ಸಂಗೊಳ್ಳಿ ರಾಯಣ್ಣನ ವೀರಭೂಮಿ ನಂದಗಢದಲ್ಲಿ ಲಕ್ಷ್ಮೀ ಉತ್ಸವ
ಬೆಳಗಾವಿ : ಕನ್ನಡದ ಕಲಿ ಸಂಗೊಳ್ಳಿ ರಾಯಣ್ಣನ ಗಲ್ಲು ಗಂಭಕ್ಕೇರಿಸಿದ ಗಂಡು ಮೆಟ್ಟಿನ ಭೂಮಿ ನಂದಗಢ (ಬೆಳಗಾವಿ ಜಿಲ್ಲೆ) ದಲ್ಲಿ 22 ವರ್ಷಗಳ ನಂತರ ಗ್ರಾಮದೇವತೆ ಲಕ್ಷ್ಮೀದೇವಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಗ್ರಾಮದ ಮನೆಮನೆಗಳಿಗೆ ಸಾಗಿ ಉಡಿ ತುಂಬಿಸುಕೊಳ್ಳುವ ಕಾರ್ಯಕ್ರಮ ಸಾಗಿದೆ. ದೇವಿ ಉತ್ಸವದ ನಿಮಿತ್ತ 12 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
12 ವರ್ಷಗಳಿಗೊಮ್ಮೆ ನಡೆಯುವ ಗ್ರಾಮದೇವತೆಯ ಈ ಉತ್ಸವ ಕಾರಣಾಂತರಗಳಿಂದ 1978ರಿಂದ ನಿಂತು ಹೋಗಿತ್ತು. ಆದರೆ, ಈ ಬಾರಿ ಪುರಪ್ರಮುಖರು ಸಭೆ ಸೇರಿ ಉತ್ಸವ ನಡೆಸುವ ತೀರ್ಮಾನ ಕೈಗೊಂಡರು. ಲಕ್ಷ್ಮೀದೇವಿ ಉತ್ಸವದ ಪ್ರಯುಕ್ತ ರಥೋತ್ಸವ, ಹರಿ ಜಾಗರಣೆ, ಭಜನೆ, ಬಂಡಿಗಳ ಮೆರವಣಿಗೆ, ನಾಟಕ, ಜಂಗಿ ಕುಸ್ತಿ ಕಾರ್ಯಕ್ರಮಗಳೂ ನಡೆಯುತ್ತಿವೆ.
ರಂಗ ಕಲೆ ಇನ್ನೂ ಜೀವಂತವಾಗಿರುವ ಉತ್ತರ ಕರ್ನಾಟಕದ ಈ ಭಾಗದಲ್ಲಿ ಉತ್ಸವದ 12 ದಿನವೂ ಒಂದೊಂದು ನಾಟಕ ಪ್ರದರ್ಶನ ನಡೆಯುತ್ತಿದೆ. ಫೆಬ್ರವರಿ 7ರಂದು ಆರಂಭಗೊಂಡ ಉತ್ಸವ 18ರ ಭಾನುವಾರ ಸೀಮೆ ಕಡೆಗೆ ಗ್ರಾಮದೇವತೆ ಲಕ್ಷ್ಮೀದೇವಿಯವರ ಮೆರವಣಿಗೆಯಾಂದಿಗೆ ಅಂತ್ಯಗೊಳ್ಳುತ್ತದೆ.
ಏಳನೇ ತಾರೀಖಿನಿಂದ ಇಲ್ಲಿ ಗರಿಬಾಂಚಾ ಕೈವಾರಿ, ಸಂಗ್ಯಾ ಬಾಳ್ಯಾ, ದರ್ಡಾಸಿಂಗ ದರೋಡಾ, ತನ ಮಾಚೋರಿ, ಡಾಕು ಸಂಗ್ರಾಮ ಮುಂತಾದ ನಾಟಕ ಪ್ರದರ್ಶನಗಳು ನಡೆದವು. ಮಹಾತ್ಮಾಗಾಂಧಿ ಹೈಸ್ಕೂಲ್ ಬಳಿಯ ಮೈದಾನದಲ್ಲಿ ಜಂಗಿ ಕುಸ್ತಿಯೂ ನಡೆಯಿತು. ವಿಜೇತರಿಗೆ ಸಾವಿರಾರು ರುಪಾಯಿಗಳ ನಗದು ಬಹುಮಾನವನ್ನೂ ನೀಡಲಾಯಿತು.
ಬಂಡಿ ಮೆರವಣಿಗೆ : ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಅಲಂಕೃತ ಎತ್ತಿನ ಗಾಡಿಗಳ ಮೆರವಣಿಗೆಯನ್ನೂ ಏರ್ಪಡಿಸಲಾಗಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಲಂಕೃತವಾಗಿ ಸಂಚರಿಸುವ ಈ ಬಂಡಿಗಳಲ್ಲಿ , ಮನ ಸೆಳೆಯುವಂತೆ ಸಿಂಗರಿಸಿಕೊಂಡ ಬಂಡಿಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ ಎಂದು ಗ್ರಾಮದೇವತಾ ಶ್ರೀ ಲಕ್ಷ್ಮೀ ಉತ್ಸವ ಕಮಿಟಿಯ ಪಿ.ಕೆ. ಪಾಟೀಲ್ ತಿಳಿಸಿದ್ದಾರೆ.
(ಬೆಳಗಾವಿ ಪ್ರತಿನಿಧಿಯಿಂದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications