ಮುಂದಿನ ಪರ್ಯಾಯ ಪೀಠಾಧೀಶರಾಗಿ ಶ್ರೀ ವಿದ್ಯಾಧೀಶ ತೀರ್ಥ
ಉಡುಪಿ : ಏಳುನೂರು ವರ್ಷಗಳಷ್ಟು ಹಳೆಯ ಉಡುಪಿ ಶ್ರೀ ಕೃಷ್ಣ ದೇವಾಲಯದ ಪರ್ಯಾಯ ಪೀಠದ ಮುಂದಿನ ಸ್ವಾಮಿಗಳಾಗಿ ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಬರುವ ವರ್ಷ ಜನವರಿ 18ರಂದು ಗದ್ದುಗೆ ಏರಲಿದ್ದಾರೆ. ಈ ನಿಮಿತ್ತ ಬುಧವಾರ ಬಾಳೆ ಮುಹೂರ್ತ ಮತ್ತು ಅಕ್ಕಿ ಮುಹೂರ್ತದಲ್ಲಿ ಪರ್ಯಾಯ ಪೂರ್ವ ಸಮಾರಂಭಗಳು ನಡೆದವು.
ಪ್ರಸ್ತುತ 33ನೇ ಪರ್ಯಾಯ ಪೀಠಾಧೀಶರಾಗಿರುವ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳ 2 ವರ್ಷದ ಅವಧಿ ಮುಂದಿನ ವರ್ಷ ಜನವರಿ 17ರಂದು ಮುಗಿಯಲಿದೆ. ಅದರ ಮರುದಿನ ಫಲಿಮಾರು ಮಠಾಧೀಶರನ್ನು ಪರ್ಯಾಯ ಮಠದ ಗದ್ದುಗೆ ಮೇಲೆ ಕೂರಿಸುವ ಮೂಲಕ 34ನೇ ಮಠಾಧೀಶರಾಗಿ ವಿಧ್ಯುಕ್ತವಾಗಿ ನಿಯೋಜಿಸಲಾಗುವುದು.
ಈ ನಿಮಿತ್ತ ಬುಧವಾರ ಫಲಿಮಾರು ಮಠಾಧೀಶರನ್ನು 51 ಮುಡಿಗಳಲ್ಲಿ 2000 ಕಿಲೋಗೂ ಹೆಚ್ಚು ಅಕ್ಕಿ ತುಂಬಿದ ಪಲ್ಲಕ್ಕಿಯಲ್ಲಿ ಕೂರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಇದಕ್ಕೂ ಮುನ್ನ ಫಲಿಮಾರು ಮಠದಲ್ಲಿ ಸಾಂಪ್ರದಾಯಿಕ ಪೂಜೆ ನಡೆಸಲಾಯಿತು. ಪೇಜಾವರ, ಅದಮಾರು, ಶಿರೂರು, ಕೃಷ್ಣಪುರ, ಕಾಣಯೂರು ಮಠಗಳೂ ಸೇರಿದಂತೆ ಅಷ್ಟ ಮಠಗಳ ಮಠಾಧೀಶರು ಮುಂದಿನ ಪರ್ಯಾಯ ಸ್ವಾಮೀಜಿಗಳಿಗೆ ಸಹಕಾರ ಸೂಚಿಸಿದರು.
ಫಲಿಮಾರು ಮಠ ಆಧ್ಯಾತ್ಮಿಕ ಕೃತಿಗಳ ಕಣಜ : ಕನ್ನಡ ಹಾಗೂ ಸಂಸ್ಕೃತ ಪಂಡಿತ ಹಾಗೂ ಕವಿ ಬನ್ನಂಜೆ ಗೋವಿಂದಾಚಾರ್ಯ ಸಮಾರಂಭದಲ್ಲಿ ಮಾತನಾಡಿ, ಅಷ್ಟಮಠಗಳ ಪೈಕಿ ಫಲಿಮಾರು ಮಠ ಆರ್ಥಿಕವಾಗಿ ಬಡವಾಗಿದೆ. ಆದರೆ ಆಧ್ಯಾತ್ಮಿಕವಾಗಿ ಅದು ಸಂಪದ್ಭರಿತವಾಗಿದ್ದು, ಮಾಧ್ವ ತತ್ತ್ವಗಳ ಸಾಕಷ್ಟು ಬರಹಗಳು ಅಲ್ಲಿ ಸಂರಕ್ಷಿತವಾಗಿವೆ. ಶ್ರೀ ಹರಿಕೇಶ ತೀರ್ಥ ಸ್ವಾಮೀಜಿ ವಿರಚಿತ ಅಪರೂಪದ ಹಾಗೂ ಬೆಲೆ ಬಾಳುವ ಸರ್ವ ಮೂಲ ಗ್ರಂಥದ ಮೂಲ ಪ್ರತಿ ಫಲಿಮಾರು ಮಠದಲ್ಲಿ ಸುರಕ್ಷಿತವಾಗಿದೆ ಎಂದು ಶ್ಲಾಘಿಸಿದರು.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications