ಇನ್ನು ನಾವು ಉದ್ದಿಮೆದಾರರು, ಮಾರಾಟಗಾರರಲ್ಲ : ಸಿ.ಜಿ.ಕೆ.ನಾಯರ್
ಬೆಂಗಳೂರು : ಭಾರತ ವೈಮಾನಿಕ ಉದ್ಯಮ ಸಾಕಷ್ಟು ಬೆಳೆದಿದ್ದು, ಹೊಸ ಯೋಜನೆಗಳಿಗೆ ಜಾಗತಿಕ ಮಟ್ಟದ ಜೊತೆಗಾರರೊಂದಿಗೆ ಕೈಜೋಡಿಸಲು ಸಿದ್ಧವಾಗಿದೆ ಎಂದು ಹಿಂದೂಸ್ತಾನ್ ಏರಾನಾಟಿಕ್ಸ್ ಲಿಮಿಟೆಡ್ನ ಅಧ್ಯಕ್ಷ ಸಿ.ಜಿ. ಕೃಷ್ಣದಾಸ್ ನಾಯರ್ ಶನಿವಾರ ಹೇಳಿದರು.
ಭಾರತೀಯ ವಾಯುಯಾನ ತಂತ್ರಜ್ಞಾನ ಮತ್ತು ಕೈಗಾರಿಕೆ (ಸಿಯಾಟಿ)ಯ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಅಧ್ಯಕ್ಷ ಭಾಷಣ ಮಾಡುತ್ತಿದ್ದರು. ಭಾರತೀಯ ವಾಯುಯಾನ ವರ್ಷಗಳ ಸಾಧನೆಯ ಹಾದಿ ಸವೆಸಿದ್ದು, ಇಂದು ಒಂದು ಉತ್ತಮ ಹಂತ ತಲುಪಿದೆ. ಇನ್ನು ಉಪಕರಣಗಳನ್ನು ಕೊಂಡು- ಮಾರುವ ಕೆಲಸವನ್ನು ನಿಲ್ಲಿಸಿ, ವ್ಯಾಪಾರ ಮತ್ತು ಸಹಕಾರಿ ಕ್ಷೇತ್ರದಲ್ಲಿ ಕೈಜೋಡಿಸಲು ಸಿಯಾಟಿ ನಿರ್ಧರಿಸಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ದೇವನಹಳ್ಳಿ ಬಳಿ ಜಾರಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾದ ನಂತರ ಔದ್ಯೋಗಿಕ ಕ್ಷೇತ್ರದಲ್ಲಿ ನಮಗೆ ದೊಡ್ಡ ಬ್ರೇಕ್ ಸಿಗಲಿದೆ. ಈಗ ಮಾಹಿತಿ ತಂತ್ರಜ್ಞಾನ ಕೇಂದ್ರ ನಗರಿ ಎಂದು ಹೆಸರಾಗಿರುವ ಬೆಂಗಳೂರು ಆಗ ವಿಮಾನಯಾನ ನಗರಿ ಎಂದೂ ಕರೆಸಿಕೊಳ್ಳಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪದ್ಮ ಶ್ರೀ ಪ್ರಶಸ್ತಿ ವಿಜೇತರಾದ ನಾಯರ್ ಹಾಗೂ ಇಸ್ರೋದ ನಿರ್ದೇಶಕ ಪಿ.ಎಸ್.ಗೋಯಲ್ ಅವರನ್ನು ಸನ್ಮಾನಿಸಲಾಯಿತು. 2000ನೇ ಇಸವಿಯಲ್ಲಿ ವಾಯುಯಾನ ಕ್ಷೇತ್ರದ ಸಂಶೋಧನಾ ಕಾರ್ಯದಲ್ಲಿ ಮಹತ್ತರ ಸೇವೆ ಸಲ್ಲಿಸಿ, ವಿದೇಶೀ ವಿನಿಮಯದಲ್ಲಿ ಕೋಟ್ಯಂತರ ರುಪಾಯಿ ಉಳಿಸಿರುವ 7 ಕಂಪನಿಗಳಿಗೆ ‘ಸಿಯಾಟಿ ಪ್ರಶಸ್ತಿ’ ನೀಡಲಾಯಿತು.
(ಯುಎನ್ಐ)