ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನೀವು ಎಂದೋ ಆರಂಭಿಸಿದ ಯೋಜನೆ ಇವತ್ತು ನಿಮ್ಮ ಕೈಗೆ ಒಂದಿಷ್ಟು ಹಣತಂದಿಡಬಹುದು. ಮತ್ತೆ ಬಂಡವಾಳ ಹೂಡುವುದಕ್ಕೆ ತೊಂದರೆ ಇಲ್ಲ. ಆದರೆ ನಿಧಾನಿಸಬೇಡಿ. ಹಾಗೆಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವಸರ ಬೇಡ.ವೃಷಭ : ಬದಲಾವಣೆ ಬೇಕು ಅಂತ ಸುಖಾ ಸುಮ್ಮನೇ ಮನಸ್ಸು ಕಿರಿಕಿರಿ ಮಾಡಿಕೊಳ್ಳುತ್ತೀರಿ. ನಿಮ್ಮ ಸಹಾಯದ ಅಗತ್ಯವಿರುವವರನ್ನು ಬಿಟ್ಟು ಬೇರೆ ದಿಕ್ಕಿನತ್ತ ಮುಖ ಮಾಡಿ ಕುಳಿತರೆ ಲಾಭವಿಲ್ಲ. ಹಠಮಾರಿತನ ತೋರಿಸಲು ನೀವೇನು ಮಗುವೇ ?
ಮಿಥುನ : ಭಂಗಿ ಕುಡಿದವರಂತೆ ಒಮ್ಮೆಲೇ ಇದ್ದ ಬದ್ದ ಎಲ್ಲಾ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ಬೆದರಿಸುತ್ತಿರುವ ಆರೋಗ್ಯದತ್ತ ಗಮನವಿರಲಿ.
ಕಟಕ : ಆಟೋಟಗಳಲ್ಲಿ ಭಾಗವಹಿಸುತ್ತೀರಾ ? ಗುಡ್ ಡೇ. ಕಪ್ ಗೆದ್ದುಕೊಂಡೇ ಬರುತ್ತೀರಿ. ಮಾನಸಿಕವಾಗಿ ಬಳಲಿದ ಹಾಗೆ ಅನಿಸಬಹುದು. ಆದರೆ ಮನಸ್ತಾಪಗಳಿಂದಲೇ ದಿನ ಹಾಳು ಮಾಡಿಕೊಳ್ಳುತ್ತೀರಿ.
ಸಿಂಹ : ವಾದ ಮಾಡಬೇಕೆಂಬ ಅತ್ಯಾಸೆಯನ್ನು ಒತ್ತಿಟ್ಟುಕೊಳ್ಳಿ. ಸಮಯ ಪಕ್ವವಾಗಿಲ್ಲ. ನಿಮ್ಮ ಕ್ಷೇತ್ರದಲ್ಲಿ ನೀವು ಕಲಿಯಬೇಕಾದುದು ಇನ್ನೂ ತುಂಬಾ ಇದೆ ಎನ್ನುವುದನ್ನು ಆಗಾಗ ಮರೆಯುತ್ತೀರಲ್ಲ.
ಕನ್ಯಾ : ಗಲಾಟೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಪ್ರಸಂಗ ಬರಬಹುದು. ಒಂಟಿ ಪ್ರಯತ್ನ ಬೇಡ. ನಿಮ್ಮ ಗುಂಪಿನವರನ್ನು ಎದುರು ಹಾಕಿಕೊಂಡರೆ ಕೆಲಸ ಕೆಡುತ್ತದೆ.
ತುಲಾ : ರಾಶಿ ಕೆಲಸಗಳನ್ನು ಮಾಡಿ ಮುಗಿಸಬೇಕು ಎಂದುಕೊಂಡು ದಿನಗಳೇ ಕಳೆದುವು. ಇವತ್ತು ಅವುಗಳಿಗೆಲ್ಲಾ ಒಂದು ಗತಿ ಕಾಣಿಸಿ. ಉದಾಸೀನ ಗೆದ್ದರೆ ಇವತ್ತೆಲ್ಲಾ ಕೈತುಂಬಾ ಕೆಲಸ.
ವೃಶ್ಚಿಕ : ನಿಮ್ಮ ಮುಂದೆ ಒಂದು ಖುಷಿಯ ದಿನ ನಿಂತಿದೆ. ಮನೆಯ ಸಣ್ಣ ಪುಟ್ಟ ವಿರಸ, ನೋವು, ಮಕ್ಕಳು ಮರಿಗಳ ಹಿತವಾದ ಕಾಟದಿಂದ ನೀವೇ ಮನಸ್ಸನ್ನು ಘಾಸಿ ಮಾಡಿಕೊಳ್ಳದಿದ್ದರೆ ಆಯ್ತು.
ಧನಸ್ಸು : ನಿಮ್ಮ ಉದಾರತೆ ಆಫೀಸಿನಲ್ಲಿ ಜನಪ್ರಿಯತೆ ತಂದು ಕೊಡಬಹುದು. ಸಾಲ ಕೇಳಿದವರು ನಿಮ್ಮ ಕೈ ಸುಡುವುದಿಲ್ಲ . ಸಹೋದ್ಯೋಗಿಗಳು ನಿಮ್ಮನ್ನು ಒಳ್ಳೆಯ ಮನುಷ್ಯ ಎಂದುಕೊಳ್ಳುತ್ತಾರೆ.
ಮಕರ : ಹೊಸದಾಗಿ ಬರುವ ಯೋಚನೆಗಳು, ಐಡಿಯಾಗಳು ನಿಮ್ಮನ್ನು ಕಾಡುತ್ತಿರುತ್ತವೆ. ಹಾಗೆಂದು ಹೆಚ್ಚು ಆಯಾಸ ಮಾಡಿಕೊಳ್ಳಬೇಡಿ. ಆರೋಗ್ಯ ಜೋಪಾನ. ಆರೋಗ್ಯಕರ ಸ್ಪರ್ಧೆ ನಿಮ್ಮನ್ನು ಮುಂದೆ ನಡೆಸುತ್ತದೆ.
ಕುಂಭ : ಮೂಡ್ ಕೆಡಿಸಿಕೊಂಡರೆ ಯಾರು ಏನು ಮಾಡುವುದಕ್ಕಾಗುತ್ತದೆ ? ಅತಿಯಾಗಿ ಯೋಚನೆ ಮಾಡಬಾರದು. ಮುಂದಾಲೋಚನೆ ಮಿತಿ ದಾಟಿದರೆ ಮಾನಸಿಕವಾಗಿ ಬಳಲುತ್ತೀರಲ್ಲವಾ ? ಸುಮ್ಮನೇ ಇವತ್ತು ಸಂಜೆ ಗೆಳೆಯರ ಮನೆಗೆ ದಿಢೀರಿ ಭೇಟಿ ಯಾಕೆ ನೀಡಬಾರದು.
ಮೀನ : ಇವತ್ತು ಧನ ಲಾಭದ ನಿರೀಕ್ಷೆ ಇದೆ. ಹೊಸ ಗಾಳಿಗೆ ಮರುಳಾಗದಿದ್ದರೆ, ಮನೆಯಲ್ಲಿ ಶುಭಕಾರ್ಯವಿರಬಹುದು.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications