Get Updates
Get notified of breaking news, exclusive insights, and must-see stories!

ಅಜರ್‌ ದಾವೆ : ಬಿಸಿಸಿಐನಿಂದ ಕೋರ್ಟ್‌ಗೆ ಪ್ರತಿ ಪ್ರಮಾಣ ಪತ್ರ

ಹೈದರಾಬಾದ್‌ : ಮೋಸದಾಟ ಆರೋಪದ ಮೇಲೆ ಕ್ರಿಕೆಟ್‌ನಿಂದ ಜೀವಾವಧಿ ನಿಷೇಧ ಹೇರಿರುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಬುಧವಾರ ನಗರದ ಸಿವಿಲ್‌ ನ್ಯಾಯಾಲಯದಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೌಂಟರ್‌ ಅಫಿಡವಿಟ್‌ ಸಲ್ಲಿಸಿತು.

ಬಿಸಿಸಿಐ ಸಲಹೆಗಾರ ನರೋತ್ತಮ್‌ ರೆಡ್ಡಿ , ಕೆ. ಮಾಧವನ್‌ರ ಸಹಾಯಕ ಅಶೋಕ್‌ ಹಾಗೂ ರಾಧಾ ರಂಗನಾಥನ್‌ ಅವರುಗಳು ಕೌಂಟರ್‌ ಅಫಿಡವಿಟ್ಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಸಿಸಿಐ ಕಾರ್ಯಕಾರಿ ಕಾರ್ಯದರ್ಶಿ ಶರದ್‌ ದಿವಾಡ್ಕರ್‌ ಹಾಜರಿದ್ದರು. ತಾವು ಕೋರ್ಟಿಗೆ ಸಲ್ಲಿಸಿದ ದಾಖಲೆಗಳ ವಿವರಗಳನ್ನು ಬಹಿರಂಗಪಡಿಸಲು ನರೋತ್ತಮ್‌ ನಿರಾಕರಿಸಿದರು.

ಈ ಮುನ್ನ ಜನವರಿ 19 ರಂದು, ತಮ್ಮ ವಿರುದ್ಧ ಬಿಸಿಸಿಐ ಹೇರಿದ್ದ ಜೀವಾವಧಿ ನಿಷೇಧವನ್ನು ಪ್ರಶ್ನಿಸಿ ಅಜರುದ್ದೀನ್‌ ನ್ಯಾಯಾಲಯದ ಕಟ್ಟೆ ಹತ್ತಿದ್ದರು. ಮಾಧವನ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ ಕ್ರಮಬದ್ಧತೆ ಹಾಗೂ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರೆಯಲು ಎ.ಸಿ.ಮುತ್ತಯ್ಯ ಅವರ ಅರ್ಹತೆಯನ್ನೂ ಅವರು ಪ್ರಶ್ನಿಸಿದ್ದರು.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+