ಗುಜರಾತ್ನ ತಬ್ಬ-ಲಿ ಮಕ್ಕಳಿಗೆ ಸುತ್ತೂರು ಮಠದ ಸೂರು
ಮೈಸೂರು : ಗುಜರಾತ್ನ ಭೀಕರ ಭೂಕಂಪದಿಂದಾಗಿ ತಂದೆ ತಾಯಂದಿರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳನ್ನು ಸುತ್ತೂರು ಮಠ ದತ್ತು ತೆಗೆದುಕೊಳ್ಳಲಿದೆ ಎಂದು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ , ದತ್ತು ತೆಗೆದುಕೊಳ್ಳಲಾಗುವ ಮಕ್ಕಳಿಗೆ ಹತ್ತನೇ ತರಗತಿಯವರೆಗೆ ಉಚಿತ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು. ಎಷ್ಟು ಮಂದಿ ಮಕ್ಕಳಿಗಾದರೂ ಮಠ ಸಹಕರಿಸಲು ಸಿದ್ಧವಿದೆ. ಒಂದು ವೇಳೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕಾದ ಸಂದರ್ಭ ಬಂದಲ್ಲಿ ಮಠಾಧೀಶರು ಪ್ರಸ್ತುತ ವಾಸಿಸುತ್ತಿರುವ ಕಟ್ಟಡವನ್ನು ಮಕ್ಕಳಿಗಾಗಿ ಬಿಟ್ಟುಕೊಡಲಾಗುವುದು ಎಂದರು.
ಬಡ ಮಕ್ಕಳಿಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿರುವ ಹೊಸ ಶಾಲೆಯಲ್ಲಿ ಗುಜರಾತಿನ ಮಕ್ಕಳನ್ನೂ ಸೇರಿಸಲಾಗುವುದು. ನಾವೇನೂ ಅತೀ ದೊಡ್ಡ ಸೇವೆ ಮಾಡುತ್ತಿಲ್ಲ . ಬದಲಾಗಿ ಪರಿಸ್ಥಿತಿಗೆ ಸ್ಪಂದಿಸುತ್ತಿದ್ದೇವೆ ಅಷ್ಟೇ ಎಂದು ಸ್ವಾಮೀಜಿ ಪತ್ರಕರ್ತರ ಪ್ರಶ್ನೆಯಾಂದಕ್ಕೆ ಉತ್ತರಿಸಿದರು.
(ಇನ್ಫೋ ವಾರ್ತೆ)
ಮುಖಪುಟ |