಭ : ದೂರ ಪ್ರಯಾಣ ಸಂಭವವಿದೆ. ಮನೆ ಮಂದಿಯಾಂದಿಗಿನ ಒಡನಾಟ ಖುಷಿ ತಾರದಿರುತ್ತದೆಯೇ ? ಮನೆಯಲ್ಲಿನ ಆರಾಮ ಆಫೀಸಿನಲ್ಲಿಯೂ ನಿಮ್ಮ ಮೂಡ್ ಚೆನ್ನಾಗಿರುವಂತೆ ಮಾಡುತ್ತದೆ.
ಮೀನ : ಸುಳ್ಳು ಹೇಳುವುದು ಕಡಿಮೆ ಮಾಡಿ. ಇವತ್ತು ಬಂಧು ವರ್ಗದವರನ್ನು ಭೇಟಿಯಾಗುತ್ತೀರಿ. ಮಾಮೂಲಿ ಸಣ್ಣ ಪುಟ್ಟ ಜಗಳ. ಮನೆ ಎಂದ ಮೇಲೆ ಇದೆಲ್ಲಾ ಮಾಮೂಲು ಬಿಡಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications