ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೇರಳ: ಕೊಟ್ಟಾಯಂ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಲಘು ಭೂಕಂಪ
ತಿರುವನಂತಪುರ : ಗುಜರಾತಿನಲ್ಲಿ ಬಿಟ್ಟೂ ಬಿಡದೆ ನಿತ್ಯವೂ ನೆಲ ನಡುಗುತ್ತಲೇ ಇರುವಾಗ, ಆ ಕಂಪನ ಕೇರಳದಲ್ಲೂ ಕಾಣಿಸಿಕೊಂಡಿದೆ. ಕೊಟ್ಟಾಯಂ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಮಂಗಳವಾರ ಲಘು ಭೂಕಂಪ ಸಂಭವಿಸಿತೆಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕೊಟ್ಟಾಯಂ ವರದಿಗಳ ಪ್ರಕಾರ - ಪೊಂಕುಣ್ಣಂ, ಪೈಕಾ, ಚಿರಕ್ಕಡವು ಹಾಗೂ ಉರುಲಿಕ್ಕುಣ್ಣಂ ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆ ಲಘು ಭೂಕಂಪನಗಳು ಸಂಭವಿಸಿವೆ. ಚಿರಕ್ಕಡವು ಪ್ರದೇಶದಲ್ಲಿ ಕಂಪನದಿಂದಾಗಿ ಭಾರೀ ಶಬ್ದ ಕೇಳಿಸಿದೆ. ಭಯಭೀತರಾದ ಜನರು ಮನೆಗಳಿಂದ ಓಡಿ ಬಂದು ಬೀದಿ ಬಯಲುಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ಯಾವುದೇ ಜೀವ- ಆಸ್ತಿ ಹಾನಿ ಸಂಭವಿಸಿಲ್ಲ .
ಕೊಲ್ಲಂ ವರದಿಯ ಪ್ರಕಾರ, ಎಜುಕೋನ್ ಹಾಗೂ ವಟ್ಟಾಮನ್ ಪ್ರದೇಶಗಳ ಸುಮಾರು ಅರ್ಧ ಡಜನ್ ಮನೆಗಳಿಗೆ ಕಂಪನದಿಂದಾಗಿ ಸಣ್ಣ ಪ್ರಮಾಣದ ಧಕ್ಕೆಯಾಗಿದೆ.
(ಯುಎನ್ಐ)
Story first published: Tuesday, February 13, 2001, 5:30 [IST]