ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೂವರು ಸ್ಪಿನ್ನರ್ಸ್ ಬಳಕೆ - ಗಂಗೂಲಿ
ಚೆನ್ನೈ : ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಮೂವರು ಸ್ಪಿನ್ನರ್ಗಳನ್ನು ಆಡಿಸುವ ಇರಾದೆಯನ್ನು ಭಾರತ ತಂಡದ ನಾಯಕ ಸೌರವ್ ಗಂಗೂಲಿ ವ್ಯಕ್ತಪಡಿಸಿದ್ದಾರೆ. ಚೆನ್ನೈನಲ್ಲಿ ನಡೆದ ಐದು ದಿನಗಳ ತರಬೇತಿ ಶಿಬಿರದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಗಂಗೂಲಿ ಈ ವಿಷಯ ತಿಳಿಸಿದರು.
ಚೆನ್ನೈನಲ್ಲಿ ಮತ್ತೆ 16ರಿಂದ 18ರವರೆಗೆ ಅಲ್ಪಕಾಲದ ತರಬೇತಿ ಶಿಬಿರದಲ್ಲಿ ನಾವು ಪಾಲ್ಗೊಳ್ಳುತ್ತೇವೆ. ನಮಗಿನ್ನೂ 16 ದಿನಗಳ ಕಾಲಾವಕಾಶ ಇದೆ. ನಿಧಾನವಾಗಿ ನಮ್ಮ ಕ್ರೀಡಾ ತಂತ್ರಗಳ ಬಗ್ಗೆ ಸಮಾಲೋಚಿಸಿ, ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು. ಮುಂಬೈನಲ್ಲಿ ನಡೆವ ಮೊದಲ ಟೆಸ್ಟ್ ಪಂದ್ಯಕ್ಕೆ ಮೂರ್ನಾಲ್ಕು ದಿನ ಮೊದಲೇ ನಾವು ಅಲ್ಲಿ ಸೇರಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಮಾನಸಿಕವಾಗಿ ಸಜ್ಜಾಗುತ್ತೇವೆ ಎಂದೂ ಅವರು ಹೇಳಿದರು.
ಒಬ್ಬರಿಂದ ಗೆಲುವು ಸಾಧ್ಯವಿಲ್ಲ : ಯಾವುದೇ ತಂಡ ಒಬ್ಬ ಕ್ರಿಕೆಟಿಗನಿಂದ ಗೆಲ್ಲಲು ಸಾಧ್ಯವಿಲ್ಲ. ತಂಡ ಒಟ್ಟಾಗಿ ಹೋರಾಡಿದಾಗ ಮಾತ್ರ ಗೆಲವು ಸಾಧ್ಯ. ನಾವು ಒಂದು ಸಮರ್ಥ ತಂಡವಾಗಿ ಆಸ್ಟ್ರೇಲಿಯಾ ವಿರುದ್ಧ ಸೆಣಸುತ್ತೇವೆ. ಯಾರು ಹೆಚ್ಚು ಉತ್ತಮವಾಗಿ ಆಡುತ್ತಾರೋ ಅವರು ಗೆಲ್ಲುತ್ತಾರೆ ಎಂದರು ಗಂಗೂಲಿ.
ಸ್ಟೀವ್ ವಾ ಅವರ ಹೇಳಿಕೆಯಿಂದ ಕೊಂಚ ಕಿರಿಕಿರಿಗೊಂಡವರಂತೆ ಕಂಡು ಬಂದ ಗಂಗೂಲಿ, ತಾವಾಗಲೀ ತಮ್ಮ ತಂಡವಾಗಲೀ ಒತ್ತಡದಲ್ಲಿ ಸಿಲುಕಿಲ್ಲ. ವಿಶ್ವಚಾಂಪಿಯನ್ನರಾಗಿ ಭಾರತಕ್ಕೆ ಬಂದಿರುವ ಆಸ್ಟ್ರೇಲಿಯನ್ನರೇ ಒತ್ತಡಕ್ಕೆ ಸಿಲುಕಿರಬೇಕು. ಕ್ರಿಕೆಟ್ ಸರಣಿ ಆರಂಭವಾಗುತ್ತಿದ್ದಂತೆಯೇ ಯಾವ ತಂಡ ಒತ್ತಡಕ್ಕೆ ಸಿಲುಕಿದೆ ಎಂಬುದು ಎಲ್ಲರಿಗೂ ತಿಳಿಯುತ್ತದೆ ಎಂದರು.
ಇಲ್ಲಿ ನಡೆದ ತರಬೇತಿ ಶಿಬಿರ ಹಿಂದಿನ ಶಿಬಿರಗಳಿಗಿಂತಲೂ ಭಿನ್ನವಾಗಿತ್ತು. ನಮ್ಮ ಹುಡುಗರು ಸಮರ್ಥರಾಗಿದ್ದಾರೆ. ಎಲ್ಲರಲ್ಲೂ ಉತ್ಸಾಹ ಹಾಗೂ ಪಂದ್ಯ ಎದುರಿಸುವ ಕಾತರ ಇದೆ. ನಾವು ಪಂದ್ಯ ಗೆಲ್ಲುವ ಉದ್ದೇಶದಿಂದಷ್ಟೇ ಆಡುತ್ತೇವೆ. ಒತ್ತಡಕ್ಕೆ ಒಳಗಾಗೆವು ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.
ಸಂಭವನೀಯ ತಂಡದ ಎಲ್ಲ 25 ಆಟಗಾರರೂ ಕ್ಯಾಂಪ್ನಲ್ಲಿ ಶ್ರಮಪಟ್ಟು ಅಭ್ಯಾಸ ಮಾಡಿದ್ದಾರೆ. ನಾವು ಈ ಬಾರಿ ಕ್ಷೇತ್ರ ರಕ್ಷಣೆಯ ಬಗ್ಗೆ ಹೆಚ್ಚು ಗಮನಹರಿಸಿದ್ದೇವೆ. ನಮ್ಮ ಹುಡುಗರು ಕ್ಷೇತ್ರರಕ್ಷಣೆಯ ತಂತ್ರಗಳನ್ನು ಹಾಗೂ ಕೌಶಲಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ ಎಂದರು. ನಮಗೆ ವೇಗದ ಬೌಲರ್ಗಳ ಉತ್ತಮ ಸಹಕಾರವೂ ಇದೆ ಎಂದರು. ತಂಡದಲ್ಲಿ ಐವರು ನುರಿತ ಬೌಲರ್ಗಳಿರಬೇಕೇ ಬೇಡವೆ ಎಂಬುದನ್ನು ಪಿಚ್ನ ಲಕ್ಷಣದ ಮೇಲೆ ನಿರ್ಧರಿಸುತ್ತೇವೆ ಎಂದರು. ಯುವ ಸ್ಪಿನ್ ಬೌಲರ್ಗಳ ಬಗ್ಗೆ ನಾಯಕ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೊದಲ ಪಂದ್ಯವನ್ನು ತಾವು ಕಾತರದಿಂದ ಎದುರು ನೋಡುತ್ತಿರುವುದಾಗಿ ಅವರು ಹೇಳಿದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications