ವೀರಪ್ಪನ್ ಡೈರಿಯಲ್ಲಿ ಎಸ್.ಟಿ.ಎಫ್. ಕಾರ್ಯಾಚರಣೆಯ ವಿವರ
ಬೆಂಗಳೂರು : ವೀರಪ್ಪನ್ನನ್ನು ಹಿಡಿಯಲು ವಿಶೇಷ ಕಾರ್ಯಪಡೆ ಕೈಗೊಂಡಿರುವ ಯೋಜನೆಗಳೇನು, ಅವರ ಕಾರ್ಯಾಚರಣೆ ತಂತ್ರಗಳೇನು, ಎಷ್ಟು ಆಯುಧಗಳಿವೆ, ಒಂದು ತುಕಡಿಯಲ್ಲಿ ಎಷ್ಟು ಮಂದಿ ಪೊಲೀಸರಿದ್ದಾರೆ ಎಂಬ ಅಂಶಗಳೂ ಇತ್ತೀಚೆಗೆ ದೊರೆತಿರುವ ವೀರಪ್ಪನ್ ಡಿಜಿಟಲ್ ಡೈರಿಯಲ್ಲಿ ದಾಖಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಗುಂಡಿನ ಕಾಳಗದ ಸಂದರ್ಭದಲ್ಲಿ ವೀರಪ್ಪನ್ ತಂಡದವರು ಬಿಟ್ಟು ಹೋದ ಈ ಪುಟ್ಟ ಡೈರಿಯಲ್ಲಿ ವಿಶೇಷ ಕಾರ್ಯಪಡೆಯ ಕೆಲವು ಅಧಿಕಾರಿಗಳ ವಿವರಗಳೂ ಇವೆ. ತತ್ಸಂಬಂಧವಾಗಿ ತನಿಖೆ ನಡೆಸಲು ಕೇರಳ ಪೊಲೀಸರ ತಂಡ ನಗರಕ್ಕೆ ಆಗಮಿಸಿದೆ ಎಂದು ಮೂಲಗಳನ್ನು ಉದ್ಧರಿಸಿ ವಿಜಯ ಕರ್ನಾಟಕ ದಿನಪತ್ರಿಕೆ ವರದಿ ಮಾಡಿದೆ.
ವೀರಪ್ಪನ್ ಹಾಗೂ ಆತನ ಜತೆಗಿರುವ ಉಗ್ರವಾದಿಗಳ ಜೊತೆ ನೇರ ಸಂಪರ್ಕ ಹೊಂದಿರುವ ಬೆಂಗಳೂರಿನ ಕೆಲವು ವ್ಯಕ್ತಿಗಳ ವಿಚಾರಣೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಹಾಲಿ ಕೇರಳ ಪೊಲೀಸರ ವಶದಲ್ಲಿರುವ ಡೈರಿಯಲ್ಲಿ ಎಸ್ಟಿಎಫ್ ಅಧಿಕಾರಿಗಳ ದೂರವಾಣಿ ಸಂಖ್ಯೆ, ಮನೆ ವಿಳಾಸವೇ ಮೊದಲಾದ ಮಾಹಿತಿಗಳಿವೆ. ಇದರಲ್ಲಿ ಕರ್ನಾಟಕದ ಕೆಲವು ಅಧಿಕಾರಿಗಳ ವಿವರಗಳೂ ಇವೆ ಎಂದು ಪತ್ರಿಕೆ ವರದಿ ಮಾಡಿದೆ.
ಕಾರ್ಯಾಚರಣೆಯ ಪೂರ್ಣ ವಿವರ : ಎಸ್.ಟಿ.ಎಫ್ ಅಧಿಕಾರಿಗಳು ಯಾವ ಸ್ಥಳದಲ್ಲಿ ಕ್ಯಾಂಪ್ ಮಾಡುತ್ತಾರೆ. ಯಾವ ತುಕಡಿಯಲ್ಲಿ ಎಷ್ಟು ಮಂದಿ ಸಿಬ್ಬಂದಿ ಇದ್ದಾರೆ. ಎಸ್ಟಿಎಫ್ ತುಕಡಿ ಬಳಿ ಎಷ್ಟು ಆಯುಧಗಳಿವೆ. ಯಾವ ಯಾವ ಸಲಕರಣೆಗಳು ಇವೆ ಎನ್ನುವ ವಿವರಗಳೂ ವೀರಪ್ಪನ್ ಡೈರಿಯಲ್ಲಿ ದಾಖಲಾಗಿದೆ.
ವೀರಪ್ಪನ್ ಸಹಚರರರಿಂದ ದೊರೆತಿರುವ ಅತ್ಯಮೂಲ್ಯ ಮಾಹಿತಿಗಳುಳ್ಳ ಈ ಡೈರಿಯನ್ನು ಕೇರಳ ಪೊಲೀಸರು ಕೇರಳ ನ್ಯಾಯಾಲಯದ ವಶಕ್ಕೆ ಇನ್ನು ಒಂದೆರಡು ದಿನಗಳಲ್ಲಿ ಒಪ್ಪಿಸಲಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳ ನಾಡು ಪೊಲೀಸರ ನಡುವೆ ಅಭಿಪ್ರಾಯ ಭೇದ ಉಂಟಾಗಿದೆ ಎಂದೂ ಪತ್ರಿಕೆ ಹೇಳಿದೆ.
ಅಕ್ಕಿ ಖರೀದಿ : ಈ ಮಧ್ಯೆ ವೀರಪ್ಪನ್ ಶಂಬುಂಬದಿಮಲೈ ಅರಣ್ಯ ವಲಯಕ್ಕೆ ಸ್ವಲ್ಪ ದೂರದಲ್ಲಿರುವ ಪರಪಲ್ಲದೈ ಗ್ರಾಮಕ್ಕೆ ಧಾವಿಸಿ ರೈತನೊಬ್ಬನಿಂದ 500 ರುಪಾಯಿ ನೀಡಿ 10 ಕೆ.ಜಿ. ಅಕ್ಕಿ ಖರೀದಿಸಿರುವ ಸುಳಿವೂ ದೊರೆತಿದೆ. ಈ ಗ್ರಾಮದ ಕೃಷಿಕ ಅಯ್ಯಪ್ಪನ್ ಅಂಗಡಿಯಿಂದ 10 ಕೆ.ಜಿ. ಅಕ್ಕಿ ಕೊಂಡು ತಂದು ವೀರಪ್ಪನ್ಗೆ ಕೊಟ್ಟಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆಂದೂ ವರದಿ ಹೇಳಿದೆ.
ಗುಹೆಗಳಲ್ಲಿ ಶೋಧ : ವೀರಪ್ಪನ್ ಇದೇ ಅರಣ್ಯ ವಲಯದ ಗುಹೆಗಳಲ್ಲಿ ಅಡಗಿರಬಹುದು ಎಂಬ ಸುಳಿವಿನ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಪಡೆ ಪೊಲೀಸರು ಸಣ್ಣ ಸಣ್ಣ ಗುಹೆಗಳಲ್ಲೂ ವೀರಪ್ಪನ್ಗಾಗಿ ಶೋಧ ನಡೆಸಿದ್ದಾರೆ. ಬಿಎಸ್ಎಫ್, ಎಸ್ಟಿಎಫ್ ಮತ್ತು ಸಶಸ್ತ್ರಪಡೆಯ ಸುಮಾರು 2000 ಸಿಬ್ಬಂದಿ ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ಈ ಪ್ರದೇಶ ಆದಿವಾಸಿಗಳ ವಿಚಾರಣೆಯೂ ನಡೆದಿದೆ.
ಈ ಅರಣ್ಯ ಪ್ರದೇಶ ಸುಮಾರು 90 ಕಿ.ಮೀಟರ್ ವಿಸ್ತೀರ್ಣವುಳ್ಳದ್ದಾಗಿರುವ ಕಾರಣ ವೀರಪ್ಪನ್ ತಪ್ಪಿಸಿಕೊಳ್ಳುವ ಸಾಧ್ಯತೆ ಇದ್ದು, ಎಲ್ಲ ಭೂ ಮಾರ್ಗಗಳಲ್ಲೂ ಬಿಗಿಬಂದೋಬಸ್ತ್ ಮಾಡಲಾಗಿದೆ. ವೀರಪ್ಪನ್ ಹಾಗೂ ಅವನ ಸಹಚರರರಾದ ಸೇತುಕುಳಿ ಗೋವಿಂದನ್, ಚಂದ್ರನ್ ಗೌಂಡರ್ ಅವರ ಭಾವಚಿತ್ರವಿರುವ ಪೋಸ್ಟರ್ಗಳನ್ನು ಈ ಪ್ರದೇಶದಲ್ಲಿ ಅಂಟಿಸಲಾಗಿದ್ದು, ಸುಳಿವು ನೀಡಿದವರಿಗೆ 40 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಪ್ರಕಟಿಸಲಾಗಿದೆ.
ವಾರ್ತಾಸಂಚಯ
ಮುಖಪುಟ / ವೀರಪ್ಪನ್ ಶಿಕಾರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications