ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೆಜ್ಜಾಲ ಬಳಿ ಅಪಘಾತ : ಇಬ್ಬರ ಸಾವು, 18 ಮಂದಿಗೆ ಗಾಯ
ಬೆಂಗಳೂರು : ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಶಾಲಾ ಮಕ್ಕಳ ಬಸ್ಸು ಹಾಗೂ ಟೊಯೋಟಾ ಕಾರುಗಳಿದ್ದ ಲಾರಿ ನಡುವೆ ಹೆಜ್ಜಾಲ ಸಮೀಪ ಶನಿವಾರ ರಾತ್ರಿ 9 ಗಂಟೆಗೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದು , 18 ಮಂದಿ ಗಾಯಗೊಂಡಿದ್ದಾರೆ.
ತೀವ್ರವಾಗಿ ಗಾಯಗೊಂಡವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು , ಸಣ್ಣಪುಟ್ಟ ಗಾಯಗೊಂಡವರಿಗೆ ಬಿಡದಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕ ರಾಮಕೃಷ್ಣ ತಿಳಿಸಿದ್ದಾರೆ.
ಅಪಘಾತದಲ್ಲಿ ನಿಧನರಾದವರನ್ನು ಕಸ್ತೂರಿ ಬಾಯಿ (35) ಹಾಗೂ ಶರ್ಲಿನ್ (9) ಎಂದು ಗುರ್ತಿಸಲಾಗಿದೆ. ಗುಂಡ್ಲುಪೇಟೆಯ ಸಿಎಂಎಸ್ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದು , ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಸ್ಸಿನಲ್ಲಿ 77 ಮಕ್ಕಳ ಸಹಿತ 93 ಜನರು ಪ್ರಯಾಣಿಸುತ್ತಿದ್ದರು.
(ಇನ್ಫೋ ವಾರ್ತೆ)
Comments
Story first published: Sunday, February 18, 2001, 5:30 [IST]