ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಪ್ರವಾಸ ಹೊರಡಲು ಸುಸಮಯ. ಸಂಗಾತಿ ಮತ್ತು ಮಕ್ಕಳೊಂದಿಗೆ ಹರಟೆ ಹೊಡೆಯುತ್ತಾ ರಿಲ್ಯಾಕ್ಸ್‌ ಆಗಲು ಇದಕ್ಕಿಂತ ಒಳ್ಳೆಯ ದಿನ ಬೇರೆ ಸದ್ಯಕ್ಕೆ ಕಾಣಿಸದು. ಸಹೋದ್ಯೋಗಿಗಳ ಒಲವು ಗಳಿಸಬೇಕೆಂಬ ಹಠ ಬೇಡ.

ವೃಷಭ :ಆರಂಬಿಸಿದ ಹೊಸ ಕಾರ್ಯದ ಲಕ್‌ ಚೆನ್ನಾಗಿದೆ. ಲಾಭದ ಮೊದಲ ಕಂತಿನ ಸುದ್ದಿ ತಲುಪಲಿದೆ. ಈ ಸಂದರ್ಭದಲ್ಲಿ ನೀಚ ಜನರ ಕಿರಿಕಿರಿಗೆ ಮನಸ್ಸು ವಿಚಲಿತವಾದರೆ ಕೆಡುತ್ತೀರಿ.

ಮಿಥುನ : ನಿಮ್ಮ ಸ್ನೇಹಿತರು ಹೇಳುವ ಬುದ್ಧಿ ಮಾತು ವಾಸ್ತವ ಅಲ್ಲವೇ ? ವಿಪರೀತ ಖರ್ಚು ಮಾಡುವ ಪರಿಸ್ಥಿತಿ ನಿಮ್ಮ ಮುಂದಿಲ್ಲ. ಅಗತ್ಯವಿಲ್ಲದ ಕಡೆಗೆಲ್ಲಾ ಓಡುವ ಮನಸ್ಸನ್ನು ಒಂದೆಡೆ ಹಿಡಿದು ನಿಲ್ಲಿಸಿ.

ಕಟಕ : ಸ್ಥಾನ ಮಾನ ವೃದ್ಧಿ ಎಂದರೆ ಆಫೀಸನಲ್ಲಿ ಶುಭ ಸುದ್ದಿ ಕಾದಿದೆ ಎಂದಾಯಿತು. ಸದ್ಯದಲ್ಲಿಯೇ ಪಾರ್ಟಿ, ಡಿನ್ನರ್‌ಗಳಿಗೆ ತಯಾರಿ ನಡೆಸಬೇಕಾಗಿ ಬರಬಹುದು.

ಸಿಂಹ : ಇಷ್ಟು ದಿನದ ಸೋಲುಗಳಿಗೆ ಇವತ್ತು ಉತ್ತರ ಸಿಗುತ್ತದೆ. ಶ್ರಮ ಜೀವಿಗಳೆನಿಸಿಕೊಂಡು ಸ್ನೇಹಿತರಿಂದ ಹೊಗಳಿಸಿಕೊಳ್ಳುತ್ತೀರಿ. ಹಾಗೆಂದು ಮತ್ತೆ ಉಡಾಫೆ ಮಾಡಿದರೆ ಸೋಲು ನಿಮ್ಮನ್ನೆತ್ತಿ ಕುಕ್ಕಬಹುದು. ಸ್ನೇಹದ ನಡುವೆ ಅಧಿಕಾರ ಚಲಾಯಿಸಿದರೆ ಅದು ನಿಷ್ಪ್ರಯೋಜಕ .

ಕನ್ಯಾ : ಈ ಸೂಕ್ಷ್ಮ ಪ್ರವೃತ್ತಿಯಿಂದ ಇಲ್ಲದ ಸಮಸ್ಯೆ ತಂದೊಡ್ಡಿಕೊಳ್ಳುತ್ತೀರಿ. ಮನೆ ಕಟ್ಟುವ ಯೋಚನೆ ಇದ್ದರೆ ಇವತ್ತು ಆ ಕೆಲಸಕ್ಕೆ ಚಾಲನೆ ಸಿಗಬಹುದು. ಇದಕ್ಕಿಂತ ಶುಭ ಸುದ್ದಿ ಬೇಕೇ ? ರಾಜಕೀಯ ರಂಗದಲ್ಲಿದ್ದರಂತೂ ಪ್ರಶಂಸೆಯ ಸುರಿಮಳೆ

ತುಲಾ : ಹಣ ಪೋಲು ಮಾಡಿದರೆ ಮುಂದಿನ ದಿನಗಳನ್ನು ಹೇಗೆ ಕಳೆಯುತ್ತೀರಿ? ಔದ್ಯೋಗಿಕ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಇರಬಹುದು. ಸಂಜೆ ಹೊತ್ತಿಗೆ ಮಕ್ಕಳಿಂದ ಖುಷಿ ಸುದ್ದಿ ಬರುತ್ತದೆ.

ವೃಶ್ಚಿಕ : ಬರೀ ಸುತ್ತಾಟ. ಮನೆಯಲ್ಲಿ ಬೋರ್‌ ಹೊಡೆಯುತ್ತದೆ ಎಂದುಕೊಂಡು ನೀವಾರಂಭಿಸುವ ಕೆಲಸ, ನಂತರ ತೊಂದರೆ ಕೊಡಬಹುದು. ಆರೋಗ್ಯದ ಕಡೆಗೂ ಗಮನ ಕೊಡಬೇಕಲ್ಲವಾ ?

ಧನಸ್ಸು :ಆರಂಭಿಸಿದ ಕೆಲಸದಲ್ಲಿ ಬರುವ ಅಡ್ಡಿ ಆತಂಕ, ಅಡೆ ತಡೆಗಳಿಂದ ಮನಸ್ಸು ಕೆಡಿಸಿಕೊಳ್ಳುತ್ತೀರಿ. ಆದರೆ ಸದ್ಯಕ್ಕೆ ಬರುವ ಕಷ್ಟ ನಷ್ಟಗಳಿಂದ ಪಾರಾಗಿ ಬಂದರೆ ಲಕ್‌ ನಿಮ್ಮ ಕೈಯಾಳಗೆ ಇರುತ್ತದೆ. ಆ ಕನಸಿನ ಮೂಲಕ ಇಂದಿನ ನೋವನ್ನು ನಿವಾರಿಸಿಕೊಳ್ಳಿ. ಆಲ್‌ ದ ಬೆಸ್ಟ್‌.

ಮಕರ : ತಮ್ಮ ಕೆಲಸವಾಗಲಿ ಎಂದು ನಿಮ್ಮ ಕಿವಿ ಊದುವ ಸ್ನೇಹಿತರಿಂದ ಕೆಲಸ ಕೆಡಿಸಿಕೊಳ್ಳುವ ಭಯವಿದೆ. ಮನೆಯಲ್ಲಿ ಶುಭ ಕಾರ್ಯಗಳು ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು. ಆರೋಗ್ಯ ಜೋಪಾನ ಇಟ್ಟುಕೊಂಡಲ್ಲಿ ಇದು ಸುದಿನ.

ಕುಂಭ : ಹಠಮಾರಿತನವೊಂದು ಬಿಟ್ಟರೆ ನಿಮ್ಮ ಮನೆಯ ಸಣ್ಣ ಪುಟ್ಟ ಜಗಳಕ್ಕೆ ಪೂರ್ಣವಿರಾಮ ಇಡಬಹುದು. ನಿಮ್ಮಿಂದಲೇ ಸಮಸ್ಯೆ ಸೃಷ್ಟಿಯಾಗಿರುವುದಲ್ಲವೇ ? ಅತಿಯಾಸೆ ಬೇಡ. ನೆಮ್ಮದಿ ನಿಮ್ಮ ಬಳಿ ಮಲಗಿರುತ್ತದೆ.

ಮೀನ : ದೈವಬಲವಿದೆ. ಕಾರ್ಯ ಜಯ ಯೋಗ. ಆದರೆ ಸಮುದ್ರದ ತುಂಬ ಇರುವ ನೀರು ನಿಮ್ಮ ಬಿಂದಿಗೆಯಳತೆಯಷ್ಟೇ ನಿಮಗೆ ಸಿಗುವುದು. ನಿಮ್ಮ ಬಳಿ ಇರುವ ಧೈರ್ಯದಿಂದ ಸದ್ಯದ ಕಷ್ಟಗಳನ್ನು ನಿವಾರಿಸುವುದು ಕಷ್ಟ ಸಾಧ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X