ರಂಗಿನ ಏರೋ ಇಂಡಿಯಾ -2001 - ಇಂದು ಕೊನೆಯ ದಿನ
ಬೆಂಗಳೂರು : ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ ರಂಗುರಂಗಿನ ವೈಮಾನಿಕ ಪ್ರದರ್ಶನಕ್ಕೆ ರಂಗೇರಿದೆ. ಮೊದಲೆರಡು ದಿನ ಬಾರದಿದ್ದ ಎಲ್.ಸಿ.ಎ. ಹಾರಾಟ ನಡೆಸಿದ ಮೇಲೆ ವೈಮಾನಿಕ ಪ್ರದರ್ಶನ ಸ್ಥಳದಲ್ಲಿ ಜನಸಾಗರ. ಶನಿವಾರದ ರಜೆಯೂ ಇದಕ್ಕೆ ಪೂರಕವಾಗಿತ್ತು.
ಬಾನಂಗಳದಲ್ಲಿ ನಡೆಯುವ ಕಸರತ್ತು ಕಾಣಲು ಸಾವಿರಾರು ಜನರು ಆಗಮಿಸಿದ್ದರು. ಶನಿವಾರ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ವೈಮಾನಿಕ ಪ್ರದರ್ಶನ - ಕಸರತ್ತುಗಳನ್ನು ಕಂಡು ಆನಂದ ಅನುಭವಿಸಿದರು. ಇಂದು ಪ್ರದರ್ಶನದ ಕೊನೆಯ ದಿನ. ಭಾನುವಾರದ ರಜೆಯ ಹಿನ್ನೆಲೆಯಲ್ಲಿ 50- 60 ಸಾವಿರ ಜನರು ಬರುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ನಿರಾಶೆ : ಎರಡು ದಿನಗಳ ತರುವಾಯ ಬಾನಂಗಳದಿ ಕಾಣಿಸಿಕೊಂಡ ಲಘು ಸಮರ ವಿಮಾನ ಇಂದು ಮತ್ತೆ ಇಲ್ಲಿಗೆ ಬರಲೇ ಇಲ್ಲ. ಸುಖಾಯ್ ಕೂಡ ಸುಳಿಯಲಿಲ್ಲ. ಎಲ್.ಸಿ.ಎ. ಕಾಣಲೆಂದೇ ಬಂದಿದ್ದ ಸಾವಿರಾರು ಜನ ನಿರಾಶೆಗೊಂಡರಾದರು, ಸೂರ್ಯಕಿರಣ್, ಜಾಗ್ವಾರ್, ಮಿಗ್ ಪ್ರದರ್ಶನ ಕಂಡು ನಿಬ್ಬೆರಗಾದರು.
ಬೇಸಿಗೆಗೆ ಮುನ್ನವೇ ಸುಡುತ್ತಿದ್ದ ಸೂರ್ಯನನ್ನೂ ಲೆಕ್ಕಿಸದೆ, ಬಾನಿನತ್ತ ಮುಖವಿಟ್ಟು, ವೀಕ್ಷಕ ವಿವರಣೆಕಾರರು ನೀಡುತ್ತಿದ್ದ ಮಾಹಿತಿಗಳನ್ನು ಆಲಿಸುತ್ತಾ ಆಗಸದಲ್ಲಿ ಮೂಡುತ್ತಿದ್ದ ರಂಗುರಂಗಿನ ರಂಗೋಲಿಗಳನ್ನು ವೀಕ್ಷಿಸಿದರು. ಪ್ಯಾರಾಚೂಟ್ಗಳ ಕಸರತ್ತು, ತ್ರಿವರ್ಣ ಧ್ವಜದ ಬಣ್ಣದ ಧೂಮ ಕಣ್ಮನ ಸೆಳೆಯಿತು. ಭಾನವಾರ ಬೆಳಗ್ಗಿನಿಂದಲೇ ಜನ ಯಲಹಂಕದತ್ತ ಧಾವಿಸುತ್ತಿದ್ದರು. ವಿಶೇಷ ಬಸ್ಗಳೂ ತುಂಬಿ ತುಳುಕುತ್ತಿದ್ದವು. ಕಾಳಸಂತೆಯಲ್ಲಿ ಟಿಕೆಟ್ ಮಾರಾಟವಾಗುತ್ತಿರುವ ವರದಿಗಳೂ ಬಂದಿವೆ.
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications